ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ವನ್ಯಜೀವಿ ಸಂರಕ್ಷಣೆ ಜಾಗೃತಿಗೆ ಸೈಕಲ್ ಜಾಥಾ

Last Updated 6 ಅಕ್ಟೋಬರ್ 2020, 2:19 IST
ಅಕ್ಷರ ಗಾತ್ರ

ಹುಣಸೂರು: 66ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ರಣಹದ್ದುಗಳು ಭವಿಷ್ಯಕ್ಕಾಗಿ ಜಾಥಾ ಮತ್ತು ಅರಿವು ಸೈಕಲ್ ಜಾಥಾಕ್ಕೆ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ವೀರನಹೊಸಹಳ್ಳಿಯಲ್ಲಿ ಚಾಲನೆ ನೀಡಿದರು.

‘ರಾಜ್ಯದಾದ್ಯಂತ ಅ. 2ರಿಂದ 8ರವರಗೆ ನಡೆಯಲಿರುವ ಸಪ್ತಾಹದಲ್ಲಿ ಆನೆ ಚಲನವಲನ ಪಥ ಸಂರಕ್ಷಣೆ ವಿಷಯವನ್ನು ಕೇಂದ್ರೀಕೃತವಾಗಿ ಅರಣ್ಯದಂಚಿನ ನಾಗರಿಕರಲ್ಲಿ ಅರಿವು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಮುತ್ತೋಡಿಯಿಂದ ಬೆಂಗಳೂರುವರೆಗೆ ಸೈಕಲ್ ಜಾಥಾ ನಡೆದಿದೆ’ ಎಂದರು.

ಜಾಥಾ ಅ. 4ರಂದು ನಾಗರಹೊಳೆ ತಲುಪಿ, ಅ. 5ರಂದು ಮೈಸೂರು ಮಾರ್ಗವಾಗಿಬೆಂಗಳೂರಿನತ್ತ ತೆರಳಿತು.

ಆನ್ ಲೈನ್ ಸ್ಪರ್ಧೆ: ಅರಣ್ಯದಲ್ಲಿ ವಿವಿಧ ಸೂಕ್ಷ್ಮ ಪ್ರಾಣಿ ಪಕ್ಷಿಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ವಿವಿಧ ರೀತಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಆನ್ ಲೈನ್ ಮೂಲಕ ಸ್ಪರ್ಧೆ ಹಮ್ಮಿಕೊಂಡು ಜಾಗೃತಿ ಮೂಡಿಸುವ ದಿಕ್ಕಿನಲ್ಲಿ ಇಲಾಖೆ ಹೆಜ್ಜೆ ಹಾಕಿದೆ ಎಂದರು.

ಕಾರ್ಯಕ್ರಮದಲ್ಲಿ ಎಸಿಎಫ್, ಸತೀಶ್, ವೀರನಹೊಸಹಳ್ಳಿ ಆರ್.ಎಫ್.ಒ ರವೀಂದ್ರ ಮೇಟಿಕುಪ್ಪೆ ವನ್ಯಜೀವಿ ವಲಯದ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT