‘ಜನ್ಮದಿನ ಹಾಗೂ ಇತರ ಆಚರಣೆಗಳಲ್ಲಿ ಕಾರಂತರು ನಂಬಿಕೆ ಇಟ್ಟವರಲ್ಲ. ತುಸು ಗೊಂದಲದ ವ್ಯಕ್ತಿ ಕೂಡ. ಆದರೆ, ಅವರನ್ನು ನೆನಪಿಸಿಕೊಳ್ಳಲು ಇದು ಸೂಕ್ತವಾದ ದಿನ. ಹಲವು ಭಾಷೆಗಳಲ್ಲಿ ರಂಗ ಸಂಗೀತ ಸಂಯೋಜನೆ ಮಾಡಿದ ಕಾರಂತ ಅವರಂಥ ಮತ್ತೊಬ್ಬ ವ್ಯಕ್ತಿ ಈ ದೇಶದಲ್ಲಿ ಇಲ್ಲ. ದೇಶಿ ಸೂತ್ರ ಹಿಡಿದು ಮುಂದೆ ಸಾಗಿದ್ದರು. ಷೇಕ್ಸ್ಪಿಯರ್ನ ಮೆಕ್ಬೆತ್ ನಾಟಕದಲ್ಲಿ ಯಕ್ಷಗಾನ ಪ್ರಯೋಗ ಮಾಡಿದ್ದರು’ ಎಂದು ಶ್ಲಾಘಿಸಿದರು.