<p>ಮೈಸೂರು: ‘ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘ ಮತ್ತು ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟವು ಜ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಹಮ್ಮಿಕೊಂಡಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸಿ. ಚಿರಣ್ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಂಡಿದ್ದು, ರಾಜ್ಯದ ವಿಶೇಷ ಶಾಲೆಗಳ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಹಾಗೂ ಯಾವುದೇ ಅನುದಾನ ಪಡೆಯದ 25<br />ವರ್ಷ ಮೀರಿದ ಬುದ್ಧಿಮಾಂದ್ಯ ಯುವಜನರು ಮತ್ತವರ ಪೋಷಕರು ಭಾಗಿಯಾಗಲಿದ್ದಾರೆ. 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದರು.</p>.<p>‘ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದಲ್ಲಿ ಶಿಶು ಕೇಂದ್ರೀಕೃತ ಅನುದಾನ ಪಡೆಯುತ್ತಿರುವ ಶಿಕ್ಷಕ–<br />ಶಿಕ್ಷಕೇತರ ಸಿಬ್ಬಂದಿಗೆ 1982ರ ಅನು<br />ದಾನದ ಅಡಿ ದೊರಕುವ ಎಲ್ಲ ಸೌಲಭ್ಯ<br />ನೀಡಬೇಕು. ಇಲಾಖಿ ನಿರ್ದೇಶಕರು<br />ವಿಶೇಷ ಶಾಲೆಗಳ ಅನುದಾನವನ್ನು ಶೇ<br />40ರಷ್ಟು ಏರಿಸುವಂತೆ ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಬೇಕು. ಸುಪ್ರೀಂ<br />ಕೋರ್ಟ್ ಆದೇಶದಂತೆ ಶಿಕ್ಷಕರಿಗೆ<br />ಪೂರ್ಣ ಪ್ರಮಾಣದ ಭತ್ಯೆ, ಆರ್ಥಿಕ<br />ಸೌಲಭ್ಯ ನೀಡಬೇಕು. ಶಿಶುಕೇಂದ್ರಿತ ಸಹಾಯಧನ ಯೋಜನೆ ಮಾರ್ಗಸೂಚಿಯನ್ನು 5 ವರ್ಷಕ್ಕೊಮ್ಮೆ ಪುನರ್ ರಚಿಸಬೇಕು. ವಿಶೇಷ ಶಾಲೆಗಳಿಗೆ ವರ್ಷಕ್ಕೆ ಎರಡು ಕಂತುಗಳಲ್ಲಿಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.</p>.<p>ವಿಶೇಷ ಶಾಲೆಗಳ ಮುಖ್ಯಸ್ಥರಾದ ಬಿ.ವಿ. ಪಾಂಡು, ನವೀನ್, ಸುಧಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘ ಮತ್ತು ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟವು ಜ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಹಮ್ಮಿಕೊಂಡಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸಿ. ಚಿರಣ್ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಂಡಿದ್ದು, ರಾಜ್ಯದ ವಿಶೇಷ ಶಾಲೆಗಳ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಹಾಗೂ ಯಾವುದೇ ಅನುದಾನ ಪಡೆಯದ 25<br />ವರ್ಷ ಮೀರಿದ ಬುದ್ಧಿಮಾಂದ್ಯ ಯುವಜನರು ಮತ್ತವರ ಪೋಷಕರು ಭಾಗಿಯಾಗಲಿದ್ದಾರೆ. 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದರು.</p>.<p>‘ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದಲ್ಲಿ ಶಿಶು ಕೇಂದ್ರೀಕೃತ ಅನುದಾನ ಪಡೆಯುತ್ತಿರುವ ಶಿಕ್ಷಕ–<br />ಶಿಕ್ಷಕೇತರ ಸಿಬ್ಬಂದಿಗೆ 1982ರ ಅನು<br />ದಾನದ ಅಡಿ ದೊರಕುವ ಎಲ್ಲ ಸೌಲಭ್ಯ<br />ನೀಡಬೇಕು. ಇಲಾಖಿ ನಿರ್ದೇಶಕರು<br />ವಿಶೇಷ ಶಾಲೆಗಳ ಅನುದಾನವನ್ನು ಶೇ<br />40ರಷ್ಟು ಏರಿಸುವಂತೆ ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಬೇಕು. ಸುಪ್ರೀಂ<br />ಕೋರ್ಟ್ ಆದೇಶದಂತೆ ಶಿಕ್ಷಕರಿಗೆ<br />ಪೂರ್ಣ ಪ್ರಮಾಣದ ಭತ್ಯೆ, ಆರ್ಥಿಕ<br />ಸೌಲಭ್ಯ ನೀಡಬೇಕು. ಶಿಶುಕೇಂದ್ರಿತ ಸಹಾಯಧನ ಯೋಜನೆ ಮಾರ್ಗಸೂಚಿಯನ್ನು 5 ವರ್ಷಕ್ಕೊಮ್ಮೆ ಪುನರ್ ರಚಿಸಬೇಕು. ವಿಶೇಷ ಶಾಲೆಗಳಿಗೆ ವರ್ಷಕ್ಕೆ ಎರಡು ಕಂತುಗಳಲ್ಲಿಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.</p>.<p>ವಿಶೇಷ ಶಾಲೆಗಳ ಮುಖ್ಯಸ್ಥರಾದ ಬಿ.ವಿ. ಪಾಂಡು, ನವೀನ್, ಸುಧಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>