‘ಪ್ರತಿಮೆ ಸ್ಥಾಪಿಸಿದ್ದು ಸಂತೋಷದ ವಿಚಾರ. ಕಾರ್ಯಕ್ರಮವವನ್ನು ಇಡೀ ನಾಡು ಸಂತೋಷಪಡುವಂತೆ ಆಗಬೇಕಿತ್ತು. ಆದರೆ, ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮವಾಗಿ ಮಾಡಿರುವುದು ಸರಿಯಲ್ಲ. ಬೇರೆಯವರಿಗೆ ಅವಕಾಶವೇ ನೀಡಿಲ್ಲ. ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ. ಸರ್ಕಾರ ಈ ವಿಚಾರವನ್ನು ಕೂಡಲೇ ಸರಿಪಡಿಸಬೇಕಿತ್ತು’ ಎಂದು ತಮ್ಮದೇ ಸರ್ಕಾರದ ವಿರುದ್ಧ ಮೈಸೂರಿನಲ್ಲಿ ಹರಿಹಾಯ್ದರು.