ನಗರದ ಗೌಸಿಯಾನಗರದ ಬಳಿಯ ಉಸ್ಮಾನಿಯ ಮಸೀದಿ ಬಳಿ ಭಾನುವಾರ ಸಂಜೆ ಗೂಡ್ಸ್ ವಾಹನವೊಂದು ಬಂದಿತ್ತು. ವಾಹನ ತಪಾಸಣೆ ಮಾಡಿದಾಗ ಹಸುಗಳನ್ನು ತುಂಬಿರುವುದು ಕಂಡುಬಂತು. ನಮ್ಮನ್ನು ಕಂಡೊಡನೆ ವಾಹನದಲ್ಲಿದ್ದ ಇಮ್ರಾನ್ ಎಂಬಾತ ಓಡಿ ಹೋದ. ಸ್ಥಳದಲ್ಲಿದ್ದ ಹೇಮಂತ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಹಸುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ತಂದಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.