ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಶನಿವಾರ ಮಹಾರಾಜ ಕಾಲೇಜಿನ ನೂತನ ಕಟ್ಟಡದಲ್ಲಿ ಸಿಂಡಿಕೇಟ್ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಡಿಸಿಪಿ, ‘ಟೈಂ ಪಾಸಿಗಾಗಿ ಓದುವುದನ್ನು ಬಿಡಿ. ನಿಮ್ಮೊಳಗಿನ ಎಲ್ಲ ವೈಫಲ್ಯಗಳನ್ನು ಬದಿಗೊತ್ತಿ. ಗುರುವಿನ ಮಾರ್ಗದರ್ಶನ, ತಂದೆ–ತಾಯಿಯ ಬೆಂಬಲದೊಂದಿಗೆ, ನಿಮ್ಮಲ್ಲಿರುವ ಆತ್ಮವಿಶ್ವಾಸದ ಛಲದೊಂದಿಗೆ ಮುನ್ನುಗಿ. ಯಶಸ್ಸು ಎಂಬುದು ಕಟ್ಟಿಟ್ಟ ಬುತ್ತಿಯಾಗಿರಲಿದೆ’ ಎಂದು ಹೇಳಿದರು.