ಮೈಸೂರು: ಕ್ರೈಸ್ತ ಧರ್ಮದ ಗುರು ರಾಯಪ್ಪ ದೀಪಕ್ (58) ಇಲ್ಲಿನ ಬೋಗಾದಿಯ ಕೃಪಾಲಯದಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.
ಡೋರನಹಳ್ಳಿಯ ಇವರು ಕಪುಚಿನ್ ಸಭೆಯ ಗುರುಗಳಾಗಿ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಇವರ ಪಾರ್ಥಿವ ಶರೀರವನ್ನು ಕೃಪಾಲಯದ ಗುಡಿ ಯೊಳಗೆ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಜುಲೈ 25ರ ಬೆಳಿಗ್ಗೆ 9.30ಕ್ಕೆ ಮೈಸೂರಿನ ಬಿಷಪ್ ಡಾ.ಕೆ.ಎ.ವಿಲಿಯಂ ಅಂತಿಮ ಪೂಜೆ ನಡೆಸಲಿದ್ದಾರೆ.