<p><strong>ಮೈಸೂರು</strong>: ‘ರಾಜ್ಯ ಸರ್ಕಾರ ದ್ವೇಷಪೂರಿತ ಭಾಷಣವನ್ನು ಬರೆದು ಕೊಟ್ಟಿತ್ತು. ಅದನ್ನು ರಾಜ್ಯಪಾಲರು ಹೇಗೆ ಓದುತ್ತಾರೆ?’ ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಕೇಳಿದರು.</p><p>ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ವಿರುದ್ದ ಖಂಡನಾ ನಿರ್ಣಯದಂತಹ ಭಾಷಣ ಸಿದ್ಧಪಡಿಸಲಾಗಿತ್ತು. ಹಾಗಾಗಿ, ಅವರು ಓದಿಲ್ಲ. ರಾಜ್ಯಪಾಲರ ಸುತ್ತ ಮಾರ್ಷಲ್ಗಳು ಇಲ್ಲದೆ ಹೋಗಿದ್ದರೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರನ್ನು ಥಳಿಸುತ್ತಿದ್ದರೇನೋ’ ಎಂದು ದೂರಿದರು.</p><p>‘ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಂತ್ರಿ ಸ್ಥಾನ ಪಡೆಯಲು ದುರ್ನಡೆ ತೋರಿ, ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ಕರ್ನಾಟಕ ತಲೆ ತಗ್ಗಿಸುವ ಸ್ಥಿತಿಯನ್ನು ಕಾಂಗ್ರೆಸ್ ಶಾಸಕರು ತಂದಿಟ್ಟಿದ್ದಾರೆ. ಪುಂಡ, ಪೋಕರಿಗಳಂತೆ ಆ ಪಕ್ಷದ ಶಾಸಕರು ವರ್ತಿಸಿದ್ದಾರೆ’ ಎಂದು ಆರೋಪಿಸಿದರು.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಾಸಕರಿಗೆ ಚಿತಾವಣೆ ಕೊಟ್ಟು ಎಲ್ಲವನ್ನೂ ನೋಡುತ್ತಿದ್ದಾರೆ. ಸಂಖ್ಯಾಬಲವಿದೆ ಎಂಬ ಮದದಲ್ಲಿ ಕಾಂಗ್ರೆಸ್ ಈ ರೀತಿ ವರ್ತಿಸಿದೆ. ಸಿದ್ದರಾಮಯ್ಯ ಬಿಕಾರಿ ಸರ್ಕಾರ ನಡೆಸುತ್ತಿದ್ದಾರೆ. ವಿಬಿ– ಜಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರ ₹ 2ಸಾವಿರ ಕೋಟಿ ಕೊಡಬೇಕಿದೆ. ಅದನ್ನು ಕೊಡಲು ಇವರ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ ಗಲಾಟೆ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. </p><p>‘ಸಿದ್ದರಾಮಯ್ಯ ಯಾವತ್ತು ತೊಲಗುತ್ತಾರೆ? ಈ ಸರ್ಕಾರ ಯಾವಾಗ ಕೊನೆಯಾಗುತ್ತದೆ ಎಂದು ಜನ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ತೊಲಗಿದ ನಂತರ ಕಾಂಗ್ರೆಸ್ಗೆ ಅಧೋಗತಿ ಬರಲಿದೆ’ ಎಂದರು.</p>.ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ನೀಡಿದ್ದ ಭಾಷಣದ ಮುಖ್ಯಾಂಶಗಳು ಇಂತಿವೆ..
<p><strong>ಮೈಸೂರು</strong>: ‘ರಾಜ್ಯ ಸರ್ಕಾರ ದ್ವೇಷಪೂರಿತ ಭಾಷಣವನ್ನು ಬರೆದು ಕೊಟ್ಟಿತ್ತು. ಅದನ್ನು ರಾಜ್ಯಪಾಲರು ಹೇಗೆ ಓದುತ್ತಾರೆ?’ ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಕೇಳಿದರು.</p><p>ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ವಿರುದ್ದ ಖಂಡನಾ ನಿರ್ಣಯದಂತಹ ಭಾಷಣ ಸಿದ್ಧಪಡಿಸಲಾಗಿತ್ತು. ಹಾಗಾಗಿ, ಅವರು ಓದಿಲ್ಲ. ರಾಜ್ಯಪಾಲರ ಸುತ್ತ ಮಾರ್ಷಲ್ಗಳು ಇಲ್ಲದೆ ಹೋಗಿದ್ದರೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರನ್ನು ಥಳಿಸುತ್ತಿದ್ದರೇನೋ’ ಎಂದು ದೂರಿದರು.</p><p>‘ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಂತ್ರಿ ಸ್ಥಾನ ಪಡೆಯಲು ದುರ್ನಡೆ ತೋರಿ, ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ಕರ್ನಾಟಕ ತಲೆ ತಗ್ಗಿಸುವ ಸ್ಥಿತಿಯನ್ನು ಕಾಂಗ್ರೆಸ್ ಶಾಸಕರು ತಂದಿಟ್ಟಿದ್ದಾರೆ. ಪುಂಡ, ಪೋಕರಿಗಳಂತೆ ಆ ಪಕ್ಷದ ಶಾಸಕರು ವರ್ತಿಸಿದ್ದಾರೆ’ ಎಂದು ಆರೋಪಿಸಿದರು.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಾಸಕರಿಗೆ ಚಿತಾವಣೆ ಕೊಟ್ಟು ಎಲ್ಲವನ್ನೂ ನೋಡುತ್ತಿದ್ದಾರೆ. ಸಂಖ್ಯಾಬಲವಿದೆ ಎಂಬ ಮದದಲ್ಲಿ ಕಾಂಗ್ರೆಸ್ ಈ ರೀತಿ ವರ್ತಿಸಿದೆ. ಸಿದ್ದರಾಮಯ್ಯ ಬಿಕಾರಿ ಸರ್ಕಾರ ನಡೆಸುತ್ತಿದ್ದಾರೆ. ವಿಬಿ– ಜಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರ ₹ 2ಸಾವಿರ ಕೋಟಿ ಕೊಡಬೇಕಿದೆ. ಅದನ್ನು ಕೊಡಲು ಇವರ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ ಗಲಾಟೆ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. </p><p>‘ಸಿದ್ದರಾಮಯ್ಯ ಯಾವತ್ತು ತೊಲಗುತ್ತಾರೆ? ಈ ಸರ್ಕಾರ ಯಾವಾಗ ಕೊನೆಯಾಗುತ್ತದೆ ಎಂದು ಜನ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ತೊಲಗಿದ ನಂತರ ಕಾಂಗ್ರೆಸ್ಗೆ ಅಧೋಗತಿ ಬರಲಿದೆ’ ಎಂದರು.</p>.ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ನೀಡಿದ್ದ ಭಾಷಣದ ಮುಖ್ಯಾಂಶಗಳು ಇಂತಿವೆ..