<p><strong>ಮೈಸೂರು</strong>: ‘ಹಾವೇರಿಯಲ್ಲಿರುವ ಕರ್ನಾಟಕ ಜಾನಪದ ವಿವಿಯು ಆಫ್ರಿಕನ್ ಜಾನಪದ ಕೃತಿ ಪ್ರಕಟಿಸಿ, ಮಾರಾಟಕ್ಕೆ ಬಿಡುಗಡೆ ಮಾಡಿದ್ದರೂ ಅದರ ರಚನೆಗಾಗಿ ಕೆಲಸ ಮಾಡಿದವರಿಗೆ ಗೌರವಧನ ನೀಡಿಲ್ಲ’ ಎಂದು ಕೃತಿಯ ಸಂಪಾದಕ, ಸಾಹಿತಿ ಹಾ.ತಿ. ಕೃಷ್ಣೇಗೌಡ ಆರೋಪಿಸಿದರು.</p>.<p>ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಪಂಚದ ಜಾನಪದ ವಿಚಾರಗಳನ್ನು ಕನ್ನಡಿಗರಿಗೆ ಸಿಗುವಂತೆ ಮಾಡುವ ಹಾಗೂ ಜಾನಪದದ ಅರಿವನ್ನು ವಿಸ್ತರಿಸಬೇಕೆಂಬ ಆಶಯದಲ್ಲಿ ವಿಶ್ವವಿದ್ಯಾಲಯ ಕನ್ನಡ ಜಾನಪದ ವಿಶ್ವಕೋಶ ಯೋಜನೆಗೆ ₹7 ಲಕ್ಷದ ಕ್ರಿಯಾಯೋಜನೆ ರಚಿಸಲಾಗಿತ್ತು’ ಎಂದರು.</p>.<p>‘ಆಫ್ರಿಕನ್ ಜಾನಪದ ಕೃತಿಯು 10 ಸಂಪುಟಗಳದ್ದಾಗಿದ್ದು, ನನ್ನ ನೇತೃತ್ವದಲ್ಲಿ ನಾಲ್ವರು ಸಂಪಾದಕರು, 30 ಮಂದಿ ಲೇಖಕರು ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ಕೃತಿಯು ಒಂದು ಸಾವಿರ ಮುದ್ರಣ ಕಂಡು (₹ 550 ಮಾರುಕಟ್ಟೆ ಬೆಲೆ) ಬಿಡುಗಡೆ ಆಗಿತ್ತು. ಕೆಲಸ ಮಾಡಿದವರಿಗೆಗ ಗೌರವಧನ ಕೊಡದೇ ಕಾಯಿಸಲಾಗುತ್ತಿದೆ’ ಎಂದು ದೂರಿದರು.</p>.<p>‘ಈ ಕೃತಿಗಾಗಿ ಶ್ರಮಿಸಿದ ಕೆಲವರು ಹಾಸಿಗೆ ಹಿಡಿದಿದ್ದಾರೆ. ಅವರ ಗೌರವಧನ ನೀಡಿದರೆ ಉಪಯೋಗ ಆಗುತ್ತದೆ ಎಂದು ಹಲವು ಬಾರಿ ಮನವಿ ಮಾಡಿದರೂ ಈಗಿನ ಕುಲಪತಿ ಸ್ಪಂದಿಸುತ್ತಿಲ್ಲ. ಇನ್ನಾದರೂ ಸ್ಪಂದಿಸದಿದ್ದಲ್ಲಿ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರ ಮೊರೆ ಹೋಗುತ್ತೇವೆ’ ಎಂದು ತಿಳಿಸಿದರು.</p>.<p>ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಮೋಹನ್ಕುಮಾರ್, ಚಂದ್ರಶೇಖರ್ ಗೊರವರ್, ಪ್ರೊ.ಶೋಭಾ, ಪಿ. ಗಿರೀಶ್, ಭಾರತಿ ಮರವಂತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಹಾವೇರಿಯಲ್ಲಿರುವ ಕರ್ನಾಟಕ ಜಾನಪದ ವಿವಿಯು ಆಫ್ರಿಕನ್ ಜಾನಪದ ಕೃತಿ ಪ್ರಕಟಿಸಿ, ಮಾರಾಟಕ್ಕೆ ಬಿಡುಗಡೆ ಮಾಡಿದ್ದರೂ ಅದರ ರಚನೆಗಾಗಿ ಕೆಲಸ ಮಾಡಿದವರಿಗೆ ಗೌರವಧನ ನೀಡಿಲ್ಲ’ ಎಂದು ಕೃತಿಯ ಸಂಪಾದಕ, ಸಾಹಿತಿ ಹಾ.ತಿ. ಕೃಷ್ಣೇಗೌಡ ಆರೋಪಿಸಿದರು.</p>.<p>ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರಪಂಚದ ಜಾನಪದ ವಿಚಾರಗಳನ್ನು ಕನ್ನಡಿಗರಿಗೆ ಸಿಗುವಂತೆ ಮಾಡುವ ಹಾಗೂ ಜಾನಪದದ ಅರಿವನ್ನು ವಿಸ್ತರಿಸಬೇಕೆಂಬ ಆಶಯದಲ್ಲಿ ವಿಶ್ವವಿದ್ಯಾಲಯ ಕನ್ನಡ ಜಾನಪದ ವಿಶ್ವಕೋಶ ಯೋಜನೆಗೆ ₹7 ಲಕ್ಷದ ಕ್ರಿಯಾಯೋಜನೆ ರಚಿಸಲಾಗಿತ್ತು’ ಎಂದರು.</p>.<p>‘ಆಫ್ರಿಕನ್ ಜಾನಪದ ಕೃತಿಯು 10 ಸಂಪುಟಗಳದ್ದಾಗಿದ್ದು, ನನ್ನ ನೇತೃತ್ವದಲ್ಲಿ ನಾಲ್ವರು ಸಂಪಾದಕರು, 30 ಮಂದಿ ಲೇಖಕರು ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ಕೃತಿಯು ಒಂದು ಸಾವಿರ ಮುದ್ರಣ ಕಂಡು (₹ 550 ಮಾರುಕಟ್ಟೆ ಬೆಲೆ) ಬಿಡುಗಡೆ ಆಗಿತ್ತು. ಕೆಲಸ ಮಾಡಿದವರಿಗೆಗ ಗೌರವಧನ ಕೊಡದೇ ಕಾಯಿಸಲಾಗುತ್ತಿದೆ’ ಎಂದು ದೂರಿದರು.</p>.<p>‘ಈ ಕೃತಿಗಾಗಿ ಶ್ರಮಿಸಿದ ಕೆಲವರು ಹಾಸಿಗೆ ಹಿಡಿದಿದ್ದಾರೆ. ಅವರ ಗೌರವಧನ ನೀಡಿದರೆ ಉಪಯೋಗ ಆಗುತ್ತದೆ ಎಂದು ಹಲವು ಬಾರಿ ಮನವಿ ಮಾಡಿದರೂ ಈಗಿನ ಕುಲಪತಿ ಸ್ಪಂದಿಸುತ್ತಿಲ್ಲ. ಇನ್ನಾದರೂ ಸ್ಪಂದಿಸದಿದ್ದಲ್ಲಿ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ರಾಜ್ಯಪಾಲರ ಮೊರೆ ಹೋಗುತ್ತೇವೆ’ ಎಂದು ತಿಳಿಸಿದರು.</p>.<p>ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಮೋಹನ್ಕುಮಾರ್, ಚಂದ್ರಶೇಖರ್ ಗೊರವರ್, ಪ್ರೊ.ಶೋಭಾ, ಪಿ. ಗಿರೀಶ್, ಭಾರತಿ ಮರವಂತೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>