ಈ ಪ್ರಾಚೀನ ಗುಡ್ಡವನ್ನು ರಕ್ಷಿಸಲು ಸರ್ಕಾರದಿಂದಾಗಲಿ, ಸಾರ್ವಜನಿಕರಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಮುಂದಾಗಿಲ್ಲ. ಪ್ರಾಚೀನ ಗುಡ್ಡವನ್ನು ರಕ್ಷಿಸಿದರೆ, ಪರಿಸರವೂ ಉಳಿದು ದನ– ಕರುಗಳಿಗೆ ಮೇವು, ಹೊಸಪೀಳಿಗೆಗೆ ಗುಡ್ಡದ ಮಹತ್ವ ಅರಿಯಲು ಸಹಾಯವಾಗುವುದು. ಇದರೊಂದಿಗೆ ಗುಡ್ಡದಲ್ಲಿ ಆಧ್ಯಾತ್ಮಿಕ ಕೇಂದ್ರ ತೆರೆಯುವಂತೆ ಗ್ರಾಮಸ್ಥರಾದ ಶ್ರೀನಿವಾಸರಾವ್ ಗೋವಿಂದು, ವಿಜಯಭಾಸ್ಕರ್, ಯಜಮಾನ್ ನರಸಿಂಹಣ್ಣ, ರಂಗಸ್ವಾಮಿ, ಪ್ರಮೋದ್, ನಾಗರಾಜ್ ಹಾಗೂ ಹಳೇಬೀಡು ಮಾದೇಶ್ ಅವರ ಅಭಿಪ್ರಾಯವಾಗಿದೆ.