<p><strong>ಮೈಸೂರು</strong>: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ₹15 ಸಾವಿರ ನಗದು ಹಾಗೂ ₹1 ಲಕ್ಷ ಮೌಲ್ಯದ ಬೈಕ್ ಕಸಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ನರಸಿಂಹರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಗೌಸಿಯಾನಗರದ ನಿವಾಸಿ ಸೈಯದ್ ರಯಾನ್ (18), ಯಾಸಿನ್ (19) ಹಾಗೂ ಪರ್ವೀಜ್ (18) ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.</p>.<p>‘ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿ ನಿವಾಸಿಗಳಾದ ಶ್ರೇಯಸ್ ಅರಸ್ ಹಾಗೂ ನಾಗೇಶ್ ಸೆ.19ರಂದು ಸಂಜೆ ಕಾಲೇಜು ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಹಳೇ ಕೆಸರೆ ಬಳಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದರು. ಈ ವೇಳೆ ಅಲ್ಲಿಗೆ ಬಂದ ಐವರು ಹಣ ನೀಡುವಂತೆ ಒತ್ತಾಯಿಸಿ ₹15 ಸಾವಿರವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು, ಬೈಕನ್ನೂ ಕಸಿದು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸೆ.23ರಂದು ಗೌಸಿಯಾನಗರದ ಶ್ರೀಕಂಠೇಶ್ವರ ಶಾಲೆಯ ಬಳಿ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.</p>.<p><strong>ಹಸು, ಕರು ಸಾಗಣೆ: ಇಬ್ಬರ ಬಂಧನ</strong></p>.<p>ಮೈಸೂರು: ಅಕ್ರಮವಾಗಿ ಹಸು, ಕರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಹೆಬ್ಬಾಳ ಠಾಣೆ ಪೊಲೀಸರು 25 ರಾಸುಗಳನ್ನು ರಕ್ಷಿಸಿದ್ದಾರೆ.</p>.<p>ಹುಣಸೂರು ರತ್ನಪುರಿ ಬಳಿಯ ದರ್ಗಾದಲ್ಲಿ ರೋಹನ್ ಹಾಗೂ ಅಸ್ರುಲ್ಲಾ ಷರೀಫ್ ಹಸು, ಕರುಗಳನ್ನು ಖರೀದಿಸಿ ಮೈಸೂರಿಗೆ ತರುತ್ತಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಹೆಬ್ಬಾಳ ವರ್ತುಲ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ₹15 ಸಾವಿರ ನಗದು ಹಾಗೂ ₹1 ಲಕ್ಷ ಮೌಲ್ಯದ ಬೈಕ್ ಕಸಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ನರಸಿಂಹರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಗೌಸಿಯಾನಗರದ ನಿವಾಸಿ ಸೈಯದ್ ರಯಾನ್ (18), ಯಾಸಿನ್ (19) ಹಾಗೂ ಪರ್ವೀಜ್ (18) ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.</p>.<p>‘ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿ ನಿವಾಸಿಗಳಾದ ಶ್ರೇಯಸ್ ಅರಸ್ ಹಾಗೂ ನಾಗೇಶ್ ಸೆ.19ರಂದು ಸಂಜೆ ಕಾಲೇಜು ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಹಳೇ ಕೆಸರೆ ಬಳಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದರು. ಈ ವೇಳೆ ಅಲ್ಲಿಗೆ ಬಂದ ಐವರು ಹಣ ನೀಡುವಂತೆ ಒತ್ತಾಯಿಸಿ ₹15 ಸಾವಿರವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು, ಬೈಕನ್ನೂ ಕಸಿದು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸೆ.23ರಂದು ಗೌಸಿಯಾನಗರದ ಶ್ರೀಕಂಠೇಶ್ವರ ಶಾಲೆಯ ಬಳಿ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.</p>.<p><strong>ಹಸು, ಕರು ಸಾಗಣೆ: ಇಬ್ಬರ ಬಂಧನ</strong></p>.<p>ಮೈಸೂರು: ಅಕ್ರಮವಾಗಿ ಹಸು, ಕರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಹೆಬ್ಬಾಳ ಠಾಣೆ ಪೊಲೀಸರು 25 ರಾಸುಗಳನ್ನು ರಕ್ಷಿಸಿದ್ದಾರೆ.</p>.<p>ಹುಣಸೂರು ರತ್ನಪುರಿ ಬಳಿಯ ದರ್ಗಾದಲ್ಲಿ ರೋಹನ್ ಹಾಗೂ ಅಸ್ರುಲ್ಲಾ ಷರೀಫ್ ಹಸು, ಕರುಗಳನ್ನು ಖರೀದಿಸಿ ಮೈಸೂರಿಗೆ ತರುತ್ತಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಹೆಬ್ಬಾಳ ವರ್ತುಲ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>