<p><strong>ನಂಜನಗೂಡು: </strong>ತಾಲ್ಲೂಕಿನ ಚಾಮಲಾಪುರದ ಹುಂಡಿ, ಗೋಳೂರು, ಹೆಮ್ಮರಗಾಲ, ಹಗಿನವಾಳು ಮುಂತಾದ ಗ್ರಾಮಗಳಿಗೆ ಗುರುವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಕೆ.ಎಂ.ಮೇತ್ರಿ ನೇತೃತ್ವದ ತಂಡ ಭೇಟಿ ನೀಡಿ ಉಪ್ಪಾರ ಸಮುದಾಯದ ಸ್ಥಿತಿಗತಿಗಳ ಅಧ್ಯಯನ ನಡೆಸಿತು.</p>.<p>ಚಾಮಲಾಪುರದ ಹುಂಡಿಯ ಮಾರಮ್ಮನ ದೇವಸ್ಥಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ.ಮೇತ್ರಿ ಅವರು, ‘ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ವತಿಯಿಂದ 5 ಮಂದಿಯ ತಂಡದೊಂದಿಗೆ ತಾಲ್ಲೂಕಿನ 53 ಗ್ರಾಮಗಳಲ್ಲಿ ಉಪ್ಪಾರ ಸಮುದಾಯದ ಸ್ಥಿತಿಗತಿಗಳ ಅಧ್ಯಯನ ನಡೆಸಲಾಗುತ್ತಿದೆ. ಇದುವರೆಗೆ ನಡೆಸಿದ ಸಮೀಕ್ಷೆಯಲ್ಲಿ ಉಪ್ಪಾರ ಜನಾಂಗ ಬುಡಕಟ್ಟು ಪದ್ಧತಿಯನ್ನು ಅಳವಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ’ ಎಂದು ಹೇಳಿದರು.</p>.<p>‘ಚಿಕ್ಕಮ್ಮ, ಚಿಕ್ಕದೇವಿ, ಸಿದ್ದಪ್ಪಾಜಿ, ರವಣಮ್ಮ ದೇವಿಗಳ ಆರಾಧಕರಾದ ಸಮಾಜ, ಬುಡಕಟ್ಟು ಜನರಂತೆ ಪ್ರಕೃತಿಯ ಬೇವಿನ ಮರ, ಭಂಡಾರಗಳ ಪೂಜೆಯನ್ನು ನಡೆಸುತ್ತ ಬಂದಿದ್ದಾರೆ. ಬ್ರಾಹ್ಮಣರ ಪ್ರಭಾವಕ್ಕೆ ಒಳಗಾಗಿ ದಾಸ ಕುಲ, ವೆಂಕಟೇಶ್ವರನ ಆರಾಧಕರು ಆದವರು ಇದ್ದಾರೆ. ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಮೊಬೈಲ್ ಆ್ಯಪ್ ಮೂಲಕ 2 ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿದ್ದು, ಕುಟುಂಬದ ಹಿರಿಯರಿಂದ ಮಾಹಿತಿ ಪಡೆದು, ಸಮಾಜದ ಪದ್ಧತಿ, ಆಚರಣೆ, ಕುಟುಂಬ ಜೀವನಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ನೀಡಿದರೆ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.</p>.<p>ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ‘ನಮ್ಮ ಪೂರ್ವಿಕರು ನಲ್ಲರಾಯರನ್ನು ಕುಲಗುರುಗಳಾಗಿ ಸ್ವೀಕರಿಸಿದವರು. ಪರಿಶಿಷ್ಟ ಜಾತಿಯವರಿಗೂ ನಲ್ಲರಾಯರೇ ಕುಲಗುರುಗಳು. ಪರಿಶಿಷ್ಟರಂತೆ ನಮ್ಮಲ್ಲೂ ಸಹ 9 ಬಣ್ಣಗಳ ಕುಲವಿದೆ, ಅವರಂತೆ ನಮ್ಮಲ್ಲಿ ನಾಗ, ಬೆಳ್ಳಿ, ಬೀಗದ ಕುಲ ಎಂಬ ಗುಂಪುಗಳಿವೆ. ಒಂದು ಕುಲಕ್ಕೆ ಸೇರಿದವರು ಬೇರೆ ಕುಲಕ್ಕೆ ಹೆಣ್ಣು ಕೊಡುವ- ತರುವ ಪದ್ಧತಿ ಇಲ್ಲ. ಹೆಣ್ಣು ಮಕ್ಕಳು ಋತುಮತಿಯಾದ ತಕ್ಷಣ ಮದುವೆ ಮಾಡುವ ಪದ್ಧತಿಯಿದೆ. ಪ್ರಾಣಿ ಬಲಿ, ದೇವರ ಗುಡ್ಡನನ್ನು ಬಿಡುವುದು ಹಾಗೂ ಮದುವೆ ಸಂಪ್ರದಾಯಗಳಲ್ಲಿ ಸಾಮ್ಯತೆ ಇದೆ’ ಎಂದರು.</p>.<p>‘ಜನಾಂಗದವರು ಮೀನು ಹಿಡಿಯುವ, ಕಲ್ಲು ಒಡೆಯುವ, ಮರಗೆಲಸ, ಕಟ್ಟಡ ನಿರ್ಮಾಣ ಕೆಲಸದಂತಹ ಕೆಲಸದಲ್ಲಿ ಸಮಾಜದವರು ತೊಡಗಿದ್ದಾರೆ. ಈ ಹಿಂದೆ ನಮ್ಮ ಸಮಾಜ ಅಲೆಮಾರಿ ಜನಾಂಗವಾಗಿದ್ದ ಬಗ್ಗೆ ಕುರುಹುಗಳಿವೆ. ಅದ್ದರಿಂದ ಸಮಗ್ರ ಅಧ್ಯಯನ ನಡೆಸಿ ಉಪ್ಪಾರ ಸಮಾಜವನ್ನು ಬುಡಕಟ್ಟು ಜನಾಂಗ ಅಥವಾ ಪರಿಶಿಷ್ಟ ಜಾತಿ- ಪಂಗಡವಾಗಿ ಪರಿಗಣಿಸಿ ಮೀಸಲಾತಿ ನೀಡಬೇಕು’ ಎಂದು ಕೋರಿದರು.</p>.<p>ಜಿ.ಪಂ. ಸದಸ್ಯೆ ಲತಾ ಸಿದ್ದಶೆಟ್ಟಿ ಮುಖಂಡರಾದ ಶಿವಣ್ಣ, ಹೆಮ್ಮರಗಾಲ ಸೋಮಣ್ಣ, ಬಾಲಚಂದ್ರ, ವೆಂಕೋಬರಾವ್, ಸೋಮೇಶ್ ಉಪ್ಪಾರ್, ಮಂಜುನಾಥ್, ರಾಮು, ಹುಂಡಿ ಮಹದೇವು, ನಗರಸಭೆ ಸದಸ್ಯರಾದ ನಾಗಮಣಿ ಶಂಕರಪ್ಪ, ಮಹದೇವಮ್ಮ ಬಾಲಚಂದ್ರ, ಸಿದ್ದರಾಜು, ಶಶಿಕಲಾ, ಸೌಮ್ಯಾ, ಸಿದ್ದಶೆಟ್ಟಿ, ನಾಗರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು: </strong>ತಾಲ್ಲೂಕಿನ ಚಾಮಲಾಪುರದ ಹುಂಡಿ, ಗೋಳೂರು, ಹೆಮ್ಮರಗಾಲ, ಹಗಿನವಾಳು ಮುಂತಾದ ಗ್ರಾಮಗಳಿಗೆ ಗುರುವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಕೆ.ಎಂ.ಮೇತ್ರಿ ನೇತೃತ್ವದ ತಂಡ ಭೇಟಿ ನೀಡಿ ಉಪ್ಪಾರ ಸಮುದಾಯದ ಸ್ಥಿತಿಗತಿಗಳ ಅಧ್ಯಯನ ನಡೆಸಿತು.</p>.<p>ಚಾಮಲಾಪುರದ ಹುಂಡಿಯ ಮಾರಮ್ಮನ ದೇವಸ್ಥಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ.ಮೇತ್ರಿ ಅವರು, ‘ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯ ವತಿಯಿಂದ 5 ಮಂದಿಯ ತಂಡದೊಂದಿಗೆ ತಾಲ್ಲೂಕಿನ 53 ಗ್ರಾಮಗಳಲ್ಲಿ ಉಪ್ಪಾರ ಸಮುದಾಯದ ಸ್ಥಿತಿಗತಿಗಳ ಅಧ್ಯಯನ ನಡೆಸಲಾಗುತ್ತಿದೆ. ಇದುವರೆಗೆ ನಡೆಸಿದ ಸಮೀಕ್ಷೆಯಲ್ಲಿ ಉಪ್ಪಾರ ಜನಾಂಗ ಬುಡಕಟ್ಟು ಪದ್ಧತಿಯನ್ನು ಅಳವಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ’ ಎಂದು ಹೇಳಿದರು.</p>.<p>‘ಚಿಕ್ಕಮ್ಮ, ಚಿಕ್ಕದೇವಿ, ಸಿದ್ದಪ್ಪಾಜಿ, ರವಣಮ್ಮ ದೇವಿಗಳ ಆರಾಧಕರಾದ ಸಮಾಜ, ಬುಡಕಟ್ಟು ಜನರಂತೆ ಪ್ರಕೃತಿಯ ಬೇವಿನ ಮರ, ಭಂಡಾರಗಳ ಪೂಜೆಯನ್ನು ನಡೆಸುತ್ತ ಬಂದಿದ್ದಾರೆ. ಬ್ರಾಹ್ಮಣರ ಪ್ರಭಾವಕ್ಕೆ ಒಳಗಾಗಿ ದಾಸ ಕುಲ, ವೆಂಕಟೇಶ್ವರನ ಆರಾಧಕರು ಆದವರು ಇದ್ದಾರೆ. ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಮೊಬೈಲ್ ಆ್ಯಪ್ ಮೂಲಕ 2 ಪ್ರಮುಖ ಪ್ರಶ್ನೆಗಳನ್ನು ಕೇಳಲಾಗಿದ್ದು, ಕುಟುಂಬದ ಹಿರಿಯರಿಂದ ಮಾಹಿತಿ ಪಡೆದು, ಸಮಾಜದ ಪದ್ಧತಿ, ಆಚರಣೆ, ಕುಟುಂಬ ಜೀವನಗಳ ಬಗ್ಗೆ ಚಿತ್ರ ಸಹಿತ ಮಾಹಿತಿ ನೀಡಿದರೆ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ’ ಎಂದು ಹೇಳಿದರು.</p>.<p>ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ‘ನಮ್ಮ ಪೂರ್ವಿಕರು ನಲ್ಲರಾಯರನ್ನು ಕುಲಗುರುಗಳಾಗಿ ಸ್ವೀಕರಿಸಿದವರು. ಪರಿಶಿಷ್ಟ ಜಾತಿಯವರಿಗೂ ನಲ್ಲರಾಯರೇ ಕುಲಗುರುಗಳು. ಪರಿಶಿಷ್ಟರಂತೆ ನಮ್ಮಲ್ಲೂ ಸಹ 9 ಬಣ್ಣಗಳ ಕುಲವಿದೆ, ಅವರಂತೆ ನಮ್ಮಲ್ಲಿ ನಾಗ, ಬೆಳ್ಳಿ, ಬೀಗದ ಕುಲ ಎಂಬ ಗುಂಪುಗಳಿವೆ. ಒಂದು ಕುಲಕ್ಕೆ ಸೇರಿದವರು ಬೇರೆ ಕುಲಕ್ಕೆ ಹೆಣ್ಣು ಕೊಡುವ- ತರುವ ಪದ್ಧತಿ ಇಲ್ಲ. ಹೆಣ್ಣು ಮಕ್ಕಳು ಋತುಮತಿಯಾದ ತಕ್ಷಣ ಮದುವೆ ಮಾಡುವ ಪದ್ಧತಿಯಿದೆ. ಪ್ರಾಣಿ ಬಲಿ, ದೇವರ ಗುಡ್ಡನನ್ನು ಬಿಡುವುದು ಹಾಗೂ ಮದುವೆ ಸಂಪ್ರದಾಯಗಳಲ್ಲಿ ಸಾಮ್ಯತೆ ಇದೆ’ ಎಂದರು.</p>.<p>‘ಜನಾಂಗದವರು ಮೀನು ಹಿಡಿಯುವ, ಕಲ್ಲು ಒಡೆಯುವ, ಮರಗೆಲಸ, ಕಟ್ಟಡ ನಿರ್ಮಾಣ ಕೆಲಸದಂತಹ ಕೆಲಸದಲ್ಲಿ ಸಮಾಜದವರು ತೊಡಗಿದ್ದಾರೆ. ಈ ಹಿಂದೆ ನಮ್ಮ ಸಮಾಜ ಅಲೆಮಾರಿ ಜನಾಂಗವಾಗಿದ್ದ ಬಗ್ಗೆ ಕುರುಹುಗಳಿವೆ. ಅದ್ದರಿಂದ ಸಮಗ್ರ ಅಧ್ಯಯನ ನಡೆಸಿ ಉಪ್ಪಾರ ಸಮಾಜವನ್ನು ಬುಡಕಟ್ಟು ಜನಾಂಗ ಅಥವಾ ಪರಿಶಿಷ್ಟ ಜಾತಿ- ಪಂಗಡವಾಗಿ ಪರಿಗಣಿಸಿ ಮೀಸಲಾತಿ ನೀಡಬೇಕು’ ಎಂದು ಕೋರಿದರು.</p>.<p>ಜಿ.ಪಂ. ಸದಸ್ಯೆ ಲತಾ ಸಿದ್ದಶೆಟ್ಟಿ ಮುಖಂಡರಾದ ಶಿವಣ್ಣ, ಹೆಮ್ಮರಗಾಲ ಸೋಮಣ್ಣ, ಬಾಲಚಂದ್ರ, ವೆಂಕೋಬರಾವ್, ಸೋಮೇಶ್ ಉಪ್ಪಾರ್, ಮಂಜುನಾಥ್, ರಾಮು, ಹುಂಡಿ ಮಹದೇವು, ನಗರಸಭೆ ಸದಸ್ಯರಾದ ನಾಗಮಣಿ ಶಂಕರಪ್ಪ, ಮಹದೇವಮ್ಮ ಬಾಲಚಂದ್ರ, ಸಿದ್ದರಾಜು, ಶಶಿಕಲಾ, ಸೌಮ್ಯಾ, ಸಿದ್ದಶೆಟ್ಟಿ, ನಾಗರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>