<p><strong>ತಿ.ನರಸೀಪುರ:</strong> ‘ಸ್ಫಟಿಕ ವಿವಿಧೋದ್ದೇಶ ಸಹಕಾರ ಸಂಘವು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ₹54,179 ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಜಿ.ರಾಜೇಶ್ ಹೇಳಿದರು.</p>.<p>ಪಟ್ಟಣದ ವಿವೇಕಾನಂದ ನಗರದ ಅಖಿಲ ಭಾರತ ವೀರಶೈವ ಮಹಾಸಭಾ ವಿದ್ಯಾರ್ಥಿ ನಿಲಯದಲ್ಲಿ ನಡೆದ 2022–23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಂಘವು ಈವರೆಗೆ ₹12 ಲಕ್ಷ ವಹಿವಾಟು ನಡೆಸಿದೆ. 2024ರ ಸಾಲಿಗೆ ₹15 ಲಕ್ಷ ಮೊತ್ತದ ಬಜೆಟ್ ಅಂದಾಜಿಸಲಾಗಿದೆ. ಸಂಘದಲ್ಲಿ 794 ಷೇರುದಾರರಿದ್ದು, ಹೆಚ್ಚಿನ ಸದಸ್ಯತ್ವದ ಅವಶ್ಯಕತೆ ಇದೆ. ಕೆಲ ಸದಸ್ಯರು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡದೇ ಸುಸ್ತಿದಾರರಾಗಿದ್ದಾರೆ. ಸಾಲ ಮರುಪಾವತಿಸಬೇಕು’ ಎಂದು ಸೂಚಿಸಿದರು.</p>.<p>ಸಂಘದ ನಿರ್ದೇಶಕ ತೊಂಟೇಶ್ ಮಾತನಾಡಿ, ‘ಈಗ ಪ್ರತಿ ತಿಂಗಳು ಮೂವರು ಸದಸ್ಯರಿಗೆ ತಲಾ ₹30 ಸಾವಿರ ಸಾಲ ನೀಡಲಾಗುತ್ತಿದೆ. ಸಂಘದ ಬೈಲಾ ಪ್ರಕಾರ ₹40 ಸಾವಿರಕ್ಕೆ ಸಾಲ ಸೌಲಭ್ಯವನ್ನು ಹೆಚ್ಚಿಸಬಹುದು. ಆದರೆ, ಇದಕ್ಕೆ ₹4 ಸಾವಿರ ಡಿಪಾಸಿಟ್ ಇಡಬೇಕಾಗುತ್ತದೆ’ ಎಂದು ತಿಳಿಸಿದರು.</p>.<p>ಪ್ರಸಕ್ತ ಸಾಲಿನಲ್ಲಿ ಬಂದ ಲಾಭವನ್ನು ಸಂಘದ ಅಭಿವೃದ್ಧಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು.</p>.<p>ಸಂಘದ ಅಧ್ಯಕ್ಷ ರಾಜೇಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಪಂಕಜ ಅವರನ್ನು ಸನ್ಮಾನಿಸಲಾಯಿತು.</p>.<p>ಸಂಘದ ಉಪಾಧ್ಯಕ್ಷೆ ಸೌಮ್ಯ ರಾಜಬುದ್ದಿ, ನಿರ್ದೇಶಕರಾದ ಜಿ.ಪರಶಿವಮೂರ್ತಿ, ಮಹದೇವಸ್ವಾಮಿ, ಸ್ಟುಡಿಯೋ ಜಗದೀಶ್, ಎಂ.ಷಡಕ್ಷರಿ, ರಾಜು, ಕುರುಬೂರು ಅಶೋಕ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿ.ನರಸೀಪುರ:</strong> ‘ಸ್ಫಟಿಕ ವಿವಿಧೋದ್ದೇಶ ಸಹಕಾರ ಸಂಘವು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ₹54,179 ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಜಿ.ರಾಜೇಶ್ ಹೇಳಿದರು.</p>.<p>ಪಟ್ಟಣದ ವಿವೇಕಾನಂದ ನಗರದ ಅಖಿಲ ಭಾರತ ವೀರಶೈವ ಮಹಾಸಭಾ ವಿದ್ಯಾರ್ಥಿ ನಿಲಯದಲ್ಲಿ ನಡೆದ 2022–23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>‘ಸಂಘವು ಈವರೆಗೆ ₹12 ಲಕ್ಷ ವಹಿವಾಟು ನಡೆಸಿದೆ. 2024ರ ಸಾಲಿಗೆ ₹15 ಲಕ್ಷ ಮೊತ್ತದ ಬಜೆಟ್ ಅಂದಾಜಿಸಲಾಗಿದೆ. ಸಂಘದಲ್ಲಿ 794 ಷೇರುದಾರರಿದ್ದು, ಹೆಚ್ಚಿನ ಸದಸ್ಯತ್ವದ ಅವಶ್ಯಕತೆ ಇದೆ. ಕೆಲ ಸದಸ್ಯರು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡದೇ ಸುಸ್ತಿದಾರರಾಗಿದ್ದಾರೆ. ಸಾಲ ಮರುಪಾವತಿಸಬೇಕು’ ಎಂದು ಸೂಚಿಸಿದರು.</p>.<p>ಸಂಘದ ನಿರ್ದೇಶಕ ತೊಂಟೇಶ್ ಮಾತನಾಡಿ, ‘ಈಗ ಪ್ರತಿ ತಿಂಗಳು ಮೂವರು ಸದಸ್ಯರಿಗೆ ತಲಾ ₹30 ಸಾವಿರ ಸಾಲ ನೀಡಲಾಗುತ್ತಿದೆ. ಸಂಘದ ಬೈಲಾ ಪ್ರಕಾರ ₹40 ಸಾವಿರಕ್ಕೆ ಸಾಲ ಸೌಲಭ್ಯವನ್ನು ಹೆಚ್ಚಿಸಬಹುದು. ಆದರೆ, ಇದಕ್ಕೆ ₹4 ಸಾವಿರ ಡಿಪಾಸಿಟ್ ಇಡಬೇಕಾಗುತ್ತದೆ’ ಎಂದು ತಿಳಿಸಿದರು.</p>.<p>ಪ್ರಸಕ್ತ ಸಾಲಿನಲ್ಲಿ ಬಂದ ಲಾಭವನ್ನು ಸಂಘದ ಅಭಿವೃದ್ಧಿಗೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು.</p>.<p>ಸಂಘದ ಅಧ್ಯಕ್ಷ ರಾಜೇಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಪಂಕಜ ಅವರನ್ನು ಸನ್ಮಾನಿಸಲಾಯಿತು.</p>.<p>ಸಂಘದ ಉಪಾಧ್ಯಕ್ಷೆ ಸೌಮ್ಯ ರಾಜಬುದ್ದಿ, ನಿರ್ದೇಶಕರಾದ ಜಿ.ಪರಶಿವಮೂರ್ತಿ, ಮಹದೇವಸ್ವಾಮಿ, ಸ್ಟುಡಿಯೋ ಜಗದೀಶ್, ಎಂ.ಷಡಕ್ಷರಿ, ರಾಜು, ಕುರುಬೂರು ಅಶೋಕ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>