<p><strong>ಮೈಸೂರು: </strong>ಇಲ್ಲಿನ ರಂಗಾಯಣದ ಆವರಣದಲ್ಲಿ ಗುರುವಾರ ಸಂಜೆ 'ಬಹುರೂಪಿ ರಾಷ್ಟ್ರೀಯ ರಂಗೋತ್ಸವ' ಆರಂಭವಾಯಿತು.</p>.<p>ವನರಂಗದ ಆವರಣದಲ್ಲಿ ಜಾನಪದ ತಜ್ಞ ಡಾ.ಪಿ.ಕೆ.ರಾಜಶೇಖರ್ ಅವರು, ನವಿಲಿನ ವೇಷ ಧರಿಸಿ ಬಂದ ಕಲಾವಿದನ ಗರಿಗಳಲ್ಲಿದ್ದ 'ಭಾರತೀಯತೆ'ಯ ವಿವಿಧ ಕಲೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಾನಪದೋತ್ಸವಕ್ಕೆ ಚಾಲನೆ ನೀಡಿದರು.</p>.<p>ನಂತರ ಮಾತನಾಡಿದ ಅವರು, 'ದೇಶದ ಎಲ್ಲ ಸಂಸ್ಕೃತಿಯ ಮೂಲ ಜಾನಪದ. ಈ ಮಾತೃ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ನಮಗೆ ಕೊಡುಗೆಯಾಗಿ ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕಾಗಿರುವುದು ಎಲ್ಲರ ಜವಾಬ್ದಾರಿ' ಎಂದರು.</p>.<p>'ಪರಂಪರೆಯ ಅದ್ಭುತ ಸಾಹಿತ್ಯವನ್ನು ಜನಪದರು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಮಹಾ ಕಾವ್ಯಗಳನ್ನು ಅನಕ್ಷರಸ್ಥರು ನೆನಪಿನಲ್ಲಿರಿಸಿಕೊಂಡಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿರುವ ನಾವು ಮೂಲದಾಟಿಯಲ್ಲೇ ಜಾನಪದ ಕಾವ್ಯಗಳನ್ನು ಹಾಡಬೇಕು. ಕಾಪಿಡಬೇಕು' ಎಂದು ಹೇಳಿದರು.</p>.<p>'ಜನಪದ ನಾಡಪದ. ಹಳ್ಳಿಯಲ್ಲಿ ಮಾತ್ರ ಜಾನಪದವಿದೆ ಎಂದುಕೊಳ್ಳುವುದು ತಪ್ಪು. ನಗರದಲ್ಲೂ ಇದೆ. ಹಳ್ಳಿಗಳಲ್ಲಿ ಮಾತ್ರ ಕಜ್ಜಾಯ ಮಾಡುತ್ತಾರೆಯೇ' ಎಂದು ಪ್ರಶ್ನಿಸಿದರು. </p>.<p>ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪ ನಿರ್ದೇಶಕರಾದ ನಿರ್ಮಲಾ ಮಠಪತಿ, ಜಾನಪದೋತ್ಸವ ಸಂಚಾಲಕರಾದ ಗೀತಾ ಮೋಂಟಡ್ಕ, ರಂಗೋತ್ಸವದ ಸಂಚಾಲಕ ಜಗದೀಶ್ ಮನೆವಾರ್ತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ರಂಗಾಯಣದ ಆವರಣದಲ್ಲಿ ಗುರುವಾರ ಸಂಜೆ 'ಬಹುರೂಪಿ ರಾಷ್ಟ್ರೀಯ ರಂಗೋತ್ಸವ' ಆರಂಭವಾಯಿತು.</p>.<p>ವನರಂಗದ ಆವರಣದಲ್ಲಿ ಜಾನಪದ ತಜ್ಞ ಡಾ.ಪಿ.ಕೆ.ರಾಜಶೇಖರ್ ಅವರು, ನವಿಲಿನ ವೇಷ ಧರಿಸಿ ಬಂದ ಕಲಾವಿದನ ಗರಿಗಳಲ್ಲಿದ್ದ 'ಭಾರತೀಯತೆ'ಯ ವಿವಿಧ ಕಲೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಾನಪದೋತ್ಸವಕ್ಕೆ ಚಾಲನೆ ನೀಡಿದರು.</p>.<p>ನಂತರ ಮಾತನಾಡಿದ ಅವರು, 'ದೇಶದ ಎಲ್ಲ ಸಂಸ್ಕೃತಿಯ ಮೂಲ ಜಾನಪದ. ಈ ಮಾತೃ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ನಮಗೆ ಕೊಡುಗೆಯಾಗಿ ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕಾಗಿರುವುದು ಎಲ್ಲರ ಜವಾಬ್ದಾರಿ' ಎಂದರು.</p>.<p>'ಪರಂಪರೆಯ ಅದ್ಭುತ ಸಾಹಿತ್ಯವನ್ನು ಜನಪದರು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಮಹಾ ಕಾವ್ಯಗಳನ್ನು ಅನಕ್ಷರಸ್ಥರು ನೆನಪಿನಲ್ಲಿರಿಸಿಕೊಂಡಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿರುವ ನಾವು ಮೂಲದಾಟಿಯಲ್ಲೇ ಜಾನಪದ ಕಾವ್ಯಗಳನ್ನು ಹಾಡಬೇಕು. ಕಾಪಿಡಬೇಕು' ಎಂದು ಹೇಳಿದರು.</p>.<p>'ಜನಪದ ನಾಡಪದ. ಹಳ್ಳಿಯಲ್ಲಿ ಮಾತ್ರ ಜಾನಪದವಿದೆ ಎಂದುಕೊಳ್ಳುವುದು ತಪ್ಪು. ನಗರದಲ್ಲೂ ಇದೆ. ಹಳ್ಳಿಗಳಲ್ಲಿ ಮಾತ್ರ ಕಜ್ಜಾಯ ಮಾಡುತ್ತಾರೆಯೇ' ಎಂದು ಪ್ರಶ್ನಿಸಿದರು. </p>.<p>ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪ ನಿರ್ದೇಶಕರಾದ ನಿರ್ಮಲಾ ಮಠಪತಿ, ಜಾನಪದೋತ್ಸವ ಸಂಚಾಲಕರಾದ ಗೀತಾ ಮೋಂಟಡ್ಕ, ರಂಗೋತ್ಸವದ ಸಂಚಾಲಕ ಜಗದೀಶ್ ಮನೆವಾರ್ತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>