ವಿ.ವಿ ಹಣಕಾಸು ಅಧಿಕಾರಿ ಡಾ. ಸಂಗೀತಾ ಗಜಾನನ ಭಟ್ ಮಾತನಾಡಿ, ‘ಯಾವುದೇ ಕೆಲಸವಿರಲಿ ಸಹಕಾರವಿದ್ದಾಗ ಯಶಸ್ಸು ಖಚಿತ. ಕಠಿಣ ಪರಿಶ್ರಮ ಇದ್ದಾಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದ ನೌಕರರ ಸಹಕಾರ ಪತ್ತಿನ ಸಂಘದ ಹಣಕಾಸು ನಿರ್ವಹಣೆ ಉತ್ತಮವಾಗಿದೆ. ಆರ್ಥಿಕ ಶಿಸ್ತು ಅಳವಡಿಸಿಕೊಂಡಾಗ ಅದ್ಭುತ ಕೆಲಸ ಮಾಡಬಹುದು’ ಎಂದರು.