<p><strong>ಹನಗೋಡು</strong>: ಶಾಲಾ ಕೊಠಡಿಯೊಳಗೆ ಕುಳಿತು ಕಾಡು, ವನ್ಯಪ್ರಾಣಿಗಳು, ಪಕ್ಷಿ, ಗಿಡ-ಮರ ಹಾಗೂ ಪರಿಸರದ ಬಗ್ಗೆ ಅರಿಯುತ್ತಿದ್ದ ವಿದ್ಯಾರ್ಥಿಗಳು ನಾಗರಹೊಳೆ ಪ್ರಕೃತಿಯ ಮಡಿಲಿಗೆ ಭೇಟಿ ನೀಡಿ ಪರಿಸರ ಉಳಿವಿನ ಬಗ್ಗೆ ಮಾಹಿತಿ ಪಡೆದುಕೊಂಡರು.</p>.<p> ಹುಣಸೂರು ವನ್ಯಜೀವಿ ವಿಭಾಗದಿಂದ ಚಿಣ್ಣರ ವನ ದರ್ಶನ ಯೋಜನೆಯಡಿ ನೇರಳಕುಪ್ಪೆ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳನ್ನು ಎರಡು ದಿನ ನಾಗರಹೊಳೆ ರಾಷ್ಟೀಯ ಉದ್ಯಾನಕ್ಕೆ ಕರೆದೊಯ್ದು ಅರಣ್ಯದ ಮಹತ್ವ, ವನ್ಯಜೀವಿಗಳ ಸಂರಕ್ಷಣೆ, ಪರಿಸರ ಉಳಿವಿನ ಅಗತ್ಯತೆ ಕುರಿತು ಮಾಹಿತಿ ಪಡೆದರು.</p>.<p><strong>ಸಸ್ಯ ಕ್ಷೇತ್ರಕ್ಕೆ ಭೇಟಿ;</strong> ಹುಣಸೂರು ನಗರದ ಕಲ್ ಬೆಟ್ಟದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಹಾಗೂ ಅರಣ್ಯ ಇಲಾಖೆ ಕಚೇರಿ ಹಿಂಭಾಗದ ಇಲಾಖೆ ಸಸ್ಯ ಕ್ಷೇತ್ರಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದರು.</p>.<p>ಹುಣಸೂರು ವನ್ಯಜೀವಿ ವಲಯದ ಆರ್ ಎಪ್ ಒ.ಸುಬ್ರಮಣ್ಯ ಶ್ರೀಗಂಧ, ತೇಗ, ಬೀಟೆ, ಹೊನ್ನೆ, ಮತ್ತಿ, ನೆಲ್ಲಿಕಾಯಿ, ಬೂರಗ ಸೇರಿ ವಿವಿಧ ಜಾತಿಯ ಸಸಿಗಳನ್ನು ಪರಿಚಯಿಸಿ ಇವುಗಳ ಅಗತ್ಯತೆ ಹಾಗೂ ಈ ಮರಗಳಿಂದಾಗುವ ಅನುಕೂಲಗಳನ್ನು ತಿಳಿಸಿಕೊಟ್ಟರು.</p>.<p>‘ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿಣ್ಣರ ವನದರ್ಶನವೆಂಬ ಕಾರ್ಯಕ್ರಮ ಆಯೋಜಿಸಿದೆ, ಈ ಯೋಜನೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ವನ್ಯಜೀವಿ ಪ್ರೇಮ ಬೆಳೆಸುವಲ್ಲಿ ಸಹಕಾರಿಯಾಗಿದೆ’ ಎಂದು ಹುಣಸೂರು ವನ್ಯಜೀವಿ ವಲಯ ಆರ್ ಎಫ್ ಓ ಸುಬ್ರಮಣ್ಯ ತಿಳಿಸಿದರು.</p>.<p>ಈ ಸಂದರ್ಭದಲ್ಲಿ ಡಿ.ಆರ್.ಎಪ್.ಒ. ಪ್ರಮೋದ್, ಶಾಲಾ ಮುಖ್ಯಶಿಕ್ಷಕ ಕುಮಾರಸ್ವಾಮಿ, ಅರಣ್ಯ ರಕ್ಷಕ ಮಧು ಸೇರಿದಂತೆ ಶಾಲಾ ಶಿಕ್ಷಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನಗೋಡು</strong>: ಶಾಲಾ ಕೊಠಡಿಯೊಳಗೆ ಕುಳಿತು ಕಾಡು, ವನ್ಯಪ್ರಾಣಿಗಳು, ಪಕ್ಷಿ, ಗಿಡ-ಮರ ಹಾಗೂ ಪರಿಸರದ ಬಗ್ಗೆ ಅರಿಯುತ್ತಿದ್ದ ವಿದ್ಯಾರ್ಥಿಗಳು ನಾಗರಹೊಳೆ ಪ್ರಕೃತಿಯ ಮಡಿಲಿಗೆ ಭೇಟಿ ನೀಡಿ ಪರಿಸರ ಉಳಿವಿನ ಬಗ್ಗೆ ಮಾಹಿತಿ ಪಡೆದುಕೊಂಡರು.</p>.<p> ಹುಣಸೂರು ವನ್ಯಜೀವಿ ವಿಭಾಗದಿಂದ ಚಿಣ್ಣರ ವನ ದರ್ಶನ ಯೋಜನೆಯಡಿ ನೇರಳಕುಪ್ಪೆ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳನ್ನು ಎರಡು ದಿನ ನಾಗರಹೊಳೆ ರಾಷ್ಟೀಯ ಉದ್ಯಾನಕ್ಕೆ ಕರೆದೊಯ್ದು ಅರಣ್ಯದ ಮಹತ್ವ, ವನ್ಯಜೀವಿಗಳ ಸಂರಕ್ಷಣೆ, ಪರಿಸರ ಉಳಿವಿನ ಅಗತ್ಯತೆ ಕುರಿತು ಮಾಹಿತಿ ಪಡೆದರು.</p>.<p><strong>ಸಸ್ಯ ಕ್ಷೇತ್ರಕ್ಕೆ ಭೇಟಿ;</strong> ಹುಣಸೂರು ನಗರದ ಕಲ್ ಬೆಟ್ಟದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಹಾಗೂ ಅರಣ್ಯ ಇಲಾಖೆ ಕಚೇರಿ ಹಿಂಭಾಗದ ಇಲಾಖೆ ಸಸ್ಯ ಕ್ಷೇತ್ರಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದರು.</p>.<p>ಹುಣಸೂರು ವನ್ಯಜೀವಿ ವಲಯದ ಆರ್ ಎಪ್ ಒ.ಸುಬ್ರಮಣ್ಯ ಶ್ರೀಗಂಧ, ತೇಗ, ಬೀಟೆ, ಹೊನ್ನೆ, ಮತ್ತಿ, ನೆಲ್ಲಿಕಾಯಿ, ಬೂರಗ ಸೇರಿ ವಿವಿಧ ಜಾತಿಯ ಸಸಿಗಳನ್ನು ಪರಿಚಯಿಸಿ ಇವುಗಳ ಅಗತ್ಯತೆ ಹಾಗೂ ಈ ಮರಗಳಿಂದಾಗುವ ಅನುಕೂಲಗಳನ್ನು ತಿಳಿಸಿಕೊಟ್ಟರು.</p>.<p>‘ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿಣ್ಣರ ವನದರ್ಶನವೆಂಬ ಕಾರ್ಯಕ್ರಮ ಆಯೋಜಿಸಿದೆ, ಈ ಯೋಜನೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ವನ್ಯಜೀವಿ ಪ್ರೇಮ ಬೆಳೆಸುವಲ್ಲಿ ಸಹಕಾರಿಯಾಗಿದೆ’ ಎಂದು ಹುಣಸೂರು ವನ್ಯಜೀವಿ ವಲಯ ಆರ್ ಎಫ್ ಓ ಸುಬ್ರಮಣ್ಯ ತಿಳಿಸಿದರು.</p>.<p>ಈ ಸಂದರ್ಭದಲ್ಲಿ ಡಿ.ಆರ್.ಎಪ್.ಒ. ಪ್ರಮೋದ್, ಶಾಲಾ ಮುಖ್ಯಶಿಕ್ಷಕ ಕುಮಾರಸ್ವಾಮಿ, ಅರಣ್ಯ ರಕ್ಷಕ ಮಧು ಸೇರಿದಂತೆ ಶಾಲಾ ಶಿಕ್ಷಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>