ವಿಶ್ವನಾಥ್, ಮೌದ್ಗಿಲ್ ಚೈನ್ ಹಿಡಿದು ಸರ್ವೆ ಮಾಡಲಿ:‘ಮರು ಸರ್ವೆಗೆ ಸಾ.ರಾ.ಮಹೇಶ್ ಹೆದರುವುದು ಏಕೆ’ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಕೇಳಿರುವುದಕ್ಕೆ ಪ್ರತಿಕ್ರಿಯಿಸಿ, ‘ಹೆದರೋರು ಯಾರು? ಸರ್ವೆ ತಂಡವನ್ನು ನಾನು ಹೂಗುಚ್ಛ ನೀಡಿ ಸ್ವಾಗತಿಸುತ್ತೇನೆ. ಒಂದು ಕಡೆ ವಿಶ್ವನಾಥ್, ಇನ್ನೊಂದು ಕಡೆ ಮನೀಷ್ ಮೌದ್ಗಿಲ್ ಚೈನ್ ಹಿಡಿದು ಸರ್ವೆ ಮಾಡಲಿ. ಬೇಕಿದ್ದರೆ ರೋಹಿಣಿ ಸಿಂಧೂರಿ ಚೈನ್ ಹಿಡಿಯಲು ನೆರವಾಗಲಿ’ ಎಂದು ಮಾರ್ಮಿಕವಾಗಿ ನುಡಿದರು.