‘ಅಭಿವೃದ್ಧಿಯ ರಾಕ್ಷಸ ಅಂಬಾನಿಯೂ ಜಾಗತೀಕರಣದ ಫಲ. ಹಾಗೆಯೇ, ಹಳ್ಳಿಯ ರೈತರ ಆತ್ಮಹತ್ಯೆಯೂ ಜಾಗತೀಕರಣದ ಫಲ. ಎಲ್ಲ ದಮನಿತ ಜಾತಿಗಳು, ಹಳ್ಳಿಗಳು ಬಿಡುಗಡೆಗೆ ನಾಗರಿಕತೆಯ ಹಾದಿಯಲ್ಲಿ ಪಲ್ಲಟಗೊಳ್ಳುವಾಗ ಜಾಗತೀಕರಣವನ್ನು ವಾದಕ್ಕಾಗಿ ವಿರೋಧಿಸುವ ಬದಲು ಅದನ್ನು ಶೋಷಿತರ ವಿಮೋಚನೆಯ ನೆಲೆಯಲ್ಲೂ ಚಿಂತಿಸಬೇಕಿದೆ. ಜಾಗತೀಕರಣ ಮಾನವ ವಿಕಾಸದ ಪ್ರಕ್ರಿಯೆ. ಇದನ್ನು ತಾಳ್ಮೆಯಲ್ಲಿ ಅವಲೋಕಿಸಬೇಕು. ಅಖಂಡ ಮಾನವತ್ವದ ಕುವೆಂಪು ಸಂದೇಶವೇ ನಿಜವಾದ ಜಾಗತೀಕರಣ’ ಎಂದು ಹೇಳಿದ್ದಾರೆ.