<p><strong>ಮೈಸೂರು:</strong> ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಖಾಸಗಿಯವರು ಅಕ್ರಮವಾಗಿ ಕೆರೆ ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ತೆರವುಗೊಳಿಸಿತು.</p>.<p>ಬೆಳಿಗ್ಗೆ ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಜೆಸಿಬಿ ಮೂಲಕ ಒತ್ತುವರಿ ಜಾಗದಲ್ಲಿ ಹಾಕಲಾಗಿದ್ದ ಎರಡು ನಾಮಫಲಕಗಳನ್ನು ತೆರವುಗೊಳಿಸಲಾಯಿತು. ಕಾಂಕ್ರೀಟ್ ಗೋಡೆಗಳನ್ನೂ ಭಾಗಶಃ ತೆರವು ಮಾಡಲಾಯಿತು.</p>.<p>ಈ ವೇಳೆ ಒತ್ತುವರಿ ಮಾಡಿಕೊಂಡವರು ಬಂದು ನಾವೇ ತೆರವುಗೊಳಿಸುತ್ತೇವೆ. ಸಮಯಾವಕಾಶ ನೀಡಿ ಎಂದು ಮನವಿ ಮಾಡಿದರು. ಆರಂಭದಲ್ಲಿ ಅಧಿಕಾರಿಗಳು ನಿರಾಕರಿಸಿದರು.</p>.<p>ಬಳಿಕ ತಹಶೀಲ್ದಾರ್ ಮಹೇಶ್ ಕುಮಾರ್, ‘ತೆರವುಗೊಳಿಸಲು ಒಂದು ದಿನ ಕಾಲಾವಕಾಶ ನೀಡುತ್ತೇವೆ. ಸೋಮವಾರ ಪರಿಶೀಲನೆಗೆ ಬರುವಾಗ ತೆರವಾಗದಿದ್ದರೆ, ಯಾವುದೇ ಅವಕಾಶ ನೀಡದೆ, ಒತ್ತುವರಿ ತೆರವುಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿ ತೆರಳಿದರು. </p>.<p>ಈ ಬಗ್ಗೆ ಶಾಸಕ ಟಿ.ಎಸ್.ಶ್ರೀವತ್ಸ ಧ್ವನಿ ಎತ್ತಿದ್ದರು. ‘ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆಗೆ ಹೊಂದಿಕೊಂಡಿರುವ ವಿಶೇಷ ಕೃಷಿ ವಲಯದ ಭೂಮಿಯನ್ನು ನಿಯಮ ಬಾಹಿರವಾಗಿ ವಸತಿ ವಲಯವಾಗಿ ಭೂ ಪರಿವರ್ತನೆ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಅನುಮೋದನೆ ನೀಡಿದೆ’ ಎಂದು ಆರೋಪಿಸಿದ್ದರು. </p>.<p>‘ರೀಬಿ ಪೀಟರ್, ರಾಣಿ ಪೀಟರ್ ಮತ್ತು ಇತರರು ಸರ್ವೆ ಸಂಖ್ಯೆ 36, 37, 47, 75ರಲ್ಲಿನ ಸುಮಾರು 50 ಎಕರೆ ಭೂಮಿಯನ್ನು ವಸತಿ ವಲಯವಾಗಿ ಪರಿವರ್ತಿಸಲು ಮತ್ತು ಕಮರ್ಶಿಯಲ್ ಉಪಯೋಗಕ್ಕೆ ಬಳಸಲು ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಂಡಿಎ 2025ರ ಆ.8ರಂದು ಸಾಮಾನ್ಯ ಸಭೆ ನಡೆಸಿ, 47 ಎಕರೆ 55 ಗುಂಟೆಯನ್ನು ಭೂ ಪರಿವರ್ತನೆಗೆ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಿತ್ತು’ ಎಂದು ತಿಳಿಸಿದ್ದರು. </p>.<p>‘ಶಿವರಾತ್ರಿ ಹಬ್ಬ ಮುಗಿಯುವುದರೊಳಗೆ ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೇ ನಾವೇ ತೆರವು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು.</p>.<p>‘ಈ ಸ್ಥಳದಲ್ಲಿ 6.10 ಎಕರೆ ಜಾಗ ಕೆರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ. ಹಾಗಾಗಿ ಇಂದು ಸ್ಥಳ ಪರಿಶೀಲನೆ ಮಾಡಿದ್ದೇವೆ. ಸುಮಾರು 3 ಎಕರೆ ಜಾಗ ತೆರವುಗೊಳಿಸಿದ್ದೇವೆ. ಒತ್ತುವರಿ ಮಾಡಿದವರು ಮನವಿ ಮಾಡಿದ ಕಾರಣ, ಅವರೇ ತೆರವುಗೊಳಿಸಲು ಅವಕಾಶ ನೀಡಿದ್ದೇವೆ’ ಎಂದು ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>
<p><strong>ಮೈಸೂರು:</strong> ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಖಾಸಗಿಯವರು ಅಕ್ರಮವಾಗಿ ಕೆರೆ ಒತ್ತುವರಿ ಮಾಡಿರುವುದನ್ನು ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ತೆರವುಗೊಳಿಸಿತು.</p>.<p>ಬೆಳಿಗ್ಗೆ ಪೊಲೀಸರ ನೆರವಿನೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಜೆಸಿಬಿ ಮೂಲಕ ಒತ್ತುವರಿ ಜಾಗದಲ್ಲಿ ಹಾಕಲಾಗಿದ್ದ ಎರಡು ನಾಮಫಲಕಗಳನ್ನು ತೆರವುಗೊಳಿಸಲಾಯಿತು. ಕಾಂಕ್ರೀಟ್ ಗೋಡೆಗಳನ್ನೂ ಭಾಗಶಃ ತೆರವು ಮಾಡಲಾಯಿತು.</p>.<p>ಈ ವೇಳೆ ಒತ್ತುವರಿ ಮಾಡಿಕೊಂಡವರು ಬಂದು ನಾವೇ ತೆರವುಗೊಳಿಸುತ್ತೇವೆ. ಸಮಯಾವಕಾಶ ನೀಡಿ ಎಂದು ಮನವಿ ಮಾಡಿದರು. ಆರಂಭದಲ್ಲಿ ಅಧಿಕಾರಿಗಳು ನಿರಾಕರಿಸಿದರು.</p>.<p>ಬಳಿಕ ತಹಶೀಲ್ದಾರ್ ಮಹೇಶ್ ಕುಮಾರ್, ‘ತೆರವುಗೊಳಿಸಲು ಒಂದು ದಿನ ಕಾಲಾವಕಾಶ ನೀಡುತ್ತೇವೆ. ಸೋಮವಾರ ಪರಿಶೀಲನೆಗೆ ಬರುವಾಗ ತೆರವಾಗದಿದ್ದರೆ, ಯಾವುದೇ ಅವಕಾಶ ನೀಡದೆ, ಒತ್ತುವರಿ ತೆರವುಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿ ತೆರಳಿದರು. </p>.<p>ಈ ಬಗ್ಗೆ ಶಾಸಕ ಟಿ.ಎಸ್.ಶ್ರೀವತ್ಸ ಧ್ವನಿ ಎತ್ತಿದ್ದರು. ‘ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆಗೆ ಹೊಂದಿಕೊಂಡಿರುವ ವಿಶೇಷ ಕೃಷಿ ವಲಯದ ಭೂಮಿಯನ್ನು ನಿಯಮ ಬಾಹಿರವಾಗಿ ವಸತಿ ವಲಯವಾಗಿ ಭೂ ಪರಿವರ್ತನೆ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಅನುಮೋದನೆ ನೀಡಿದೆ’ ಎಂದು ಆರೋಪಿಸಿದ್ದರು. </p>.<p>‘ರೀಬಿ ಪೀಟರ್, ರಾಣಿ ಪೀಟರ್ ಮತ್ತು ಇತರರು ಸರ್ವೆ ಸಂಖ್ಯೆ 36, 37, 47, 75ರಲ್ಲಿನ ಸುಮಾರು 50 ಎಕರೆ ಭೂಮಿಯನ್ನು ವಸತಿ ವಲಯವಾಗಿ ಪರಿವರ್ತಿಸಲು ಮತ್ತು ಕಮರ್ಶಿಯಲ್ ಉಪಯೋಗಕ್ಕೆ ಬಳಸಲು ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಂಡಿಎ 2025ರ ಆ.8ರಂದು ಸಾಮಾನ್ಯ ಸಭೆ ನಡೆಸಿ, 47 ಎಕರೆ 55 ಗುಂಟೆಯನ್ನು ಭೂ ಪರಿವರ್ತನೆಗೆ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಿತ್ತು’ ಎಂದು ತಿಳಿಸಿದ್ದರು. </p>.<p>‘ಶಿವರಾತ್ರಿ ಹಬ್ಬ ಮುಗಿಯುವುದರೊಳಗೆ ಒತ್ತುವರಿ ತೆರವು ಮಾಡಬೇಕು. ಇಲ್ಲದಿದ್ದರೇ ನಾವೇ ತೆರವು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದರು.</p>.<p>‘ಈ ಸ್ಥಳದಲ್ಲಿ 6.10 ಎಕರೆ ಜಾಗ ಕೆರೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ. ಹಾಗಾಗಿ ಇಂದು ಸ್ಥಳ ಪರಿಶೀಲನೆ ಮಾಡಿದ್ದೇವೆ. ಸುಮಾರು 3 ಎಕರೆ ಜಾಗ ತೆರವುಗೊಳಿಸಿದ್ದೇವೆ. ಒತ್ತುವರಿ ಮಾಡಿದವರು ಮನವಿ ಮಾಡಿದ ಕಾರಣ, ಅವರೇ ತೆರವುಗೊಳಿಸಲು ಅವಕಾಶ ನೀಡಿದ್ದೇವೆ’ ಎಂದು ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>