<p><strong>ಮೈಸೂರು</strong>: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಮಂಗಳೂರು ಸೌತೆ ಕೆ.ಜಿಗೆ ₹ 1 ಇದ್ದರೆ, ಸಿಹಿಕುಂಬಳ ₹ 2, ಬದನೆ ಹಾಗೂ ಎಲೆಕೋಸು ₹ 3, ಪಡುವಲಕಾಯಿ ₹ 4 ಹಾಗೂ ಟೊಮೆಟೊ ₹ 5ಕ್ಕೆ ಕನಿಷ್ಠ ಧಾರಣೆ ಇದ್ದು, ಬೆಳೆಗಾರರು ತೀವ್ರವಾಗಿ ನಷ್ಟ ಅನುಭವಿಸುವಂತಾಗಿದೆ.</p>.<p>ಸೋಮವಾರ ಒಟ್ಟು 3,278 ಕ್ವಿಂಟಲ್ನಷ್ಟು ತರಕಾರಿಗಳು ಆವಕವಾಗಿದ್ದವು. ಇವುಗಳಲ್ಲಿ 985 ಕ್ವಿಂಟಲ್ನಷ್ಟು ಟೊಮೆಟೊ ಇದ್ದರೆ, ಸಿಹಿಗುಂಬಳ 720 ಕ್ವಿಂಟಲ್, ಎಲೆಕೋಸು 320 ಕ್ವಿಂಟಲ್, ಮಂಗಳೂರು ಸೌತೆ 118 ಕ್ವಿಂಟಲ್ನಷ್ಟು ಇತ್ತು. ಆವಕ ಹೆಚ್ಚಾಗಿ, ಬೇಡಿಕೆ ಕಡಿಮೆಯಾದ್ದರಿಂದ ಬೆಲೆಗಳಲ್ಲಿ ಇಳಿಕೆಯಾಗಿದೆ. </p>.<p>ತಮಿಳುನಾಡಿನಿಂದ ಹೆಚ್ಚಾಗಿ ಕ್ಯಾರೆಟ್ ಬಂದಿದ್ದರಿಂದ (115 ಕ್ವಿಂಟಲ್) ಇದರ ದರ ಕೆ.ಜಿಗೆ ₹ 15ಕ್ಕೆ ಇಳಿಕೆಯಾಗಿತ್ತು.</p>.<p>ಬೀನ್ಸ್ಗೆ ಮಾತ್ರ ಹೆಚ್ಚಿನ ಬೆಲೆ ಇದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. 65 ಕ್ವಿಂಟಲ್ನಷ್ಟು ಬಂದಿದ್ದ ಬೀನ್ಸ್ನ ಕನಿಷ್ಠ ಧಾರಣೆ ₹ 40 ಇದ್ದರೆ, ಗರಿಷ್ಠ ಧಾರಣೆ ₹ 42 ಇತ್ತು. ಇದರ ಆವಕ ಕಡಿಮೆಯಾಗಿರುವುದರಿಂದ ಸಹಜವಾಗಿಯೇ ಬೆಲೆಯೂ ಹೆಚ್ಚಾಗಿದೆ.</p>.<p>ಉಳಿದಂತೆ, ಹೂಕೋಸು ಕೆ.ಜಿಗೆ ₹ 10, ಹಸಿರುಮೆಣಸಿನಕಾಯಿ ₹ 15, ಬೆಂಡೆಕಾಯಿ ₹ 17, ಬೀಟ್ರೂಟ್ ₹ 7, ಹೀರೆಕಾಯಿ ₹ 20, ದಪ್ಪಮೆಣಸಿನಕಾಯಿ ₹ 17 ಇತ್ತು.</p>.<p>ಈರುಳ್ಳಿಯ ಆವಕ ಹೊರರಾಜ್ಯ ಮತ್ತು ಉತ್ತರ ಕರ್ನಾಟಕದ ಕಡೆಯಿಂದ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಬೇಡಿಕೆಯಲ್ಲಿ ಯಾವುದೇ ಹೆಚ್ಚಳವಾಗುತ್ತಿಲ್ಲ. ಹೀಗಾಗಿ, ದರವು ಕುಸಿತ ಕಂಡಿದೆ. ಶನಿವಾರ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ 2,282 ಕ್ವಿಂಟಲ್ನಷ್ಟು ಈರುಳ್ಳಿ ಬಂದಿತ್ತು. ಇದರ ದರ ಕೆ.ಜಿಗೆ ₹ 12 ಇತ್ತು.</p>.<p>ಮಾವಿನ ಆವಕ ಮಾರುಕಟ್ಟೆಗೆ ನಿಧಾನವಾಗಿ ಹೆಚ್ಚಾಗುತ್ತಿದ್ದು, ಬೆಲೆಯು ಏರುಗತಿಯಲ್ಲೇ ಇದೆ. ಉತ್ತಮ ಗುಣಮಟ್ಟದ ರಸಪೂರಿ ಕೆ.ಜಿಗೆ ₹ 60 ಇದ್ದರೆ, ಬಾದಾಮಿ ₹ 80 ಹಾಗೂ ಸೆಂದೂರ ₹ 40 ಇದೆ. ಇನ್ನು ಮುಂದೆ ಮಾವಿನ ಆವಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ದರ ಇಳಿಯುವ ವಿಶ್ವಾಸ ಇದೆ ಎಂದು ಹಣ್ಣಿನ ವ್ಯಾಪಾರಿ ಸೋಮಶೇಖರ ತಿಳಿಸಿದರು.</p>.<p>ಕೋಳಿಮೊಟ್ಟೆ ದರವು ಈ ವಾರವೂ ಚೇತರಿಕೆ ಪಡೆಯಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.41ರಲ್ಲಿ ಸೋಮವಾರ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಮಂಗಳೂರು ಸೌತೆ ಕೆ.ಜಿಗೆ ₹ 1 ಇದ್ದರೆ, ಸಿಹಿಕುಂಬಳ ₹ 2, ಬದನೆ ಹಾಗೂ ಎಲೆಕೋಸು ₹ 3, ಪಡುವಲಕಾಯಿ ₹ 4 ಹಾಗೂ ಟೊಮೆಟೊ ₹ 5ಕ್ಕೆ ಕನಿಷ್ಠ ಧಾರಣೆ ಇದ್ದು, ಬೆಳೆಗಾರರು ತೀವ್ರವಾಗಿ ನಷ್ಟ ಅನುಭವಿಸುವಂತಾಗಿದೆ.</p>.<p>ಸೋಮವಾರ ಒಟ್ಟು 3,278 ಕ್ವಿಂಟಲ್ನಷ್ಟು ತರಕಾರಿಗಳು ಆವಕವಾಗಿದ್ದವು. ಇವುಗಳಲ್ಲಿ 985 ಕ್ವಿಂಟಲ್ನಷ್ಟು ಟೊಮೆಟೊ ಇದ್ದರೆ, ಸಿಹಿಗುಂಬಳ 720 ಕ್ವಿಂಟಲ್, ಎಲೆಕೋಸು 320 ಕ್ವಿಂಟಲ್, ಮಂಗಳೂರು ಸೌತೆ 118 ಕ್ವಿಂಟಲ್ನಷ್ಟು ಇತ್ತು. ಆವಕ ಹೆಚ್ಚಾಗಿ, ಬೇಡಿಕೆ ಕಡಿಮೆಯಾದ್ದರಿಂದ ಬೆಲೆಗಳಲ್ಲಿ ಇಳಿಕೆಯಾಗಿದೆ. </p>.<p>ತಮಿಳುನಾಡಿನಿಂದ ಹೆಚ್ಚಾಗಿ ಕ್ಯಾರೆಟ್ ಬಂದಿದ್ದರಿಂದ (115 ಕ್ವಿಂಟಲ್) ಇದರ ದರ ಕೆ.ಜಿಗೆ ₹ 15ಕ್ಕೆ ಇಳಿಕೆಯಾಗಿತ್ತು.</p>.<p>ಬೀನ್ಸ್ಗೆ ಮಾತ್ರ ಹೆಚ್ಚಿನ ಬೆಲೆ ಇದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. 65 ಕ್ವಿಂಟಲ್ನಷ್ಟು ಬಂದಿದ್ದ ಬೀನ್ಸ್ನ ಕನಿಷ್ಠ ಧಾರಣೆ ₹ 40 ಇದ್ದರೆ, ಗರಿಷ್ಠ ಧಾರಣೆ ₹ 42 ಇತ್ತು. ಇದರ ಆವಕ ಕಡಿಮೆಯಾಗಿರುವುದರಿಂದ ಸಹಜವಾಗಿಯೇ ಬೆಲೆಯೂ ಹೆಚ್ಚಾಗಿದೆ.</p>.<p>ಉಳಿದಂತೆ, ಹೂಕೋಸು ಕೆ.ಜಿಗೆ ₹ 10, ಹಸಿರುಮೆಣಸಿನಕಾಯಿ ₹ 15, ಬೆಂಡೆಕಾಯಿ ₹ 17, ಬೀಟ್ರೂಟ್ ₹ 7, ಹೀರೆಕಾಯಿ ₹ 20, ದಪ್ಪಮೆಣಸಿನಕಾಯಿ ₹ 17 ಇತ್ತು.</p>.<p>ಈರುಳ್ಳಿಯ ಆವಕ ಹೊರರಾಜ್ಯ ಮತ್ತು ಉತ್ತರ ಕರ್ನಾಟಕದ ಕಡೆಯಿಂದ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಬೇಡಿಕೆಯಲ್ಲಿ ಯಾವುದೇ ಹೆಚ್ಚಳವಾಗುತ್ತಿಲ್ಲ. ಹೀಗಾಗಿ, ದರವು ಕುಸಿತ ಕಂಡಿದೆ. ಶನಿವಾರ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ 2,282 ಕ್ವಿಂಟಲ್ನಷ್ಟು ಈರುಳ್ಳಿ ಬಂದಿತ್ತು. ಇದರ ದರ ಕೆ.ಜಿಗೆ ₹ 12 ಇತ್ತು.</p>.<p>ಮಾವಿನ ಆವಕ ಮಾರುಕಟ್ಟೆಗೆ ನಿಧಾನವಾಗಿ ಹೆಚ್ಚಾಗುತ್ತಿದ್ದು, ಬೆಲೆಯು ಏರುಗತಿಯಲ್ಲೇ ಇದೆ. ಉತ್ತಮ ಗುಣಮಟ್ಟದ ರಸಪೂರಿ ಕೆ.ಜಿಗೆ ₹ 60 ಇದ್ದರೆ, ಬಾದಾಮಿ ₹ 80 ಹಾಗೂ ಸೆಂದೂರ ₹ 40 ಇದೆ. ಇನ್ನು ಮುಂದೆ ಮಾವಿನ ಆವಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ದರ ಇಳಿಯುವ ವಿಶ್ವಾಸ ಇದೆ ಎಂದು ಹಣ್ಣಿನ ವ್ಯಾಪಾರಿ ಸೋಮಶೇಖರ ತಿಳಿಸಿದರು.</p>.<p>ಕೋಳಿಮೊಟ್ಟೆ ದರವು ಈ ವಾರವೂ ಚೇತರಿಕೆ ಪಡೆಯಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.41ರಲ್ಲಿ ಸೋಮವಾರ ಇತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>