<p><strong>ಮೈಸೂರು:</strong> ‘ಗ್ರಹಣದ ಬಗ್ಗೆ ಕನ್ನಡ ಸಾಹಿತ್ಯ ಲೋಕ ದೊಡ್ಡ ಪ್ರತಿರೋಧ ತೋರಿದೆ. ಕನ್ನಡದ ಪರಂಪರೆಗೆ ತಕ್ಕಂತೆ ಕನ್ನಡಿಗರು ಬದುಕಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಹೇಳಿದರು.</p>.<p>ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ಮಂಗಳವಾರ ಆಯೋಜಿಸಿದ್ದ ಚುಟುಕು ಕವಿ ಎಂ.ಅಕಬರ ಅಲಿ ಅವರ 101ನೇ ದಿನಾಚರಣೆಯಲ್ಲಿ ಮಾತನಾಡಿದರು. </p>.<p>‘ಗ್ರಹಣ ನಿಸರ್ಗದ ಸಾಮಾನ್ಯ ಕ್ರಿಯೆ. ಅದು ಜರುಗುತ್ತಲೇ ಇರುತ್ತದೆ. ಅದು ಮನುಷ್ಯನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಸವಾದಿ ಶರಣರು ರಾಹುಕಾಲ, ಗುಳಿಕಕಾಲ ಸೇರಿದಂತೆ ಪಂಚಾಂಗಗಳನ್ನು ತಿರಸ್ಕರಿಸಿದ್ದರು. ಪಂಪನಿಂದ ಕುವೆಂಪುವರೆಗೂ ಮೌಢ್ಯವನ್ನು ಕನ್ನಡ ಸಾಹಿತ್ಯ ಪರಂಪರೆ ವಿರೋಧಿಸಿದೆ. ವೈಚಾರಿಕತೆಯನ್ನು ಅಪ್ಪಿಕೊಂಡಿದೆ’ ಎಂದರು. </p>.<p>‘ವಿಜ್ಞಾನದಿಂದಲೇ ಎಲ್ಲವನ್ನೂ ಪಡೆದಿದ್ದೇವೆ. ಖಾರ ಅರೆಯುವುದು, ಅಕ್ಕಿ ರುಬ್ಬುವುದು ಸೇರಿದಂತೆ ಎಲ್ಲ ಕೆಲಸವನ್ನು ಹಿಂದಿನವರು ಕಲ್ಲಿನಲ್ಲಿ ಮಾಡುತ್ತಿದ್ದರು. ಈಗ ಯಂತ್ರ ಮಾಡುತ್ತಿದೆ. ವಿಜ್ಞಾನವನ್ನು ಮರೆತು ಅಜ್ಞಾನವನ್ನು ಮೈಮೇಲೆ ಎಳೆದುಕೊಂಡರೆ ಮತ್ತೆ ಶಿಲಾಯುಗಕ್ಕೆ ಹೋಗಬೇಕಾಗುತ್ತದೆ’ ಎಂದು ಹೇಳಿದರು. </p>.<p>ಕಾಂಗ್ರೆಸ್ ಮುಖಂಡ ಕೋಟೆ ಎಂ.ಶಿವಣ್ಣ, ಶ್ರೀನಿವಾಸ ಬಹದ್ದೂರ್, ಎಂಜಿಆರ್ ಅರಸ್, ಬಿ.ಆರ್.ನಟರಾಜ ಜೋಯಿಸ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಗ್ರಹಣದ ಬಗ್ಗೆ ಕನ್ನಡ ಸಾಹಿತ್ಯ ಲೋಕ ದೊಡ್ಡ ಪ್ರತಿರೋಧ ತೋರಿದೆ. ಕನ್ನಡದ ಪರಂಪರೆಗೆ ತಕ್ಕಂತೆ ಕನ್ನಡಿಗರು ಬದುಕಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್ ಹೇಳಿದರು.</p>.<p>ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ಮಂಗಳವಾರ ಆಯೋಜಿಸಿದ್ದ ಚುಟುಕು ಕವಿ ಎಂ.ಅಕಬರ ಅಲಿ ಅವರ 101ನೇ ದಿನಾಚರಣೆಯಲ್ಲಿ ಮಾತನಾಡಿದರು. </p>.<p>‘ಗ್ರಹಣ ನಿಸರ್ಗದ ಸಾಮಾನ್ಯ ಕ್ರಿಯೆ. ಅದು ಜರುಗುತ್ತಲೇ ಇರುತ್ತದೆ. ಅದು ಮನುಷ್ಯನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಸವಾದಿ ಶರಣರು ರಾಹುಕಾಲ, ಗುಳಿಕಕಾಲ ಸೇರಿದಂತೆ ಪಂಚಾಂಗಗಳನ್ನು ತಿರಸ್ಕರಿಸಿದ್ದರು. ಪಂಪನಿಂದ ಕುವೆಂಪುವರೆಗೂ ಮೌಢ್ಯವನ್ನು ಕನ್ನಡ ಸಾಹಿತ್ಯ ಪರಂಪರೆ ವಿರೋಧಿಸಿದೆ. ವೈಚಾರಿಕತೆಯನ್ನು ಅಪ್ಪಿಕೊಂಡಿದೆ’ ಎಂದರು. </p>.<p>‘ವಿಜ್ಞಾನದಿಂದಲೇ ಎಲ್ಲವನ್ನೂ ಪಡೆದಿದ್ದೇವೆ. ಖಾರ ಅರೆಯುವುದು, ಅಕ್ಕಿ ರುಬ್ಬುವುದು ಸೇರಿದಂತೆ ಎಲ್ಲ ಕೆಲಸವನ್ನು ಹಿಂದಿನವರು ಕಲ್ಲಿನಲ್ಲಿ ಮಾಡುತ್ತಿದ್ದರು. ಈಗ ಯಂತ್ರ ಮಾಡುತ್ತಿದೆ. ವಿಜ್ಞಾನವನ್ನು ಮರೆತು ಅಜ್ಞಾನವನ್ನು ಮೈಮೇಲೆ ಎಳೆದುಕೊಂಡರೆ ಮತ್ತೆ ಶಿಲಾಯುಗಕ್ಕೆ ಹೋಗಬೇಕಾಗುತ್ತದೆ’ ಎಂದು ಹೇಳಿದರು. </p>.<p>ಕಾಂಗ್ರೆಸ್ ಮುಖಂಡ ಕೋಟೆ ಎಂ.ಶಿವಣ್ಣ, ಶ್ರೀನಿವಾಸ ಬಹದ್ದೂರ್, ಎಂಜಿಆರ್ ಅರಸ್, ಬಿ.ಆರ್.ನಟರಾಜ ಜೋಯಿಸ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>