ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ: ಬಾಲಕನನ್ನು ಕೊಂದ ಹುಲಿ ಸೆರೆ ಕಾರ್ಯಾಚರಣೆಗೆ‌ ದಸರೆ ಆನೆ ಅರ್ಜುನ

Published 5 ಸೆಪ್ಟೆಂಬರ್ 2023, 4:39 IST
Last Updated 5 ಸೆಪ್ಟೆಂಬರ್ 2023, 4:39 IST
ಅಕ್ಷರ ಗಾತ್ರ

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕಲ್ಲಹಟ್ಟಿಯಲ್ಲಿ ಬಾಲಕನನ್ನು ಕೊಂದ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ದಸರೆ ಆನೆ 'ಅರ್ಜುನ' ಮಂಗಳವಾರ ತೆರಳಿದ್ದಾನೆ.

ದಸರಾ ಗಜಪಡೆಯ ಸದಸ್ಯನಾದ ಅರ್ಜುನನೊಂದಿಗೆ ಮತ್ತೊಂದು ಆನೆ 'ಮಹೇಂದ್ರ' ಕೂಡ ಅರಮನೆ ಗಜಪಡೆ ಪ್ರವೇಶ ಕಾರ್ಯದ ನಂತರ ತೆರಳಲಿದ್ದಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು 'ಪ್ರಜಾವಾಣಿ'ಗೆ ತಿಳಿಸಿದರು.

'ಇಂದು ಮಧ್ಯಾಹ್ನ 12ಕ್ಕೆ ಅರಮನೆಗೆ ಗಜಪಡೆ ಪ್ರವೇಶ ನಡೆಯಲಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳನ್ನು ಅರಮನೆ ಮಂಡಳಿ ಹಾಗೂ ಜಿಲ್ಲಾಡಳಿತ ಸಾಂಪ್ರಾದಾಯಿಕವಾಗಿ‌ ಪೂಜೆ ಸಲ್ಲಿಸಿ ಸ್ವಾಗತಿಸಲಿದೆ. ಅರ್ಜುನ ಬೆಳಿಗ್ಗೆಯೇ ಕಲ್ಲಹಟ್ಟಿಗೆ ತೆರಳಿದ್ದಾನೆ. ಸಂಜೆ ವೇಳೆ ಮಹೇಂದ್ರ ತೆರಳುವನು' ಎಂದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೇಟಿ ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಲ್ಲಹಟ್ಟಿಯ ಕೃಷ್ಣ ನಾಯಕ್‌ ಪುತ್ರ ಚರಣ್‌ ನಾಯಕ್‌ (8) ಹುಲಿದಾಳಿಯಿಂದ ಸೋಮವಾರ ಮೃತಪಟ್ಟಿದ್ದನು.

ಅವನ ತೊಡೆ, ಕೈ ಮತ್ತು ದೇಹದ ಇತರ ಭಾಗವನ್ನು ತಿಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT