<p><strong>ಮೈಸೂರು:</strong> ‘ಅಂಗವಿಕಲ ಮಕ್ಕಳಿಗೆ ವಿಶೇಷ ಕಾಳಜಿ ತೋರಬೇಕು. ಎಲ್ಲ ಮಕ್ಕಳಂತೆ ಉತ್ತಮ ಬಾಲ್ಯವನ್ನು ಅವರಿಗೆ ಪೋಷಕರು ಕಟ್ಟಿಕೊಡಬೇಕು’ ಎಂದು ಬಿಜೆಪಿ ಮುಖಂಡ ಮಾ.ವಿ.ರಾಮಪ್ರಸಾದ್ ಹೇಳಿದರು.</p>.<p>ಚಾಮುಂಡಿಪುರಂನ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಆರೋಗ್ಯ ಉಚಿತ ತಪಾಸಣೆಗೆ ಚಾಲನೆ ನೀಡಿ, ‘ದಶಕದಿಂದಲೂ ಶಾಲೆಯು ಉತ್ತಮ ಕಾರ್ಯವನ್ನು ಮಾಡುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಅಗತ್ಯವಾದ ಅಡಿಪಾಯ ಶಿಕ್ಷಣವನ್ನು ಶಾಲೆಯು ನೀಡುತ್ತಿದೆ’ ಎಂದರು.</p>.<p>‘ರೋಟರಿ ಕ್ಲಬ್ ಆಫ್ ಹೆರಿಟೇಜ್ ವತಿಯಿಂದ ಅನಾಥಾಶ್ರಮ, ವೃದ್ಧಾಶ್ರಮ ಮತ್ತು ವಿಶೇಷ ಮಕ್ಕಳ ಶಾಲೆಗೆ ನಿತ್ಯವೂ 25 ಕೆ.ಜಿ ಅಕ್ಕಿ ನೀಡುತ್ತಿದ್ದು, ಶಾಲೆಗೆ ಅಗತ್ಯವಿರುವ ಮಾಸಿಕ 75 ಕೆ.ಜಿ ಅಕ್ಕಿಯನ್ನು ನೀಡಲಾಗುವುದು’ ಎಂದು ಕ್ಲಬ್ ಅಧ್ಯಕ್ಷ ಆರ್.ರಾಜೇಶ್ ಹೇಳಿದರು.</p>.<p>ಜೀವನದಿ ಟ್ರಸ್ಟ್ನ ಆಯೇಷಾ, ಅರವಿಂದ ಆಸ್ಪತ್ರೆ ವೈದ್ಯ ಭರತ್, ಕೇಶವಬಿದ್ರೆ, ಗೋಪಾಲಕೃಷ್ಣ, ಸನತ್ಕುಮಾರ್, ನಾರಾಯಣ ನಾಯಕ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಅಂಗವಿಕಲ ಮಕ್ಕಳಿಗೆ ವಿಶೇಷ ಕಾಳಜಿ ತೋರಬೇಕು. ಎಲ್ಲ ಮಕ್ಕಳಂತೆ ಉತ್ತಮ ಬಾಲ್ಯವನ್ನು ಅವರಿಗೆ ಪೋಷಕರು ಕಟ್ಟಿಕೊಡಬೇಕು’ ಎಂದು ಬಿಜೆಪಿ ಮುಖಂಡ ಮಾ.ವಿ.ರಾಮಪ್ರಸಾದ್ ಹೇಳಿದರು.</p>.<p>ಚಾಮುಂಡಿಪುರಂನ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಆರೋಗ್ಯ ಉಚಿತ ತಪಾಸಣೆಗೆ ಚಾಲನೆ ನೀಡಿ, ‘ದಶಕದಿಂದಲೂ ಶಾಲೆಯು ಉತ್ತಮ ಕಾರ್ಯವನ್ನು ಮಾಡುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಅಗತ್ಯವಾದ ಅಡಿಪಾಯ ಶಿಕ್ಷಣವನ್ನು ಶಾಲೆಯು ನೀಡುತ್ತಿದೆ’ ಎಂದರು.</p>.<p>‘ರೋಟರಿ ಕ್ಲಬ್ ಆಫ್ ಹೆರಿಟೇಜ್ ವತಿಯಿಂದ ಅನಾಥಾಶ್ರಮ, ವೃದ್ಧಾಶ್ರಮ ಮತ್ತು ವಿಶೇಷ ಮಕ್ಕಳ ಶಾಲೆಗೆ ನಿತ್ಯವೂ 25 ಕೆ.ಜಿ ಅಕ್ಕಿ ನೀಡುತ್ತಿದ್ದು, ಶಾಲೆಗೆ ಅಗತ್ಯವಿರುವ ಮಾಸಿಕ 75 ಕೆ.ಜಿ ಅಕ್ಕಿಯನ್ನು ನೀಡಲಾಗುವುದು’ ಎಂದು ಕ್ಲಬ್ ಅಧ್ಯಕ್ಷ ಆರ್.ರಾಜೇಶ್ ಹೇಳಿದರು.</p>.<p>ಜೀವನದಿ ಟ್ರಸ್ಟ್ನ ಆಯೇಷಾ, ಅರವಿಂದ ಆಸ್ಪತ್ರೆ ವೈದ್ಯ ಭರತ್, ಕೇಶವಬಿದ್ರೆ, ಗೋಪಾಲಕೃಷ್ಣ, ಸನತ್ಕುಮಾರ್, ನಾರಾಯಣ ನಾಯಕ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>