ಚಲನಚಿತ್ರ ನಟ ಗಣೇಶ್, ಹಾಸ್ಯನಟರಾದ ರವಿಶಂಕರ್ ಗೌಡ, ಜಗದೀಶ್, ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಅವರು ಭೇಟಿ ನೀಡಿದ್ದರು. ಸಫಾರಿ ವೇಳೆ ಕಂಡ ವಿವಿಧ ಪ್ರಾಣಿಗಳ ಚಿತ್ರಗಳನ್ನು ಸೆರೆಹಿಡಿದು ಸಂತಸಪಟ್ಟರು. ರಾಜುಗೌಡ ನಾಯಕ್ ಅವರು ಕ್ಯಾಮೆರಾ ಬಳಸಿ ಛಾಯಾಚಿತ್ರಗಳನ್ನು ಸೆರೆ ಹಿಡಿದರು. ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಂಗಲ್ ಲಾಡ್ಜಸ್ ಅಂಡ ರೆಸಾರ್ಟ್ ನಿಗಮದ ಅಧ್ಯಕ್ಷ ಅಪ್ಪಣ್ಣ ಸಫಾರಿ ಮಾಡಿದ್ದರು.