<p><strong>ಮೈಸೂರು</strong>: ಗನ್ಹೌಸ್ ಮುಂಭಾಗದ ಉದ್ಯಾನದ ಕುವೆಂಪು ಪ್ರತಿಮೆ ಬಳಿ ಕೆಂಪು ಪುಸ್ತಕ ಆಚರಣಾ ಸಮಿತಿಯು ಕೆಂಪು ಪುಸ್ತಕ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ಪ್ರೊ. ಎನ್. ಎಸ್. ವೇಣು ಗೋಪಾಲ್ ‘ಅಮೆರಿಕನ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಪುಸ್ತಕ ಬಿಡುಗಡೆಗೊಳಿಸಿದರು.</p>.<p>‘ಅಮೆರಿಕನ್ ಸಾಮ್ರಾಜ್ಯಶಾಹಿ ಎಂದರೆ ನಿರಂತರ ಯುದ್ಧ, ಸಾವು- ನೋವು, ನಾಶ, ಸಂಪನ್ಮೂಲಗಳ ಪೋಲು ಎಂಬಂತಾಗಿದೆ. ಎಲ್ಲಾ ದೇಶಗಳ ಶೋಷಣೆ, ಲೂಟಿ ಮಾಡುತ್ತಿದೆ. ಇವನ್ನು ಮರೆಮಾಚಲು ಕೋಮುವಾದ, ಮತಾಂಧತೆ ಮುನ್ನೆಲೆಗೆ ತರಲಾಗುತ್ತಿದೆ. ಅಮೆರಿಕನ್ ಸಾಮ್ರಾಜ್ಯಶಾಹಿ ಇಡೀ ಜಗತ್ತಿನ ಶತ್ರು’ ಎಂದು ದೂರಿದರು.</p>.<p>ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಮಾತನಾಡಿ, ‘1848 ಫೆ. 21 ರಂದು ಕಾರ್ಲ್ಮಾರ್ಕ್ಸ್ ಹಾಗೂ ಫೆಡ್ರಿಕ್ ಏಂಗಲ್ ರಚಿಸಿದ ಕಮ್ಯುನಿಸ್ಟ್ ಪ್ರಣಾಳಿಕೆ ಪುಸ್ತಕ ಪ್ರಕಟವಾದ ದಿನವನ್ನು ಕೆಂಪು ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಪುಸ್ತಕ ಜಗತ್ತಿನ ದುಡಿವ ವರ್ಗದ ವಿಮೋಚನೆಯ ದಾರಿ ದೀಪ’ ಎಂದು ಹೇಳಿದರು.</p>.<p>ಸಿಪಿಐ (ಎಂ) ಜಿಲ್ಲಾ ಸಮಿತಿ ಸದಸ್ಯ ಕೆ.ಬಸವರಾಜ್, ಎನ್.ವಿಜಯ್ ಕುಮಾರ್, ಮೆಹಬೂಬ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ, ಅಣ್ಣಪ್ಪ, ಶ್ರೀಧರ್, ಕೃಷ್ಣ ಮೂರ್ತಿ, ಬಲರಾಂ, ಅಭಿ.ಬೀರೇಶ್ವರ್, ಬಸವಯ್ಯ, ಮೈಕೇಲ್, ರಾಘವೇಂದ್ರ, ಸುಬ್ರಹ್ಮಣ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಗನ್ಹೌಸ್ ಮುಂಭಾಗದ ಉದ್ಯಾನದ ಕುವೆಂಪು ಪ್ರತಿಮೆ ಬಳಿ ಕೆಂಪು ಪುಸ್ತಕ ಆಚರಣಾ ಸಮಿತಿಯು ಕೆಂಪು ಪುಸ್ತಕ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿಂತಕ ಪ್ರೊ. ಎನ್. ಎಸ್. ವೇಣು ಗೋಪಾಲ್ ‘ಅಮೆರಿಕನ್ ಸಾಮ್ರಾಜ್ಯಶಾಹಿ ಭಾರತದ ಜನತೆಯ ಶತ್ರು’ ಪುಸ್ತಕ ಬಿಡುಗಡೆಗೊಳಿಸಿದರು.</p>.<p>‘ಅಮೆರಿಕನ್ ಸಾಮ್ರಾಜ್ಯಶಾಹಿ ಎಂದರೆ ನಿರಂತರ ಯುದ್ಧ, ಸಾವು- ನೋವು, ನಾಶ, ಸಂಪನ್ಮೂಲಗಳ ಪೋಲು ಎಂಬಂತಾಗಿದೆ. ಎಲ್ಲಾ ದೇಶಗಳ ಶೋಷಣೆ, ಲೂಟಿ ಮಾಡುತ್ತಿದೆ. ಇವನ್ನು ಮರೆಮಾಚಲು ಕೋಮುವಾದ, ಮತಾಂಧತೆ ಮುನ್ನೆಲೆಗೆ ತರಲಾಗುತ್ತಿದೆ. ಅಮೆರಿಕನ್ ಸಾಮ್ರಾಜ್ಯಶಾಹಿ ಇಡೀ ಜಗತ್ತಿನ ಶತ್ರು’ ಎಂದು ದೂರಿದರು.</p>.<p>ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಮಾತನಾಡಿ, ‘1848 ಫೆ. 21 ರಂದು ಕಾರ್ಲ್ಮಾರ್ಕ್ಸ್ ಹಾಗೂ ಫೆಡ್ರಿಕ್ ಏಂಗಲ್ ರಚಿಸಿದ ಕಮ್ಯುನಿಸ್ಟ್ ಪ್ರಣಾಳಿಕೆ ಪುಸ್ತಕ ಪ್ರಕಟವಾದ ದಿನವನ್ನು ಕೆಂಪು ಪುಸ್ತಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಪುಸ್ತಕ ಜಗತ್ತಿನ ದುಡಿವ ವರ್ಗದ ವಿಮೋಚನೆಯ ದಾರಿ ದೀಪ’ ಎಂದು ಹೇಳಿದರು.</p>.<p>ಸಿಪಿಐ (ಎಂ) ಜಿಲ್ಲಾ ಸಮಿತಿ ಸದಸ್ಯ ಕೆ.ಬಸವರಾಜ್, ಎನ್.ವಿಜಯ್ ಕುಮಾರ್, ಮೆಹಬೂಬ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ, ಅಣ್ಣಪ್ಪ, ಶ್ರೀಧರ್, ಕೃಷ್ಣ ಮೂರ್ತಿ, ಬಲರಾಂ, ಅಭಿ.ಬೀರೇಶ್ವರ್, ಬಸವಯ್ಯ, ಮೈಕೇಲ್, ರಾಘವೇಂದ್ರ, ಸುಬ್ರಹ್ಮಣ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>