<p>ಮೈಸೂರು: ‘ಕಾವೇರಿ ನೀರು ತಮಿಳುನಾಡಿಗೆ ನಿರಂತರವಾಗಿ ಹರಿಯುತ್ತಿದ್ದು, ರಾಜ್ಯ ಸರ್ಕಾರವೇ ಮುಂದೆ ನಿಂತು ಇದನ್ನು ನಿರ್ವಹಿಸುತ್ತಿದೆ’ ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಆರೋಪಿಸಿದರು.</p>.<p>ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಕಾವೇರಿ ಕ್ರಿಯಾ ಸಮಿತಿ ಸಭೆ ನೇತೃತ್ವ ವಹಿಸಿ ಮಾತನಾಡಿ, ‘ಕನ್ನಡಪರ, ರೈತ ಸಂಘಟನೆಗಳ ನಿರಂತರ ಒತ್ತಾಯಕ್ಕೂ ಮಣಿಯದ ಸರ್ಕಾರ ನೀರು ಬಿಡುವಲ್ಲಿ ನಿರತವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ’ ಎಂದು ಎಚ್ಚರಿಸಿದರು.</p>.<p>‘ಕಾವೇರಿ ನ್ಯಾಯಮಂಡಳಿ ತೀರ್ಪು ರಾಜ್ಯಕ್ಕೆ ಘೋರ ಅನ್ಯಾಯ ಮಾಡಿದ್ದು, 90ರ ದಶಕದಲ್ಲಿ ನಗರದಲ್ಲಿ ನಡೆದ ಐತಿಹಾಸಿಕ ಧರಣಿ, ಹೋರಾಟಗಳು ಮತ್ತೆ ಮರುಕಳಿಸಬೇಕಿದೆ. ಸರ್ವರೂ ಇದಕ್ಕೆ ಬೆಂಬಲ ಸೂಚಿಸಿ, ಸಹಕರಿಸಬೇಕು’ ಎಂದು ಸಭೆಯಲ್ಲಿ ಮನವಿ ಮಾಡಿದರು.</p>.<p>ಕ್ರಿಯಾ ಸಮಿತಿ ಸದಸ್ಯ ಸಿದ್ದಲಿಂಗಪ್ಪ ಮಾತನಾಡಿ, ‘ಕಾವೇರಿ ಕ್ರಿಯಾ ಸಮಿತಿ ಮುಂಚಿನಂತೆಯೇ ಸರ್ವರನ್ನು ಒಳಗೊಳ್ಳುವ, ಸಮಗ್ರ ಭಾಗೀದಾರರನ್ನು ಎಚ್ಚರಿಸಿ ಒಕ್ಕೂಟದೊಂದಿಗೆ ಹೋರಾಟಕ್ಕೆ ಮುನ್ನುಗ್ಗಿಸುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>‘ಹೋರಾಟಕ್ಕೆ ಉತ್ತಮ ಪ್ರಚಾರ ನೀಡಬೇಕು. ಪಕ್ಷಬೇಧವಿಲ್ಲದೇ, ರಾಜಕೀಯ ನುಸುಳಲು ಬಿಡದೇ, ಕಾವೇರಿ ನೀರನ್ನು ಕುಡಿಯುವ ಪ್ರತಿಯೊಬ್ಬರನ್ನು ತಲುಪುವಂತೆ ಮಾರ್ಗ ರೂಪಿಸಬೇಕು’ ಎಂದು ಪ್ರಮುಖರಾದ ಪಿ.ಸಿ.ನಾಗರಾಜ್ ಸಲಹೆ ನೀಡಿದರು.</p>.<p>‘ಸಂವಿಧಾನಕ್ಕೆ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ. ಆದರೆ, ಕಾವೇರಿ ನದಿ ನೀರು ಹಂಚಿಕೆಯೂ ಹಳೇ ಕಾಲದ ಒಡಂಬಡಿಕೆಯಲ್ಲಿಯೇ ಮುಂದುವರಿಯುತ್ತಿರುವುದು ದೊಡ್ಡ ಅನ್ಯಾಯ. ಸಮಯಕ್ಕೆ ತಕ್ಕಂತೆ ಪರಿಷ್ಕರಣೆಯಾಗಬೇಕು. ರಾಜ್ಯಕ್ಕೆ ನ್ಯಾಯ ದೊರೆಯಬೇಕು’ ಎಂದು ಸಭಿಕರು ಒತ್ತಾಯಿಸಿದರು.</p>.<p>ಮತ್ತೊಂದು ಪೂರ್ವಭಾವಿ ಸಭೆಯನ್ನು ಸೆ.23ರಂದು ಸಂಜೆ 4ಕ್ಕೆ ಜಲದರ್ಶಿನಿಯಲ್ಲಿ ನಡೆಸಲಾಗುವುದು. ಅಂದು ಮುಂದಿನ ಹೋರಾಟದ ರೂಪುರೇಷೆ ಸಿದ್ಧವಾಗಲಿದೆ ಎಂದು ಸಭೆ ತಿಳಿಸಿತು.</p>.<p>ಸಭೆಯಲ್ಲಿ ಎಸ್.ಡಿ ರಾಜೇಶ್, ಎಂ.ಮಂಜುನಾಥ್, ಬಿ.ಕೆ.ರಾಜೇಶ್, ಎಂ.ಜೆ.ಸುರೇಶ್ ಗೌಡ, ಎಸ್.ಬಸಪ್ಪ, ಎಂ.ಜಯಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಕಾವೇರಿ ನೀರು ತಮಿಳುನಾಡಿಗೆ ನಿರಂತರವಾಗಿ ಹರಿಯುತ್ತಿದ್ದು, ರಾಜ್ಯ ಸರ್ಕಾರವೇ ಮುಂದೆ ನಿಂತು ಇದನ್ನು ನಿರ್ವಹಿಸುತ್ತಿದೆ’ ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಆರೋಪಿಸಿದರು.</p>.<p>ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ನಡೆದ ಕಾವೇರಿ ಕ್ರಿಯಾ ಸಮಿತಿ ಸಭೆ ನೇತೃತ್ವ ವಹಿಸಿ ಮಾತನಾಡಿ, ‘ಕನ್ನಡಪರ, ರೈತ ಸಂಘಟನೆಗಳ ನಿರಂತರ ಒತ್ತಾಯಕ್ಕೂ ಮಣಿಯದ ಸರ್ಕಾರ ನೀರು ಬಿಡುವಲ್ಲಿ ನಿರತವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ’ ಎಂದು ಎಚ್ಚರಿಸಿದರು.</p>.<p>‘ಕಾವೇರಿ ನ್ಯಾಯಮಂಡಳಿ ತೀರ್ಪು ರಾಜ್ಯಕ್ಕೆ ಘೋರ ಅನ್ಯಾಯ ಮಾಡಿದ್ದು, 90ರ ದಶಕದಲ್ಲಿ ನಗರದಲ್ಲಿ ನಡೆದ ಐತಿಹಾಸಿಕ ಧರಣಿ, ಹೋರಾಟಗಳು ಮತ್ತೆ ಮರುಕಳಿಸಬೇಕಿದೆ. ಸರ್ವರೂ ಇದಕ್ಕೆ ಬೆಂಬಲ ಸೂಚಿಸಿ, ಸಹಕರಿಸಬೇಕು’ ಎಂದು ಸಭೆಯಲ್ಲಿ ಮನವಿ ಮಾಡಿದರು.</p>.<p>ಕ್ರಿಯಾ ಸಮಿತಿ ಸದಸ್ಯ ಸಿದ್ದಲಿಂಗಪ್ಪ ಮಾತನಾಡಿ, ‘ಕಾವೇರಿ ಕ್ರಿಯಾ ಸಮಿತಿ ಮುಂಚಿನಂತೆಯೇ ಸರ್ವರನ್ನು ಒಳಗೊಳ್ಳುವ, ಸಮಗ್ರ ಭಾಗೀದಾರರನ್ನು ಎಚ್ಚರಿಸಿ ಒಕ್ಕೂಟದೊಂದಿಗೆ ಹೋರಾಟಕ್ಕೆ ಮುನ್ನುಗ್ಗಿಸುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>‘ಹೋರಾಟಕ್ಕೆ ಉತ್ತಮ ಪ್ರಚಾರ ನೀಡಬೇಕು. ಪಕ್ಷಬೇಧವಿಲ್ಲದೇ, ರಾಜಕೀಯ ನುಸುಳಲು ಬಿಡದೇ, ಕಾವೇರಿ ನೀರನ್ನು ಕುಡಿಯುವ ಪ್ರತಿಯೊಬ್ಬರನ್ನು ತಲುಪುವಂತೆ ಮಾರ್ಗ ರೂಪಿಸಬೇಕು’ ಎಂದು ಪ್ರಮುಖರಾದ ಪಿ.ಸಿ.ನಾಗರಾಜ್ ಸಲಹೆ ನೀಡಿದರು.</p>.<p>‘ಸಂವಿಧಾನಕ್ಕೆ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ. ಆದರೆ, ಕಾವೇರಿ ನದಿ ನೀರು ಹಂಚಿಕೆಯೂ ಹಳೇ ಕಾಲದ ಒಡಂಬಡಿಕೆಯಲ್ಲಿಯೇ ಮುಂದುವರಿಯುತ್ತಿರುವುದು ದೊಡ್ಡ ಅನ್ಯಾಯ. ಸಮಯಕ್ಕೆ ತಕ್ಕಂತೆ ಪರಿಷ್ಕರಣೆಯಾಗಬೇಕು. ರಾಜ್ಯಕ್ಕೆ ನ್ಯಾಯ ದೊರೆಯಬೇಕು’ ಎಂದು ಸಭಿಕರು ಒತ್ತಾಯಿಸಿದರು.</p>.<p>ಮತ್ತೊಂದು ಪೂರ್ವಭಾವಿ ಸಭೆಯನ್ನು ಸೆ.23ರಂದು ಸಂಜೆ 4ಕ್ಕೆ ಜಲದರ್ಶಿನಿಯಲ್ಲಿ ನಡೆಸಲಾಗುವುದು. ಅಂದು ಮುಂದಿನ ಹೋರಾಟದ ರೂಪುರೇಷೆ ಸಿದ್ಧವಾಗಲಿದೆ ಎಂದು ಸಭೆ ತಿಳಿಸಿತು.</p>.<p>ಸಭೆಯಲ್ಲಿ ಎಸ್.ಡಿ ರಾಜೇಶ್, ಎಂ.ಮಂಜುನಾಥ್, ಬಿ.ಕೆ.ರಾಜೇಶ್, ಎಂ.ಜೆ.ಸುರೇಶ್ ಗೌಡ, ಎಸ್.ಬಸಪ್ಪ, ಎಂ.ಜಯಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>