ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಗಳ್ಳಿಯಲ್ಲಿ ಏಕಾಏಕಿ ಏಳು ಜಾನುವಾರು ಸಾವು

Last Updated 16 ಫೆಬ್ರುವರಿ 2021, 2:14 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿ ದೇವಗಳ್ಳಿ ಗ್ರಾಮದ ರೈತ ಅನಿಲ್ ಗೌಡ ಅವರಿಗೆ ಸೇರಿದ ತೋಟದಲ್ಲಿ ಏಕಾಏಕಿ 7 ಜಾನುವಾರು ಸಾವನ್ನಪ್ಪಿದೆ.

‘ತೋಟದ ಕೊಟ್ಟಿಗೆಯಲ್ಲಿ ಕಟ್ಟಿದ್ದ ರಾಸುಗಳು ಒಮ್ಮೆಲೆ ಒದ್ದಾಡುವುದನ್ನು ಗಮನಿಸಿ ಕೊರಳಿಗೆ ಕಟ್ಟಿದ್ದ ಹಗ್ಗ ಕತ್ತರಿಸಿ ಬಿಟ್ಟಿದ್ದಾರೆ. ಆಗ 6 ಹಸು, ಒಂದು ಎಮ್ಮೆ ತೋಟದಲ್ಲಿ ಓಡಾಡುತ್ತಾ ಒಂದೊಂದು ಸ್ಥಳದಲ್ಲಿ ಒಂದೊಂದು ಒದ್ದಾಡಿ ಸಾವನ್ನಪ್ಪಿದವು’ ಎಂದು ರೈತ ಅನಿಲ್ ಗೌಡ ಕಣ್ಣೀರು ಹಾಕಿದರು.

‘ಸ್ಥಳಕ್ಕೆ ಬಿಳಿಕೆರೆ ಪಶುವೈದ್ಯಾಧಿಕಾರಿ ಬಂದು ಮರಣೋತ್ತರ ಪರೀಕ್ಷೆ ನಡೆಸಿ ದ್ದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲಾಗುವುದು’ ಎಂದು ತಿಳಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT