‘ಒಂದೇ ಧರ್ಮ ನಮ್ಮನ್ನು ಆಳುವಂತಾದರೆ ಅದು ಶೋಚನೀಯ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಇಂದು ವಿವೇಕರನ್ನು ಆರ್ಎಸ್ಎಸ್, ಬಿಜೆಪಿ ಮರೆತಿದೆ. ಎಲ್ಲ ಧರ್ಮಗಳಲ್ಲೂ ನೀತಿಪಾಠಗಳಿವೆ. ಗೀತೆಯನ್ನು ಮಾತ್ರ ಪರಿಚಯಿಸಿದರೆ ಅದು ಸಲ್ಲ. ಈ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಿ.ಟಿ.ರವಿ ಸೇರಿದಂತೆ ಬಿಜೆಪಿ ಮುಖಂಡರನ್ನು ಮುಕ್ತ ಸಂವಾದಕ್ಕೆ ಆಹ್ವಾನಿಸುತ್ತೇನೆ’ ಎಂದು ಗುರುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.