ಜೈಲಿಗೆ ಹಾಕಲು ಸಾಧ್ಯವೇ?: ‘ಮತಾಂತರ ನಿಷೇಧ ಕಾಯ್ದೆ ಅನುಷ್ಠಾನದ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಹಾಗಿದ್ದರೆ, ಮಾನವ ಧರ್ಮದ ಪರವಿದ್ದ ಬಸವಣ್ಣ, ಗಾಂಧಿ, ಅಂಬೇಡ್ಕರ್, ಕುವೆಂಪು ಅವರನ್ನು ಜಿಲ್ಲಾಧಿಕಾರಿಗಳ ಮೂಲಕ ಜೈಲಿಗೆ ಹಾಕಲು ಆಗುತ್ತದೆಯೇ? ಆರ್ಎಸ್ಎಸ್ ನಾಯಕ ಸಿಂಘಾಲ್, ಮುರಳಿಮನೋಹರ ಜೋಷಿ, ಅಡ್ವಾಣಿ, ಸುಬ್ರಹ್ಮಣ್ಯಸ್ವಾಮಿ, ಪ್ರವೀಣ್ ತೊಗಾಡಿಯ ಅವರ ಹೆಣ್ಣುಮಕ್ಕಳು, ಬಾಳಠಾಕ್ರೆ ಮೊಮ್ಮಗಳು ಮುಸ್ಲಿಂ ವ್ಯಕ್ತಿಗಳನ್ನು ಮದುವೆಯಾಗಿದ್ದಾರೆ. ಸಿನಿಮಾ ನಟರಾದ ಶಾರುಖ್ ಖಾನ್, ಸೈಫ್ ಅಲಿಖಾನ್, ಅರ್ಬಾಜ್ ಖಾನ್ ಇವರೆಲ್ಲಾ ಹಿಂದೂ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದಾರೆ. ಇವರನ್ನೆಲ್ಲಾ ಜೈಲಿಗಟ್ಟಲು ಸಾಧ್ಯವೇ’ ಎಂದು ಪ್ರಶ್ನಿಸಿದರು.