<p><strong>ನವದೆಹಲಿ:</strong> ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆ.1) ದಾಖಲೆಯ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಅವರ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಮುಖ ಘೋಷಣೆಗಳು ಇಲ್ಲಿವೆ.</p><p>*16ನೇ ಹಣಕಾಸು ಆಯೋಗದ ವರದಿಯ ಮಂಡನೆ, ರಾಜ್ಯಗಳಿಗೆ ₹1.4 ಲಕ್ಷ ಕೋಟಿ ವಿತರಣೆ</p><p>ಕರ್ತವ್ಯ ಭವನದಲ್ಲಿ ಬಜೆಟ್ ಸಿದ್ಧಪಡಿಸಲಾಗಿದ್ದು, ಮೂರು ಕರ್ತವ್ಯಗಳ ಕುರಿತು ಉಲ್ಲೇಖ:</p><p>*ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು ಹಾಗೂ ಸ್ಥಿರತೆ ಕಾಪಾಡುವುದು</p><p>*ಜನರ ಆಕಾಂಕ್ಷೆಗಳನ್ನು ಈಡೇರಿಸುವುದು</p><p>*ಸಬ್ ಕಾ ಸಾಥ್, ಸಬ್ ಕಾ ವಿಕಾಸ್</p>.Union Budget: ಆದಾಯ ತೆರಿಗೆ ಬದಲಿಲ್ಲ, ತೆರಿಗೆ ವಿಳಂಬಕ್ಕಿನ್ನು ದಂಡ ಮಾತ್ರ.Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ .<p><strong>ಬಜೆಟ್ ಅಂದಾಜು:</strong></p>.<h2><strong>*ಪ್ರಮುಖ ಏಳು ವಲಯಗಳಲ್ಲಿ ಉತ್ಪಾದನೆ ಹೆಚ್ಚಳ</strong></h2><p>1. ಬಯೋಫಾರ್ಮಾ ಶಕ್ತಿ (ಭಾರತವನ್ನು ಜಾಗತಿಕ ಬಯೋ-ಫಾರ್ಮಾ ಹಬ್ ಆಗಿ ವೃದ್ಧಿಸುವುದು, ₹10,000 ಕೋಟಿ ಮೀಸಲು)</p><p>2. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ) 2.0 (ಕೈಗಾರಿಕಾ ಸಂಶೋಧನೆ ಮೇಲೆ ಗಮನ, ತರಬೇತಿ, ತಂತ್ರಜ್ಞಾನ ಕೇಂದ್ರ, ಕೌಶಲ್ಯ ವೃದ್ಧಿ)</p><p>3. ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಯೋಜನೆ (₹40,000 ಕೋಟಿ ಮೀಸಲು)</p><p>4. ಜೀವವೈವಿಧ್ಯ ಕಾರಿಡಾರ್ ( ಖನಿಜ ಸಮೃದ್ಧ ಒಡಿಶಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿಗೆ ಬೆಂಬಲ. ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆಗೆ ಉತ್ತೇಜನ)</p><p>5. 3 ರಾಸಾಯನಿಕ ಪಾರ್ಕ್ ಸ್ಥಾಪಿಸಲು ರಾಜ್ಯಗಳಿಗೆ ನೆರವು</p><p>6. ಬಂಡವಾಳ ಸರಕುಗಳ ಸಾಮರ್ಥ್ಯ ವೃದ್ಧಿ (ಹೈ-ಟೆಕ್ ಟೂಲ್ ರೂಮ್, ಸಿಐಇ, ಕಂಟೈನರ್ ಉತ್ಪಾದನೆ, ₹10,000 ಕೋಟಿ ಅನುದಾನ)</p><p>7. ಜವಳಿ ವಲಯಗಳಿಗೆ ಸಮಗ್ರ ಯೋಜನೆ ಘೋಷಣೆ (ಮೆಗಾ ಜವಳಿ ಪಾರ್ಕ್, ಖಾದಿ, ಕೈಮಗ್ಗ ಉತ್ತೇಜನ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮ)</p>.Union Budget 2026; ಬಜೆಟ್ ಮುಖ್ಯಾಂಶಗಳು .ಬಜೆಟ್ 2026: ವಿತ್ತ ಸಚಿವೆ ನಿರ್ಮಲಾ ಮಂಡಿಸಿದ ಆಯವ್ಯಯದ ಪ್ರಮುಖ 10 ಅಂಶಗಳು.<p>*ಹಳೆಯ ಕೈಗಾರಿಕಾ ವಲಯಗಳ ಪುನರುಜ್ಜೀವನ - 200ರಷ್ಟು ಕೈಗಾರಿಕಾ ಕ್ಲಸ್ಟರ್ಗಳ ಘೋಷಣೆ. ಉತ್ತೇಜನ. ಮೂಲಸೌಕರ್ಯ, ತಂತ್ರಜ್ಞಾನ ವೃದ್ಧಿ.</p><p>*ಮೈಕ್ರೊ ಉದ್ಯಮಗಳ ಉತ್ತೇಜನಕ್ಕೆ ಚಾಂಪಿಯನ್ ಎಸ್ಎಂಇ ಸ್ಥಾಪನೆ ( ₹10000 ಕೋಟಿ ನಿಧಿ), ಹೆಚ್ಚವರಿಯಾಗಿ ₹2000 ಕೋಟಿ ಸ್ವಾವಲಂಬಿ ಭಾರತ ನಿಧಿ </p><p>*ಮೂಲಸೌಕರ್ಯ ವೃದ್ಧಿ (2026-27ನೇ ಆರ್ಥಿಕ ಸಾಲಿನಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚ ₹12.2 ಲಕ್ಷ ಕೋಟಿಗೆ ಏರಿಕೆ)</p><p>*ಮೂಲಸೌಕರ್ಯ ಅಪಾಯ ಗ್ಯಾರಂಟಿ ನಿಧಿ ಸ್ಥಾಪನೆ, ಆರ್ಇಐಟಿ ಸ್ಥಾಪನೆ, ಸರಕು ಸಾಗಣೆ ಕಾರಿಡಾರ್</p><p>*20 ಹೊಸ ಜಲ ಮಾರ್ಗಗಳ ಘೋಷಣೆ, ಮುಂದಿನ ಐದು ವರ್ಷಗಳಲ್ಲಿ ಕಾರ್ಯಾಚರಣೆ,</p><p>*ತರಬೇತಿ ಕೇಂದ್ರ ಸ್ಥಾಪನೆ, ಹಡಗು ರಿಪೇರಿ ವ್ಯವಸ್ಥೆ</p><p>*ಕರಾವಳಿ ಕಾರ್ಗೊ ಉತ್ತೇಜನ ಯೋಜನೆ, ಸೀಪ್ಲೇನ್ ವಿಜಿಎಫ್ ಸ್ಕೀಮ್.</p><p>*ದೀರ್ಘಾವಧಿ ಇಂಧನ ಭದ್ರತೆ ಹಾಗೂ ಸ್ಥಿರತೆ ಯೋಜನೆ (ಮುಂದಿನ ಐದು ವರ್ಷಗಳಲ್ಲಿ ₹20,000 ಕೋಟಿ ಮೀಸಲು)</p>.ಬಜೆಟ್ ಅಂಕಿ-ಅಂಶಗಳು: ರೂಪಾಯಿ ಜಮೆ-ವೆಚ್ಚ ಹೇಗೆ?.ಕೇಂದ್ರ ಬಜೆಟ್ 140 ಕೋಟಿ ಭಾರತೀಯರ ಆಕಾಂಕ್ಷೆಗಳ ಪ್ರತಿಬಿಂಬ: ಮೋದಿ ಬಣ್ಣನೆ. <p><strong>ನಗರಗಳ ಅಭಿವೃದ್ಧಿ (5 ವರ್ಷಗಳಲ್ಲಿ ₹5000 ಕೋಟಿ ಅನುದಾನ)</strong></p><p><strong>ಏಳು ಹೈಸ್ಪೀಡ್ ರೈಲು ಕಾರಿಡಾರ್</strong> </p><ul><li><p>ಮುಂಬೈ-ಪುಣೆ,</p></li><li><p>ಪುಣೆ-ಹೈದರಾಬಾದ್,</p></li><li><p>ಹೈದರಾಬಾದ್-ಬೆಂಗಳೂರು,</p></li><li><p>ಹೈದರಾಬಾದ್-ಚೆನ್ನೈ,</p></li><li><p>ಚೆನ್ನೈ-ಬೆಂಗಳೂರು,</p></li><li><p>ದೆಹಲಿ-ವಾರಾಣಸಿ</p></li><li><p>ವಾರಾಣಸಿ-ಸಿಲಿಗುರಿ.</p></li></ul><p>*ಬ್ಯಾಕಿಂಗ್ ಫಾರ್ ವಿಕಸಿತ ಭಾರತಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆ</p><p>*ಉನ್ನತ ಮಟ್ಟದ 'ಶಿಕ್ಷಣದಿಂದ ಉದ್ಯಮ' ಸಮಿತಿ ರಚನೆ</p><p>*ಐದು ಪ್ರಾದೇಶಿಕ ವೈದ್ಯಕೀಯ ಹಬ್ಗಳ ರಚನೆ</p><p>*ಆಯುಷ್: 3 ಹೊಸ ಆಯುರ್ವೇದ ಸಂಸ್ಥೆಗಳ ಸ್ಥಾಪನೆ</p><p>*7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ. </p><p>*ಕ್ಯಾನ್ಸರ್ಗೆ ಸಂಬಂಧಿಸಿದ 17 ಪ್ರಮುಖ ಔಷಧಗಳ ಮೇಲಿನ ತೆರಿಗೆ ಕಡಿತ</p><p><strong>ಮುನ್ಸಿಪಲ್ ಬಾಂಡ್:</strong> </p><p>ಪುರಸಭೆಗಳು ಹೂಡಿಕೆದಾರರಿಗೆ ವಿತರಿಸುವ ಬಾಂಡ್ಗಳಾಗಿದ್ದು, ಇವುಗಳನ್ನು ಸಾಲಗಳೆಂದು ಪರಿಗಣಿಸಬಹುದು. ಉದ್ಯಾನವನಗಳು, ಗ್ರಂಥಾಲಯಗಳು, ಸೇತುವೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಂತಹ ಸಾರ್ವಜನಿಕ ಕಾರ್ಯಗಳಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ.</p><p><strong>ಪಶುವೈದ್ಯಕೀಯ:</strong> ವೃತ್ತಿಪರರ ಸಂಖ್ಯೆ 20,000 ಕ್ಕೆ ಏರಿಕೆ</p><p><strong>ಆರೆಂಜ್ ಆರ್ಥಿಕತೆ:</strong> </p><p>15,000 ಶಾಲೆಗಳು ಹಾಗೂ 500 ಕಾಲೇಜುಗಳಲ್ಲಿ ವಿಷುಯಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್ ವಿಷಯಗಳ ಪ್ರಯೋಗಾಲಯ ಸ್ಥಾಪಿಸಲು ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ಗೆ ಬೆಂಬಲ</p>.85 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್.Union Budget 2026: ಯಾವುದೆಲ್ಲ ಇಳಿಕೆ, ಯಾವುದೆಲ್ಲ ಏರಿಕೆ?.<p><strong>ಶಿಕ್ಷಣ:</strong></p><p>*5 ವಿಶ್ವವಿದ್ಯಾಲಯ ಟೌನ್ಶಿಪ್</p><p>*ಪ್ರತಿ ಜಿಲ್ಲೆಗಳಲ್ಲಿ ಒಂದು ಬಾಲಕಿಯರ ಹಾಸ್ಟೆಲ್ ಸ್ಥಾಪನೆ</p><p><strong>ಪ್ರವಾಸೋದ್ಯಮ:</strong></p><p>*20 ಸಾವಿರ ಪ್ರವಾಸಿ ತಾಣಗಳಲ್ಲಿ ಮಾಹಿತಿ ನೀಡಲು 10 ಸಾವಿರ ಗೈಡ್ಗಳಿಗೆ ತರಬೇತಿ,</p><p>*ನ್ಯಾಷನಲ್ ಡೆಸ್ಟಿನೇಷನ್ ಡಿಜಿಟಲ್ ನಾಲೆಡ್ಜ್ ಗ್ರಿಡ್ ರಚನೆ</p><p>*ಪರಂಪರೆ ಮತ್ತು ಸಂಸ್ಕೃತಿ ಪ್ರವಾಸೋದ್ಯಮ, </p><p>*15 ಪುರಾತತ್ವ ಸ್ಥಳಗಳ ವೃದ್ಧಿ</p><p><strong>ಕ್ರೀಡೆ:</strong></p><p>*ಖೇಲೊ ಇಂಡಿಯಾ ಮಿಷನ್ </p><p>*ರೈತರ ಆದಾಯ ಹೆಚ್ಚಳಕ್ಕೆ ಕ್ರಮ</p><p>*500 ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿ</p><p><strong>ಕೃಷಿಗೆ ಆದ್ಯತೆ</strong></p><p>*ಕರಾವಳಿಯಲ್ಲಿ ತೆಂಗು, ಗಂಧ, ಗೇರು ಬೆಳೆ ಉತ್ತೇಜನ</p><p>*ಭಾರತ್ ವಿಸ್ತಾರ್ ಎಐ ಯೋಜನೆ</p><p>*ಭಾರತ್ ವಿಸ್ತಾರ್ ಬಹುಭಾಷಾ ಎಐ ಟೂಲ್ ಮೂಲಕ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಿಗೆ ನೆರವು</p><p><strong>ಮಹಿಳೆಯರಿಗೆ ಲಕ್ಪತಿ ದೀದಿ ಯೋಜನೆಗೆ ಇನ್ನಷ್ಟು ಉತ್ತೇಜನ</strong></p><p>*ಉತ್ತರ ಭಾರತದಲ್ಲಿ ನಿಮ್ಹಾನ್ಸ್ ಸ್ಥಾಪನೆ</p><p>ದಿವ್ಯಾಂಜನ್ ಯೋಜನೆ ಮೂಲಕ ಕೃತಕ ಕಾಲು ತಯಾರಿಕಾ ಘಟಕಗಳಿಗೆ ತಂತ್ರಜ್ಞಾನ ನೆರವು ಮೂಲಕ ಅವುಗಳನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ</p><p><strong>ಪೂರ್ವೋದಯ:</strong> </p><p>*ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ</p><p>*ಈಸ್ಟ್ ಕೋಸ್ಟ್ ಇಂಡಸ್ಟ್ರಿಯರ್ ಕಾರಿಡಾರ್ ಸ್ಥಾಪನೆ</p><p>*ಈಶಾನ್ಯ ಭಾರತ– ಬುದ್ಧ ಸರ್ಕೀಟ್, ಅರುಣಾಚಲ, ಸಿಕ್ಕೀಂ, ಮೀಜೋರಾಂ, ತ್ರಿಪುರ, ಅಸ್ಸಾಂನಲ್ಲಿ</p>.Union Budget 2026: ದೇಶದ ಪ್ರತಿ ಜಿಲ್ಲೆಗೆ ಬಾಲಕಿಯರ ಹಾಸ್ಟೆಲ್ ಘೋಷಣೆ.ದಾಖಲೆಯ ಸತತ 9ನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್: ಇವರೇ ಮೊದಲು.<p><strong>ನೇರ ತೆರಿಗೆ</strong></p>. <p><strong>2026 ಏಪ್ರಿಲ್ನಲ್ಲಿ ಹೊಸ ತೆರಿಗೆ ಪದ್ಧತಿ ಜಾರಿ</strong></p><p>*ಆದಾಯ ತೆರಿಗೆ ನಿಯಮ ಸರಳೀಕರಣ,</p><p>*ಮೋಟಾರ್ ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ</p><p>*ಐಟಿ ವಲಯ ಭಾರತದ ಅಭಿವೃದ್ಧಿಯ ಎಂಜಿನ್</p><p>*ವಿಶೇಷ ಎಕಾನಮಿಕ್ ವಲಯ,</p><p>*ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ</p><p>*ಆದಾಯ ತೆರಿಗೆ ಪಾವತಿದಾರರ ಪರಿಷ್ಕೃತ ತೆರಿಗೆ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 31ರಿಂದ ಮಾರ್ಚ್ 31ರವರೆಗೆ ವಿಸ್ತರಣೆ</p><p>*ಆದಾಯ ತೆರಿಗೆ ಪಾವತಿ ವಿಳಂಬಕ್ಕೆ ಶೇ 10ರಷ್ಟು ದಂಡ ವಿಧಿಸಲು ನಿರ್ಧಾರ. </p><p>*ಸಣ್ಣ ತೆರಿಗೆದಾರರಿಗೆ ನಿಯಮ ಆಧಾರಿತ ಸ್ವಯಂಚಾಲಿತ ತೆರಿಗೆ ಸಲ್ಲಿಕೆ ವ್ಯವಸ್ಥೆ ಜಾರಿ </p><p>*ದೇಶ ಪ್ರವಾಸಗಳ ಮೇಲಿನ ಟಿಸಿಎಸ್ ಶೇ 2ಕ್ಕೆ ಇಳಿಕೆ</p><p>*ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಕಡಿತ</p><p>*ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್ ದರವನ್ನು ಶೇ 5 ರಿಂದ ಶೇ 2ಕ್ಕೆ ಇಳಿಕೆ</p><p>*ದೇಶದಲ್ಲಿ ಡೇಟಾ ಸೆಂಟರ್ಗಳನ್ನು ಬಳಸಿಕೊಂಡು ವಿಶ್ವದಾದ್ಯಂತ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ</p><p>*ಕೆಲವು ಷರತ್ತುಗಳಿಗೆ ಒಳಪಟ್ಟು ಸಂಬಂಧಪಟ್ಟ ಘಟಕಗಳಿಗೆ ತೆರಿಗೆ ರಜೆಯನ್ನು ವಿಸ್ತರಿಸಲಾಗುವುದು</p><p>*ಸಿಗರೇಟು, ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿದ ಕೇಂದ್ರ. </p><p>*ಭಾರತದ ಹೊರಗಡೆ ನೆಲೆಸಿರುವ ವ್ಯಕ್ತಿಗಳಿಗೆ ಪಟ್ಟಿ ಮಾಡಲಾದ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಅನುಮತಿ</p><p>*ಖಗೋಳ ಭೌತಶಾಸ್ತ್ರ ಮತ್ತು ಖಗೋಗಶಾಸ್ತ್ರ ಉತ್ತೇಜನಕ್ಕೆ ಟೆಲಿಸ್ಕಾಪ್ ಮೂಲಸೌಕರ್ಯದ ನವೀಕರಣ</p><p>*ಸುಮಾರು ಒಂದು ಗಂಟೆ 25 ನಿಮಿಷಗಳ ಕಾಲ ಬಜೆಟ್ ಭಾಷಣ ಮಂಡಿಸಿದ ನಿರ್ಮಲಾ ಸೀತಾರಾಮನ್ </p>.ಬಜೆಟ್: ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಬೆಸೆಯುವ ಹೈಸ್ಪೀಡ್ ರೈಲು ಕಾರಿಡಾರ್.ಬಜೆಟ್ನಲ್ಲಿ ‘ಕರ್ತವ್ಯ ಮಂತ್ರ’ ಪಠನೆ : ಸರ್ವರಿಗೂ ವಿತ್ತ ಸಚಿವೆಯ ಆದ್ಯತೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆ.1) ದಾಖಲೆಯ ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಅವರ ಬಜೆಟ್ ಭಾಷಣದಲ್ಲಿ ಮಾಡಿದ ಪ್ರಮುಖ ಘೋಷಣೆಗಳು ಇಲ್ಲಿವೆ.</p><p>*16ನೇ ಹಣಕಾಸು ಆಯೋಗದ ವರದಿಯ ಮಂಡನೆ, ರಾಜ್ಯಗಳಿಗೆ ₹1.4 ಲಕ್ಷ ಕೋಟಿ ವಿತರಣೆ</p><p>ಕರ್ತವ್ಯ ಭವನದಲ್ಲಿ ಬಜೆಟ್ ಸಿದ್ಧಪಡಿಸಲಾಗಿದ್ದು, ಮೂರು ಕರ್ತವ್ಯಗಳ ಕುರಿತು ಉಲ್ಲೇಖ:</p><p>*ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು ಹಾಗೂ ಸ್ಥಿರತೆ ಕಾಪಾಡುವುದು</p><p>*ಜನರ ಆಕಾಂಕ್ಷೆಗಳನ್ನು ಈಡೇರಿಸುವುದು</p><p>*ಸಬ್ ಕಾ ಸಾಥ್, ಸಬ್ ಕಾ ವಿಕಾಸ್</p>.Union Budget: ಆದಾಯ ತೆರಿಗೆ ಬದಲಿಲ್ಲ, ತೆರಿಗೆ ವಿಳಂಬಕ್ಕಿನ್ನು ದಂಡ ಮಾತ್ರ.Union Budget 2026: ಆರ್ಥಿಕ ಬೆಳವಣಿಗೆ, ಕುಟುಂಬ ಆದಾಯದ ಹೆಚ್ಚಳವೇ ನಿರ್ಮಲಾ ಆಯವ್ಯಯದ ಸೂತ್ರ .<p><strong>ಬಜೆಟ್ ಅಂದಾಜು:</strong></p>.<h2><strong>*ಪ್ರಮುಖ ಏಳು ವಲಯಗಳಲ್ಲಿ ಉತ್ಪಾದನೆ ಹೆಚ್ಚಳ</strong></h2><p>1. ಬಯೋಫಾರ್ಮಾ ಶಕ್ತಿ (ಭಾರತವನ್ನು ಜಾಗತಿಕ ಬಯೋ-ಫಾರ್ಮಾ ಹಬ್ ಆಗಿ ವೃದ್ಧಿಸುವುದು, ₹10,000 ಕೋಟಿ ಮೀಸಲು)</p><p>2. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ) 2.0 (ಕೈಗಾರಿಕಾ ಸಂಶೋಧನೆ ಮೇಲೆ ಗಮನ, ತರಬೇತಿ, ತಂತ್ರಜ್ಞಾನ ಕೇಂದ್ರ, ಕೌಶಲ್ಯ ವೃದ್ಧಿ)</p><p>3. ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಯೋಜನೆ (₹40,000 ಕೋಟಿ ಮೀಸಲು)</p><p>4. ಜೀವವೈವಿಧ್ಯ ಕಾರಿಡಾರ್ ( ಖನಿಜ ಸಮೃದ್ಧ ಒಡಿಶಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡಿಗೆ ಬೆಂಬಲ. ಗಣಿಗಾರಿಕೆ, ಸಂಸ್ಕರಣೆ, ಸಂಶೋಧನೆಗೆ ಉತ್ತೇಜನ)</p><p>5. 3 ರಾಸಾಯನಿಕ ಪಾರ್ಕ್ ಸ್ಥಾಪಿಸಲು ರಾಜ್ಯಗಳಿಗೆ ನೆರವು</p><p>6. ಬಂಡವಾಳ ಸರಕುಗಳ ಸಾಮರ್ಥ್ಯ ವೃದ್ಧಿ (ಹೈ-ಟೆಕ್ ಟೂಲ್ ರೂಮ್, ಸಿಐಇ, ಕಂಟೈನರ್ ಉತ್ಪಾದನೆ, ₹10,000 ಕೋಟಿ ಅನುದಾನ)</p><p>7. ಜವಳಿ ವಲಯಗಳಿಗೆ ಸಮಗ್ರ ಯೋಜನೆ ಘೋಷಣೆ (ಮೆಗಾ ಜವಳಿ ಪಾರ್ಕ್, ಖಾದಿ, ಕೈಮಗ್ಗ ಉತ್ತೇಜನ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮ)</p>.Union Budget 2026; ಬಜೆಟ್ ಮುಖ್ಯಾಂಶಗಳು .ಬಜೆಟ್ 2026: ವಿತ್ತ ಸಚಿವೆ ನಿರ್ಮಲಾ ಮಂಡಿಸಿದ ಆಯವ್ಯಯದ ಪ್ರಮುಖ 10 ಅಂಶಗಳು.<p>*ಹಳೆಯ ಕೈಗಾರಿಕಾ ವಲಯಗಳ ಪುನರುಜ್ಜೀವನ - 200ರಷ್ಟು ಕೈಗಾರಿಕಾ ಕ್ಲಸ್ಟರ್ಗಳ ಘೋಷಣೆ. ಉತ್ತೇಜನ. ಮೂಲಸೌಕರ್ಯ, ತಂತ್ರಜ್ಞಾನ ವೃದ್ಧಿ.</p><p>*ಮೈಕ್ರೊ ಉದ್ಯಮಗಳ ಉತ್ತೇಜನಕ್ಕೆ ಚಾಂಪಿಯನ್ ಎಸ್ಎಂಇ ಸ್ಥಾಪನೆ ( ₹10000 ಕೋಟಿ ನಿಧಿ), ಹೆಚ್ಚವರಿಯಾಗಿ ₹2000 ಕೋಟಿ ಸ್ವಾವಲಂಬಿ ಭಾರತ ನಿಧಿ </p><p>*ಮೂಲಸೌಕರ್ಯ ವೃದ್ಧಿ (2026-27ನೇ ಆರ್ಥಿಕ ಸಾಲಿನಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚ ₹12.2 ಲಕ್ಷ ಕೋಟಿಗೆ ಏರಿಕೆ)</p><p>*ಮೂಲಸೌಕರ್ಯ ಅಪಾಯ ಗ್ಯಾರಂಟಿ ನಿಧಿ ಸ್ಥಾಪನೆ, ಆರ್ಇಐಟಿ ಸ್ಥಾಪನೆ, ಸರಕು ಸಾಗಣೆ ಕಾರಿಡಾರ್</p><p>*20 ಹೊಸ ಜಲ ಮಾರ್ಗಗಳ ಘೋಷಣೆ, ಮುಂದಿನ ಐದು ವರ್ಷಗಳಲ್ಲಿ ಕಾರ್ಯಾಚರಣೆ,</p><p>*ತರಬೇತಿ ಕೇಂದ್ರ ಸ್ಥಾಪನೆ, ಹಡಗು ರಿಪೇರಿ ವ್ಯವಸ್ಥೆ</p><p>*ಕರಾವಳಿ ಕಾರ್ಗೊ ಉತ್ತೇಜನ ಯೋಜನೆ, ಸೀಪ್ಲೇನ್ ವಿಜಿಎಫ್ ಸ್ಕೀಮ್.</p><p>*ದೀರ್ಘಾವಧಿ ಇಂಧನ ಭದ್ರತೆ ಹಾಗೂ ಸ್ಥಿರತೆ ಯೋಜನೆ (ಮುಂದಿನ ಐದು ವರ್ಷಗಳಲ್ಲಿ ₹20,000 ಕೋಟಿ ಮೀಸಲು)</p>.ಬಜೆಟ್ ಅಂಕಿ-ಅಂಶಗಳು: ರೂಪಾಯಿ ಜಮೆ-ವೆಚ್ಚ ಹೇಗೆ?.ಕೇಂದ್ರ ಬಜೆಟ್ 140 ಕೋಟಿ ಭಾರತೀಯರ ಆಕಾಂಕ್ಷೆಗಳ ಪ್ರತಿಬಿಂಬ: ಮೋದಿ ಬಣ್ಣನೆ. <p><strong>ನಗರಗಳ ಅಭಿವೃದ್ಧಿ (5 ವರ್ಷಗಳಲ್ಲಿ ₹5000 ಕೋಟಿ ಅನುದಾನ)</strong></p><p><strong>ಏಳು ಹೈಸ್ಪೀಡ್ ರೈಲು ಕಾರಿಡಾರ್</strong> </p><ul><li><p>ಮುಂಬೈ-ಪುಣೆ,</p></li><li><p>ಪುಣೆ-ಹೈದರಾಬಾದ್,</p></li><li><p>ಹೈದರಾಬಾದ್-ಬೆಂಗಳೂರು,</p></li><li><p>ಹೈದರಾಬಾದ್-ಚೆನ್ನೈ,</p></li><li><p>ಚೆನ್ನೈ-ಬೆಂಗಳೂರು,</p></li><li><p>ದೆಹಲಿ-ವಾರಾಣಸಿ</p></li><li><p>ವಾರಾಣಸಿ-ಸಿಲಿಗುರಿ.</p></li></ul><p>*ಬ್ಯಾಕಿಂಗ್ ಫಾರ್ ವಿಕಸಿತ ಭಾರತಕ್ಕಾಗಿ ಉನ್ನತ ಮಟ್ಟದ ಸಮಿತಿ ರಚನೆ</p><p>*ಉನ್ನತ ಮಟ್ಟದ 'ಶಿಕ್ಷಣದಿಂದ ಉದ್ಯಮ' ಸಮಿತಿ ರಚನೆ</p><p>*ಐದು ಪ್ರಾದೇಶಿಕ ವೈದ್ಯಕೀಯ ಹಬ್ಗಳ ರಚನೆ</p><p>*ಆಯುಷ್: 3 ಹೊಸ ಆಯುರ್ವೇದ ಸಂಸ್ಥೆಗಳ ಸ್ಥಾಪನೆ</p><p>*7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ. </p><p>*ಕ್ಯಾನ್ಸರ್ಗೆ ಸಂಬಂಧಿಸಿದ 17 ಪ್ರಮುಖ ಔಷಧಗಳ ಮೇಲಿನ ತೆರಿಗೆ ಕಡಿತ</p><p><strong>ಮುನ್ಸಿಪಲ್ ಬಾಂಡ್:</strong> </p><p>ಪುರಸಭೆಗಳು ಹೂಡಿಕೆದಾರರಿಗೆ ವಿತರಿಸುವ ಬಾಂಡ್ಗಳಾಗಿದ್ದು, ಇವುಗಳನ್ನು ಸಾಲಗಳೆಂದು ಪರಿಗಣಿಸಬಹುದು. ಉದ್ಯಾನವನಗಳು, ಗ್ರಂಥಾಲಯಗಳು, ಸೇತುವೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಂತಹ ಸಾರ್ವಜನಿಕ ಕಾರ್ಯಗಳಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ.</p><p><strong>ಪಶುವೈದ್ಯಕೀಯ:</strong> ವೃತ್ತಿಪರರ ಸಂಖ್ಯೆ 20,000 ಕ್ಕೆ ಏರಿಕೆ</p><p><strong>ಆರೆಂಜ್ ಆರ್ಥಿಕತೆ:</strong> </p><p>15,000 ಶಾಲೆಗಳು ಹಾಗೂ 500 ಕಾಲೇಜುಗಳಲ್ಲಿ ವಿಷುಯಲ್ ಎಫೆಕ್ಟ್, ಗೇಮಿಂಗ್ ಮತ್ತು ಕಾಮಿಕ್ಸ್ ವಿಷಯಗಳ ಪ್ರಯೋಗಾಲಯ ಸ್ಥಾಪಿಸಲು ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ಗೆ ಬೆಂಬಲ</p>.85 ನಿಮಿಷಗಳಲ್ಲಿ ಬಜೆಟ್ ಭಾಷಣ ಮುಗಿಸಿದ ನಿರ್ಮಲಾ ಸೀತಾರಾಮನ್.Union Budget 2026: ಯಾವುದೆಲ್ಲ ಇಳಿಕೆ, ಯಾವುದೆಲ್ಲ ಏರಿಕೆ?.<p><strong>ಶಿಕ್ಷಣ:</strong></p><p>*5 ವಿಶ್ವವಿದ್ಯಾಲಯ ಟೌನ್ಶಿಪ್</p><p>*ಪ್ರತಿ ಜಿಲ್ಲೆಗಳಲ್ಲಿ ಒಂದು ಬಾಲಕಿಯರ ಹಾಸ್ಟೆಲ್ ಸ್ಥಾಪನೆ</p><p><strong>ಪ್ರವಾಸೋದ್ಯಮ:</strong></p><p>*20 ಸಾವಿರ ಪ್ರವಾಸಿ ತಾಣಗಳಲ್ಲಿ ಮಾಹಿತಿ ನೀಡಲು 10 ಸಾವಿರ ಗೈಡ್ಗಳಿಗೆ ತರಬೇತಿ,</p><p>*ನ್ಯಾಷನಲ್ ಡೆಸ್ಟಿನೇಷನ್ ಡಿಜಿಟಲ್ ನಾಲೆಡ್ಜ್ ಗ್ರಿಡ್ ರಚನೆ</p><p>*ಪರಂಪರೆ ಮತ್ತು ಸಂಸ್ಕೃತಿ ಪ್ರವಾಸೋದ್ಯಮ, </p><p>*15 ಪುರಾತತ್ವ ಸ್ಥಳಗಳ ವೃದ್ಧಿ</p><p><strong>ಕ್ರೀಡೆ:</strong></p><p>*ಖೇಲೊ ಇಂಡಿಯಾ ಮಿಷನ್ </p><p>*ರೈತರ ಆದಾಯ ಹೆಚ್ಚಳಕ್ಕೆ ಕ್ರಮ</p><p>*500 ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿ</p><p><strong>ಕೃಷಿಗೆ ಆದ್ಯತೆ</strong></p><p>*ಕರಾವಳಿಯಲ್ಲಿ ತೆಂಗು, ಗಂಧ, ಗೇರು ಬೆಳೆ ಉತ್ತೇಜನ</p><p>*ಭಾರತ್ ವಿಸ್ತಾರ್ ಎಐ ಯೋಜನೆ</p><p>*ಭಾರತ್ ವಿಸ್ತಾರ್ ಬಹುಭಾಷಾ ಎಐ ಟೂಲ್ ಮೂಲಕ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಿಗೆ ನೆರವು</p><p><strong>ಮಹಿಳೆಯರಿಗೆ ಲಕ್ಪತಿ ದೀದಿ ಯೋಜನೆಗೆ ಇನ್ನಷ್ಟು ಉತ್ತೇಜನ</strong></p><p>*ಉತ್ತರ ಭಾರತದಲ್ಲಿ ನಿಮ್ಹಾನ್ಸ್ ಸ್ಥಾಪನೆ</p><p>ದಿವ್ಯಾಂಜನ್ ಯೋಜನೆ ಮೂಲಕ ಕೃತಕ ಕಾಲು ತಯಾರಿಕಾ ಘಟಕಗಳಿಗೆ ತಂತ್ರಜ್ಞಾನ ನೆರವು ಮೂಲಕ ಅವುಗಳನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ</p><p><strong>ಪೂರ್ವೋದಯ:</strong> </p><p>*ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ</p><p>*ಈಸ್ಟ್ ಕೋಸ್ಟ್ ಇಂಡಸ್ಟ್ರಿಯರ್ ಕಾರಿಡಾರ್ ಸ್ಥಾಪನೆ</p><p>*ಈಶಾನ್ಯ ಭಾರತ– ಬುದ್ಧ ಸರ್ಕೀಟ್, ಅರುಣಾಚಲ, ಸಿಕ್ಕೀಂ, ಮೀಜೋರಾಂ, ತ್ರಿಪುರ, ಅಸ್ಸಾಂನಲ್ಲಿ</p>.Union Budget 2026: ದೇಶದ ಪ್ರತಿ ಜಿಲ್ಲೆಗೆ ಬಾಲಕಿಯರ ಹಾಸ್ಟೆಲ್ ಘೋಷಣೆ.ದಾಖಲೆಯ ಸತತ 9ನೇ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್: ಇವರೇ ಮೊದಲು.<p><strong>ನೇರ ತೆರಿಗೆ</strong></p>. <p><strong>2026 ಏಪ್ರಿಲ್ನಲ್ಲಿ ಹೊಸ ತೆರಿಗೆ ಪದ್ಧತಿ ಜಾರಿ</strong></p><p>*ಆದಾಯ ತೆರಿಗೆ ನಿಯಮ ಸರಳೀಕರಣ,</p><p>*ಮೋಟಾರ್ ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ</p><p>*ಐಟಿ ವಲಯ ಭಾರತದ ಅಭಿವೃದ್ಧಿಯ ಎಂಜಿನ್</p><p>*ವಿಶೇಷ ಎಕಾನಮಿಕ್ ವಲಯ,</p><p>*ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ</p><p>*ಆದಾಯ ತೆರಿಗೆ ಪಾವತಿದಾರರ ಪರಿಷ್ಕೃತ ತೆರಿಗೆ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 31ರಿಂದ ಮಾರ್ಚ್ 31ರವರೆಗೆ ವಿಸ್ತರಣೆ</p><p>*ಆದಾಯ ತೆರಿಗೆ ಪಾವತಿ ವಿಳಂಬಕ್ಕೆ ಶೇ 10ರಷ್ಟು ದಂಡ ವಿಧಿಸಲು ನಿರ್ಧಾರ. </p><p>*ಸಣ್ಣ ತೆರಿಗೆದಾರರಿಗೆ ನಿಯಮ ಆಧಾರಿತ ಸ್ವಯಂಚಾಲಿತ ತೆರಿಗೆ ಸಲ್ಲಿಕೆ ವ್ಯವಸ್ಥೆ ಜಾರಿ </p><p>*ದೇಶ ಪ್ರವಾಸಗಳ ಮೇಲಿನ ಟಿಸಿಎಸ್ ಶೇ 2ಕ್ಕೆ ಇಳಿಕೆ</p><p>*ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಕಡಿತ</p><p>*ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್ ದರವನ್ನು ಶೇ 5 ರಿಂದ ಶೇ 2ಕ್ಕೆ ಇಳಿಕೆ</p><p>*ದೇಶದಲ್ಲಿ ಡೇಟಾ ಸೆಂಟರ್ಗಳನ್ನು ಬಳಸಿಕೊಂಡು ವಿಶ್ವದಾದ್ಯಂತ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ</p><p>*ಕೆಲವು ಷರತ್ತುಗಳಿಗೆ ಒಳಪಟ್ಟು ಸಂಬಂಧಪಟ್ಟ ಘಟಕಗಳಿಗೆ ತೆರಿಗೆ ರಜೆಯನ್ನು ವಿಸ್ತರಿಸಲಾಗುವುದು</p><p>*ಸಿಗರೇಟು, ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿದ ಕೇಂದ್ರ. </p><p>*ಭಾರತದ ಹೊರಗಡೆ ನೆಲೆಸಿರುವ ವ್ಯಕ್ತಿಗಳಿಗೆ ಪಟ್ಟಿ ಮಾಡಲಾದ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಅನುಮತಿ</p><p>*ಖಗೋಳ ಭೌತಶಾಸ್ತ್ರ ಮತ್ತು ಖಗೋಗಶಾಸ್ತ್ರ ಉತ್ತೇಜನಕ್ಕೆ ಟೆಲಿಸ್ಕಾಪ್ ಮೂಲಸೌಕರ್ಯದ ನವೀಕರಣ</p><p>*ಸುಮಾರು ಒಂದು ಗಂಟೆ 25 ನಿಮಿಷಗಳ ಕಾಲ ಬಜೆಟ್ ಭಾಷಣ ಮಂಡಿಸಿದ ನಿರ್ಮಲಾ ಸೀತಾರಾಮನ್ </p>.ಬಜೆಟ್: ಬೆಂಗಳೂರು ಸೇರಿ ಪ್ರಮುಖ ನಗರಗಳನ್ನು ಬೆಸೆಯುವ ಹೈಸ್ಪೀಡ್ ರೈಲು ಕಾರಿಡಾರ್.ಬಜೆಟ್ನಲ್ಲಿ ‘ಕರ್ತವ್ಯ ಮಂತ್ರ’ ಪಠನೆ : ಸರ್ವರಿಗೂ ವಿತ್ತ ಸಚಿವೆಯ ಆದ್ಯತೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>