<p><strong>ಮೈಸೂರು</strong>: ‘ತುರ್ತು ಪರಿಸ್ಥಿತಿ ಬಡವರಿಗೆ ಒಳ್ಳೆಯದನ್ನು ಮಾಡಿತ್ತು. ಅದು ಬಡವರ ಪರವಿದ್ದ ಅಲೆ’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು. </p>.<p>ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ಕರಾಳ ದಿನ ಆಚರಿಸಿದೆ. ಆದರೆ, ತುರ್ತು ಪರಿಸ್ಥಿತಿಯು ರಾಜ್ಯದ ಪಾಲಿಗೆ ಕರುಣಾಳು ದಿನಗಳಾಗಿದ್ದವು. ವಾಸ್ತವ ಅರಿತು ಬಿಜೆಪಿಗರು ಮಾತನಾಡಲಿ’ ಎಂದರು.</p>.<p>‘ಹಳೇ ವಿಚಾರಗಳನ್ನೇ ಇನ್ನೆಷ್ಟು ದಿನ ಮಾತನಾಡಬೇಕು. ಪ್ರತಿಭಟನೆಯಿಂದ ಲಾಭವಿಲ್ಲ. ಆಗ ಡಿ.ದೇವರಾಜ ಅರಸು ಅವರು ಅಭಿವೃದ್ಧಿಗೆ ಬಳಸಿಕೊಂಡರು. ಅದರಿಂದ ದಲಿತರಿಗೆ, ಬಡವರಿಗಾದ ಲಾಭವನ್ನು ಯಾರೂ ವಿಶ್ಲೇಷಣೆ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷವಾಗಿದೆ. ಬಾಲಕರಾಗಿದ್ದಾಗ ಜೈಲು ಪಾಲಾಗಿದ್ದುದಾಗಿ ಆರ್.ಅಶೋಕ ಸುಳ್ಳು ಹೇಳುತ್ತಿದ್ದಾರೆ. ಬಾಲಕರನ್ನು ಜೈಲಿಗೆ ಹಾಕಲು ಸಾಧ್ಯವೇ’ ಎಂದು ಪ್ರಶ್ನಿಸಿದರು.</p>.<p>‘ಒಂದೇ ಮನೆಯವರೇಕೆ ಜೈಲಿನಲ್ಲಿದ್ದಾರೆ? ಪೋಕ್ಸೊ ಪ್ರಕರಣದಡಿ ಸ್ವಾಮೀಜಿಯೇಕೆ ಜೈಲಿಗೆ ಹೋಗಿದ್ದಾರೆ. ಮೋದಿ ಅವರ ಕಾರಿಗೆ ಚಪ್ಪಲಿ ತೂರಿಬಂದ ಕಾರಣವೇನು? ರಾಮಮಂದಿರ ಏಕೆ ಸೋರುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ಕಾರಣವೇ? ವರ್ತಮಾನದ ಸಂಕಷ್ಟಗಳ ಬಗ್ಗೆ ಅಶೋಕ ಮಾತನಾಡಲಿ’ ಎಂದು ಕಿಡಿಕಾರಿದರು.</p>.<p>‘ಪೆಟ್ರೋಲ್, ಹಾಲು ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ಬೆಲೆ ಹೆಚ್ಚಿಸುವುದಿಲ್ಲವೆಂದು, ಚುನಾವಣೆಗೆ ಮುನ್ನ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಚನ ಭ್ರಷ್ಟರಾಗಿದ್ದಾರೆ’ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ತುರ್ತು ಪರಿಸ್ಥಿತಿ ಬಡವರಿಗೆ ಒಳ್ಳೆಯದನ್ನು ಮಾಡಿತ್ತು. ಅದು ಬಡವರ ಪರವಿದ್ದ ಅಲೆ’ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು. </p>.<p>ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ಕರಾಳ ದಿನ ಆಚರಿಸಿದೆ. ಆದರೆ, ತುರ್ತು ಪರಿಸ್ಥಿತಿಯು ರಾಜ್ಯದ ಪಾಲಿಗೆ ಕರುಣಾಳು ದಿನಗಳಾಗಿದ್ದವು. ವಾಸ್ತವ ಅರಿತು ಬಿಜೆಪಿಗರು ಮಾತನಾಡಲಿ’ ಎಂದರು.</p>.<p>‘ಹಳೇ ವಿಚಾರಗಳನ್ನೇ ಇನ್ನೆಷ್ಟು ದಿನ ಮಾತನಾಡಬೇಕು. ಪ್ರತಿಭಟನೆಯಿಂದ ಲಾಭವಿಲ್ಲ. ಆಗ ಡಿ.ದೇವರಾಜ ಅರಸು ಅವರು ಅಭಿವೃದ್ಧಿಗೆ ಬಳಸಿಕೊಂಡರು. ಅದರಿಂದ ದಲಿತರಿಗೆ, ಬಡವರಿಗಾದ ಲಾಭವನ್ನು ಯಾರೂ ವಿಶ್ಲೇಷಣೆ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷವಾಗಿದೆ. ಬಾಲಕರಾಗಿದ್ದಾಗ ಜೈಲು ಪಾಲಾಗಿದ್ದುದಾಗಿ ಆರ್.ಅಶೋಕ ಸುಳ್ಳು ಹೇಳುತ್ತಿದ್ದಾರೆ. ಬಾಲಕರನ್ನು ಜೈಲಿಗೆ ಹಾಕಲು ಸಾಧ್ಯವೇ’ ಎಂದು ಪ್ರಶ್ನಿಸಿದರು.</p>.<p>‘ಒಂದೇ ಮನೆಯವರೇಕೆ ಜೈಲಿನಲ್ಲಿದ್ದಾರೆ? ಪೋಕ್ಸೊ ಪ್ರಕರಣದಡಿ ಸ್ವಾಮೀಜಿಯೇಕೆ ಜೈಲಿಗೆ ಹೋಗಿದ್ದಾರೆ. ಮೋದಿ ಅವರ ಕಾರಿಗೆ ಚಪ್ಪಲಿ ತೂರಿಬಂದ ಕಾರಣವೇನು? ರಾಮಮಂದಿರ ಏಕೆ ಸೋರುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ಕಾರಣವೇ? ವರ್ತಮಾನದ ಸಂಕಷ್ಟಗಳ ಬಗ್ಗೆ ಅಶೋಕ ಮಾತನಾಡಲಿ’ ಎಂದು ಕಿಡಿಕಾರಿದರು.</p>.<p>‘ಪೆಟ್ರೋಲ್, ಹಾಲು ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ಬೆಲೆ ಹೆಚ್ಚಿಸುವುದಿಲ್ಲವೆಂದು, ಚುನಾವಣೆಗೆ ಮುನ್ನ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಚನ ಭ್ರಷ್ಟರಾಗಿದ್ದಾರೆ’ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>