ಮೈಸೂರು ವಿಶ್ವವಿದ್ಯಾಲಕ್ಕೆ ಪ್ರೊ.ಎಸ್.ಎನ್.ಹೆಗ್ಡೆ, ಪ್ರೊ.ಜೆ.ಶಶಿಧರಪ್ರಸಾದ್ ಅವರು ಕುಲಪತಿಯಾಗಿದ್ದಾಗ ಪಂಚತಾರಾ ಮಾನ್ಯತೆ ದೊರಕಿತ್ತು (ಆಗ ಶ್ರೇಣಿ ವ್ಯವಸ್ಥೆ ಇರಲಿಲ್ಲ). ಆದರೆ, ಪ್ರೊ.ವಿ.ಜಿ.ತಳವಾರ್, ಪ್ರೊ.ಕೆ.ಎಸ್.ರಂಗಪ್ಪ ಅವಧಿಯಲ್ಲಿ ಬೋಧಕ ಸಿಬ್ಬಂದಿಯ ನೇಮಕಾತಿಗೆ ಅವಕಾಶ ಸಿಗದ ಕಾರಣ, ಸಂಖ್ಯೆ ಅತೀವ ಇಳಿಮುಖ ಕಂಡಿತು. ಅಂದಿಗೆ ಹೋಲಿಸಿದಲ್ಲಿ ಈಗ ವಿ.ವಿ.ಯಲ್ಲಿ ಕೇವಲ ಶೇ 49ರಷ್ಟು ಬೋಧಕ ಸಿಬ್ಬಂದಿ ಇದ್ದಾರೆ. ಬಹುತೇಕರು ನಿವೃತ್ತರಾಗಿದ್ದಾರೆ. ಇದು ‘ನ್ಯಾಕ್’ ಉನ್ನತ ಶ್ರೇಣಿ ಪಡೆಯಲು ದೊಡ್ಡ ತೊಡಕಾಗಿದೆ.