ಇವರು ಮಂಗಳವಾರ ಹೊಳೆನರಸೀಪುರದ ಸಂತೆಯಲ್ಲಿ 5 ಕುರಿಗಳನ್ನು (₹ 45 ಸಾವಿರ ಮೌಲ್ಯ) ಖರೀದಿಸಿ ತಂದು, ತಮ್ಮ ಮನೆಯ ಬಳಿ ಮೇಯಲು ಬಿಟ್ಟಿದ್ದರು. ಈ ವೇಳೆ ಅಕ್ಲಂ ಜಾಣತನದಿಂದ ಕುರಿಗಳನ್ನು ಕಳ್ಳತನ ಮಾಡಿ ಆಟೊವೊಂದರಲ್ಲಿ ಹಾಕಿಕೊಂಡು ಪರಾರಿಯಾಗಿದ್ದ. ನಂತರ, ಪಾಷಾ ಅವರು ಮೇಯಲು ಬಿಟ್ಟ ಸ್ಥಳಕ್ಕೆ ಬಂದು ನೋಡಿದಾಗ ಕುರಿಗಳು ಕಳವಾಗಿರುವುದು ತಿಳಿದು ಬಂದಿದೆ.