ಮೈಸೂರು: ಮಧ್ಯಂತರ ಚುನಾವಣೆ ಕುರಿತು ದೇವೇಗೌಡ ನೀಡಿರುವ ಹೇಳಿಕೆಯನ್ನು ಶಾಸಕ ಎಚ್.ವಿಶ್ವನಾಥ್ ಸಮರ್ಥಿಸಿಕೊಂಡಿದ್ದಾರೆ.
‘ದೇವೇಗೌಡರು ರಾಜಕೀಯ ಮುತ್ಸದ್ದಿ. ರಾಜಕಾರಣದ ಒಳ ಹೊರಗುಗಳನ್ನು ಅಪಾರವಾಗಿ ಬಲ್ಲ ಅನುಭವಿ. ಅವರು ಹೇಳುವುದರಲ್ಲಿ ಸತ್ಯವೂ ಇರುತ್ತದೆ’ ಎಂದು ತಿಳಿಸಿದರು.
‘ಮಧ್ಯಂತರ ಚುನಾವಣೆ ಬಗ್ಗೆ ಸುಲಭವಾಗಿ ತೀರ್ಮಾನ ತೆಗೆದುಕೊಳ್ಳಲು ಆಗದು. ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಸಮ್ಮಿಶ್ರ ಸರ್ಕಾರ ಚೆನ್ನಾಗಿ ನಡೀತಾ ಇದೆ. ಸರ್ಕಾರವನ್ನು ಬೀಳಿಸುವುದು ಸುಲಭವಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಪರಸ್ಪರ ಅಪಘಾತ ಮಾಡಿಕೊಂಡರೆ ಮುಂದೆ ಏನಾಗುವುದೋ ಗೊತ್ತಿಲ್ಲ’ ಎಂದರು.