<p><strong>ಎಚ್.ಡಿ.ಕೋಟೆ:</strong> ಇಲ್ಲಿಯ ಶ್ರೀ ವಾರಾಹಿ ಮತ್ತು ಮಾರಮ್ಮನ ಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವದ 2 ನೇ ದಿನವಾದ ಮಂಗಳವಾರ ಗುಡಿಯ ಮುಂಭಾಗ ಕೊಂಡದ ಗುಳಿಯನ್ನು ಜೆಸಿಬಿಯ ಮೂಲಕ ತೋಡಲಾಯಿತು.</p>.<p> ಕೊಂಡೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಲಿದ್ದು ಭರದ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಕೊಂಡಕ್ಕಾಗಿ 101 ಗಾಡಿಯಲ್ಲಿ ಸಂಗ್ರಹಿಸಿರುವ ಕಗ್ಗಲಿ ಸೌದೆಗೆ ಸಂಪ್ರದಾಯದಂತೆ ಅಗ್ನಿ ಸ್ಪರ್ಶವನ್ನು ಮಾಡಲು ಹದಗೊಳಿಸಲಾಯಿತು.</p>.<p>ಬುಧವಾರ ನಡೆಯಲಿರುವ ಉತ್ಸವದಲ್ಲಿ ಕೊಂಡವನ್ನು ಹಾಯುವ ಪೂಜಾರಿಗಳು, ಮೂರು ದಿನಗಳಿಂದ ಉಪವಾಸ, ವ್ರತಾಚರಣೆಗಳನ್ನು ಮಾಡಿ , ಹಳ್ಳಿಯ ಜನರಿಗೆ ಆಶೀರ್ವಾದ ಆರೋಗ್ಯ ಹಾಗೂ ಭಾಗ್ಯ ಸಿಗಲೆಂದು ದೇವಿಯನ್ನು ಪ್ರಾರ್ಥಿಸಿದರು.</p>.<p>ಸಾರ್ವಜನಿಕರು ದೇವಸ್ಥಾನದಲ್ಲಿ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಒಂಭತ್ತು ವರ್ಷಗಳ ಹಿಂದೆ ನಡೆದಿದ್ದ ಜಾತ್ರೆ ಈ ವರ್ಷ ನಡೆಯುತ್ತಿರುವುದು ಗ್ರಾಮದ ಜನತೆಯಲ್ಲಿ ಸಂಭ್ರಮವನ್ನುಂಟು ಮಾಡಿದ್ದು, ಅದ್ದೂರಿಯಾಗಿ ಆಚರಿಸಲು ಪಟ್ಟಣದ ಜನತೆ ಸಜ್ಜಾಗಿದ್ದಾರೆ.</p>.<p> ಪಟ್ಟಣದ ಹಳೆ ಆಸ್ಪತ್ರೆ ಜಾಗದಲ್ಲಿ, ಶ್ರೀ ವರದರಾಜಸ್ವಾಮಿ ದೇವಸ್ಥಾನದ ಮುಂಭಾಗ ಮತ್ತು ಇತರೆ ಸ್ಥಳಗಳಲ್ಲಿ ಕೊಂಡ ವೀಕ್ಷಿಸಲು ದೊಡ್ಡ ಎಲ್ಇಡಿ ವಾಲ್ಗಳನ್ನು ತಾಲ್ಲೂಕು ಛಾಯಾಗ್ರಾಕರ ಸಂಘ ಅಳವಡಿಸಿ, ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ.</p>.<h2>ಭಕ್ತರ ದಂಡು</h2>.<p> ಗ್ರಾಮದ ಪ್ರತಿ ಮನೆಳಿಗೆ ದೂರದ ಊರುಗಳಿಂದ ನೆಂಟರಿಷ್ಟರುಗಳು ಬಂದು ಗ್ರಾಮದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 9 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿರುವುದು ಪಟ್ಟಣದಾದ್ಯಂತ ಸಂಭ್ರಮ ಮನೆ ಮಾಡಿದ್ದು ಭಕ್ತರ ದಂಡು ಪಟ್ಟಣದಲ್ಲಿ ನೆರೆದಿದೆ. ದೇವಸ್ಥಾನದಲ್ಲಿ ನಿರಂತರವಾಗಿ ಪೂಜೆಗಳು ವಿವಿಧ ಕಾರ್ಯಕ್ರಮಗಳು ನೆರವೇರುತ್ತಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್.ಡಿ.ಕೋಟೆ:</strong> ಇಲ್ಲಿಯ ಶ್ರೀ ವಾರಾಹಿ ಮತ್ತು ಮಾರಮ್ಮನ ಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವದ 2 ನೇ ದಿನವಾದ ಮಂಗಳವಾರ ಗುಡಿಯ ಮುಂಭಾಗ ಕೊಂಡದ ಗುಳಿಯನ್ನು ಜೆಸಿಬಿಯ ಮೂಲಕ ತೋಡಲಾಯಿತು.</p>.<p> ಕೊಂಡೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಲಿದ್ದು ಭರದ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಕೊಂಡಕ್ಕಾಗಿ 101 ಗಾಡಿಯಲ್ಲಿ ಸಂಗ್ರಹಿಸಿರುವ ಕಗ್ಗಲಿ ಸೌದೆಗೆ ಸಂಪ್ರದಾಯದಂತೆ ಅಗ್ನಿ ಸ್ಪರ್ಶವನ್ನು ಮಾಡಲು ಹದಗೊಳಿಸಲಾಯಿತು.</p>.<p>ಬುಧವಾರ ನಡೆಯಲಿರುವ ಉತ್ಸವದಲ್ಲಿ ಕೊಂಡವನ್ನು ಹಾಯುವ ಪೂಜಾರಿಗಳು, ಮೂರು ದಿನಗಳಿಂದ ಉಪವಾಸ, ವ್ರತಾಚರಣೆಗಳನ್ನು ಮಾಡಿ , ಹಳ್ಳಿಯ ಜನರಿಗೆ ಆಶೀರ್ವಾದ ಆರೋಗ್ಯ ಹಾಗೂ ಭಾಗ್ಯ ಸಿಗಲೆಂದು ದೇವಿಯನ್ನು ಪ್ರಾರ್ಥಿಸಿದರು.</p>.<p>ಸಾರ್ವಜನಿಕರು ದೇವಸ್ಥಾನದಲ್ಲಿ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಒಂಭತ್ತು ವರ್ಷಗಳ ಹಿಂದೆ ನಡೆದಿದ್ದ ಜಾತ್ರೆ ಈ ವರ್ಷ ನಡೆಯುತ್ತಿರುವುದು ಗ್ರಾಮದ ಜನತೆಯಲ್ಲಿ ಸಂಭ್ರಮವನ್ನುಂಟು ಮಾಡಿದ್ದು, ಅದ್ದೂರಿಯಾಗಿ ಆಚರಿಸಲು ಪಟ್ಟಣದ ಜನತೆ ಸಜ್ಜಾಗಿದ್ದಾರೆ.</p>.<p> ಪಟ್ಟಣದ ಹಳೆ ಆಸ್ಪತ್ರೆ ಜಾಗದಲ್ಲಿ, ಶ್ರೀ ವರದರಾಜಸ್ವಾಮಿ ದೇವಸ್ಥಾನದ ಮುಂಭಾಗ ಮತ್ತು ಇತರೆ ಸ್ಥಳಗಳಲ್ಲಿ ಕೊಂಡ ವೀಕ್ಷಿಸಲು ದೊಡ್ಡ ಎಲ್ಇಡಿ ವಾಲ್ಗಳನ್ನು ತಾಲ್ಲೂಕು ಛಾಯಾಗ್ರಾಕರ ಸಂಘ ಅಳವಡಿಸಿ, ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ.</p>.<h2>ಭಕ್ತರ ದಂಡು</h2>.<p> ಗ್ರಾಮದ ಪ್ರತಿ ಮನೆಳಿಗೆ ದೂರದ ಊರುಗಳಿಂದ ನೆಂಟರಿಷ್ಟರುಗಳು ಬಂದು ಗ್ರಾಮದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 9 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿರುವುದು ಪಟ್ಟಣದಾದ್ಯಂತ ಸಂಭ್ರಮ ಮನೆ ಮಾಡಿದ್ದು ಭಕ್ತರ ದಂಡು ಪಟ್ಟಣದಲ್ಲಿ ನೆರೆದಿದೆ. ದೇವಸ್ಥಾನದಲ್ಲಿ ನಿರಂತರವಾಗಿ ಪೂಜೆಗಳು ವಿವಿಧ ಕಾರ್ಯಕ್ರಮಗಳು ನೆರವೇರುತ್ತಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>