<p><strong>ಮೈಸೂರು:</strong> ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸ್ವರೂಪ ಈ ಬಾರಿ ಬದಲಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಸಿದ್ಧತೆ ಹೇಗಿರಬೇಕು ಎಂಬ ಕುರಿತು ನೃಪತುಂಗ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ 3 ದಿನಗಳ ಕಮ್ಮಟಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಪಾಂಡುರಂಗ ಬುಧವಾರ ಚಾಲನೆ ನೀಡಿದರು.</p>.<p>ನಂತರ ಮಾತನಾಡಿದ ಅವರು, ‘ಈ ಬಾರಿ ಪ್ರಶ್ನೆಪತ್ರಿಕೆಯ ಸ್ವರೂಪ ಬದಲಾಗಿದೆ ಎಂಬ ಭಯವನ್ನು ಮೊದಲು ವಿದ್ಯಾರ್ಥಿಗಳು ಬಿಡಬೇಕು. ಭಯವೇ ಯಶಸ್ಸಿನ ಮೊದಲ ಶತ್ರು’ ಎಂದು ವ್ಯಾಖ್ಯಾನಿಸಿದರು.</p>.<p>ಶಿಕ್ಷಕರು ಹೇಳಿದಂತೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡರೆ ಖಂಡಿತಾ ಯಶಸ್ಸು ಸಾಧಿಸಬಹುದು. ಭಯ ಬಿಟ್ಟು ಹರ್ಷದಿಂದ ಪರೀಕ್ಷೆ ಬರೆಯಬೇಕು ಎಂದು ಹೇಳಿದರು.</p>.<p>ಪರೀಕ್ಷೆಯನ್ನು ಹಬ್ಬದಂತೆ ವಿದ್ಯಾರ್ಥಿಗಳು ಪರಿಭಾವಿಸಬೇಕು. ಸಂಭ್ರಮ, ಉಲ್ಲಾಸದಿಂದ ಪರೀಕ್ಷೆ ಬರೆದಾಗ ಉತ್ತಮ ಅಂಕಗಳು ಬರುತ್ತವೆ ಎಂದರು.</p>.<p>ಇದಕ್ಕೂ ಮುನ್ನ ಮಾತನಾಡಿದ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಖಜಾಂಚಿ ನಾ.ನಾಗಚಂದ್ರ, ‘ಶಾಲೆಯಲ್ಲಿ 26 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಬದಲಾಗಿರುವ ಪ್ರಶ್ನೆಪತ್ರಿಕೆಗಳ ಸ್ವರೂಪ, ಅದನ್ನು ಹೇಗೆ ಎದುರಿಸಬೇಕು, ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಲು ಈ ಕಮ್ಮಟ ಆಯೋಜಿಸಲಾಗಿದೆ. ಇದರಲ್ಲಿ ಹೊರಗಿನ ಶಾಲೆಯ ಆಸಕ್ತ ಮಕ್ಕಳೂ ಭಾಗವಹಿಸಬಹುದು’ ಎಂದು ತಿಳಿಸಿದರು.</p>.<p>ಬುಧವಾರ ಕೇರ್ಗಳ್ಳಿಯ ಸರ್ಕಾರಿ ಪ್ರೌಢಶಾಲೆಯ ರವೀಶ್ಕುಮಾರ್ ಕನ್ನಡ ವಿಷಯವಾಗಿ, ಕುವೆಂಪುನಗರದ ಬಸವರಾಜು ಸಮಾಜ ವಿಜ್ಞಾನ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.</p>.<p>ಫೆ. 6ರಂದು ಗೋಪಾಲಪುರ ಪ್ರೌಢಶಾಲೆಯ ಆಶಾ (ಇಂಗ್ಲಿಷ್), ಪಡುವಾರಹಳ್ಳಿಯ ಮಹೇಶ್ (ಗಣಿತ), ಫೆ. 7ರಂದು ಒಂಟಿಕೊಪ್ಪಲು ಪ್ರೌಢಶಾಲೆಯ ಡಾ.ವಿಜಿ (ಹಿಂದಿ), ದೇವಲಾಪುರದ ಬಸವರಾಜು, ಎನ್.ಲತಾ (ವಿಜ್ಞಾನ) ಉಪನ್ಯಾಸ ನೀಡುವರು. ಮೂರೂ ದಿನಗಳೂ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಕಮ್ಮಟ ನಡೆಯಲಿದೆ.</p>.<p>ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್, ಕಾರ್ಯದರ್ಶಿ ಸ.ರ.ಸುದರ್ಶನ, ಶಾಲೆಯ ಮುಖ್ಯ ಶಿಕ್ಷಕ ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿ ರಮೇಶ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸ್ವರೂಪ ಈ ಬಾರಿ ಬದಲಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಸಿದ್ಧತೆ ಹೇಗಿರಬೇಕು ಎಂಬ ಕುರಿತು ನೃಪತುಂಗ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ 3 ದಿನಗಳ ಕಮ್ಮಟಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಪಾಂಡುರಂಗ ಬುಧವಾರ ಚಾಲನೆ ನೀಡಿದರು.</p>.<p>ನಂತರ ಮಾತನಾಡಿದ ಅವರು, ‘ಈ ಬಾರಿ ಪ್ರಶ್ನೆಪತ್ರಿಕೆಯ ಸ್ವರೂಪ ಬದಲಾಗಿದೆ ಎಂಬ ಭಯವನ್ನು ಮೊದಲು ವಿದ್ಯಾರ್ಥಿಗಳು ಬಿಡಬೇಕು. ಭಯವೇ ಯಶಸ್ಸಿನ ಮೊದಲ ಶತ್ರು’ ಎಂದು ವ್ಯಾಖ್ಯಾನಿಸಿದರು.</p>.<p>ಶಿಕ್ಷಕರು ಹೇಳಿದಂತೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡರೆ ಖಂಡಿತಾ ಯಶಸ್ಸು ಸಾಧಿಸಬಹುದು. ಭಯ ಬಿಟ್ಟು ಹರ್ಷದಿಂದ ಪರೀಕ್ಷೆ ಬರೆಯಬೇಕು ಎಂದು ಹೇಳಿದರು.</p>.<p>ಪರೀಕ್ಷೆಯನ್ನು ಹಬ್ಬದಂತೆ ವಿದ್ಯಾರ್ಥಿಗಳು ಪರಿಭಾವಿಸಬೇಕು. ಸಂಭ್ರಮ, ಉಲ್ಲಾಸದಿಂದ ಪರೀಕ್ಷೆ ಬರೆದಾಗ ಉತ್ತಮ ಅಂಕಗಳು ಬರುತ್ತವೆ ಎಂದರು.</p>.<p>ಇದಕ್ಕೂ ಮುನ್ನ ಮಾತನಾಡಿದ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಖಜಾಂಚಿ ನಾ.ನಾಗಚಂದ್ರ, ‘ಶಾಲೆಯಲ್ಲಿ 26 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಬದಲಾಗಿರುವ ಪ್ರಶ್ನೆಪತ್ರಿಕೆಗಳ ಸ್ವರೂಪ, ಅದನ್ನು ಹೇಗೆ ಎದುರಿಸಬೇಕು, ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಲು ಈ ಕಮ್ಮಟ ಆಯೋಜಿಸಲಾಗಿದೆ. ಇದರಲ್ಲಿ ಹೊರಗಿನ ಶಾಲೆಯ ಆಸಕ್ತ ಮಕ್ಕಳೂ ಭಾಗವಹಿಸಬಹುದು’ ಎಂದು ತಿಳಿಸಿದರು.</p>.<p>ಬುಧವಾರ ಕೇರ್ಗಳ್ಳಿಯ ಸರ್ಕಾರಿ ಪ್ರೌಢಶಾಲೆಯ ರವೀಶ್ಕುಮಾರ್ ಕನ್ನಡ ವಿಷಯವಾಗಿ, ಕುವೆಂಪುನಗರದ ಬಸವರಾಜು ಸಮಾಜ ವಿಜ್ಞಾನ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.</p>.<p>ಫೆ. 6ರಂದು ಗೋಪಾಲಪುರ ಪ್ರೌಢಶಾಲೆಯ ಆಶಾ (ಇಂಗ್ಲಿಷ್), ಪಡುವಾರಹಳ್ಳಿಯ ಮಹೇಶ್ (ಗಣಿತ), ಫೆ. 7ರಂದು ಒಂಟಿಕೊಪ್ಪಲು ಪ್ರೌಢಶಾಲೆಯ ಡಾ.ವಿಜಿ (ಹಿಂದಿ), ದೇವಲಾಪುರದ ಬಸವರಾಜು, ಎನ್.ಲತಾ (ವಿಜ್ಞಾನ) ಉಪನ್ಯಾಸ ನೀಡುವರು. ಮೂರೂ ದಿನಗಳೂ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಕಮ್ಮಟ ನಡೆಯಲಿದೆ.</p>.<p>ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್, ಕಾರ್ಯದರ್ಶಿ ಸ.ರ.ಸುದರ್ಶನ, ಶಾಲೆಯ ಮುಖ್ಯ ಶಿಕ್ಷಕ ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿ ರಮೇಶ್ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>