ಮೈಸೂರು: ಮೈಸೂರಿನ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮೈಸೂರಿನ ನಿರಾಶ್ರಿತರಿಗೆ ಪ್ರತಿ ದಿನ ಸುಮಾರು 4 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು 20 ದಿನಗಳವರೆಗೆ ಕಲ್ಪಿಸಲು ವ್ಯವಸ್ಥೆ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಲ್ಯಾಣಗಿರಿಯಲ್ಲಿರುವ ಕಲ್ಯಾಣ ಲಕ್ಷ್ಮೀ ವೆಂಕಟ ರಮಣ ದೇವಸ್ಥಾನದಲ್ಲಿ ಚಾಲನೆ ನೀಡಿದರು. ಸಂಸದ ಪ್ರತಾಪಸಿಂಹ, ಆಶ್ರಮದ ಕಾರ್ಯದರ್ಶಿ ಪ್ರಸಾದ್ ಇದ್ದರು