‘ಪ್ರತಿ ಟನ್ ಕಬ್ಬಿನ ಉತ್ಪಾದನಾ ವೆಚ್ಚ ₹ 3200 ಆಗಲಿದೆ. ಇದನ್ನು ಪರಿಗಣಿಸದೆ, ಕಬ್ಬಿಗೆ ನ್ಯಾಯೋಚಿತ ಬೆಲೆ ನಿಗದಿ ಮಾಡಿರುವುದು ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ದರವನ್ನು ಪುನರ್ ಪರಿಶೀಲಿಸಿ, ಎಸ್ಎಪಿ ಕಾಯ್ದೆಯಡಿ ಹೆಚ್ಚುವರಿ ಬೆಲೆ ನಿಗದಿ ಪಡಿಸಿ, ಕಬ್ಬಿನ ಬೆಳೆಗಾರರನ್ನು ರಕ್ಷಿಸಬೇಕು’ ಎಂದು ಕುರಬೂರು ಆಗ್ರಹಿಸಿದ್ದಾರೆ.