<p><strong>ಮೈಸೂರು</strong>: ನಜರ್ಬಾದ್ನ ಅಂಚೆ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಮುಕ್ತಾಯವಾದ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾರಮ್ಯ ಸಾಧಿಸಿದ ಕೇರಳ ತಂಡವು ಚಾಂಪಿಯನ್ ಆಯಿತು. ಕರ್ನಾಟಕ ತಂಡದವರು ರನ್ನರ್ಅಪ್ ಟ್ರೋಫಿಗೆ ಭಾಜನರಾದರು. </p>.<p>ದೇಶದ 21 ವಲಯಗಳ 293 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕೇರಳ ತಂಡದವರು 17 ಪ್ರಥಮ, 4 ದ್ವಿತೀಯ ಮತ್ತು 4 ತೃತೀಯ ಸ್ಥಾನದೊಂದಿಗೆ 108 ಅಂಕ ಪಡೆದು ಅಗ್ರಸ್ಥಾನ ಪಡೆದರೆ, ಆತಿಥೇಯ ತಂಡದವರು 16 ಪ್ರಥಮ, 14 ದ್ವಿತೀಯ, 4 ತೃತೀಯ ಬಹುಮಾನದೊಂದಿಗೆ 105 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರು. ಕ್ರಮವಾಗಿ 22 ಹಾಗೂ 34 ಬಹುಮಾನ ಗಳಿಸಿದರು. </p>.<p>ಒಡಿಶಾ ತಂಡದವರು 38 ಅಂಕಗಳೊಂದಿಗೆ ಒಟ್ಟು 11 ಬಹುಮಾನಗಳನ್ನು ಗೆದ್ದು ತೃತೀಯ ಸ್ಥಾನವನ್ನು ಪಡೆದರು. ರಾಜ್ಯ ತಂಡದ ಎಸ್.ಚಾರ್ಮಿ 4 ಬಹುಮಾನ ಪಡೆದರೆ, ಅಭಿಮನ್ಯು, ಕೆ.ಆರ್.ಪ್ರಥಮ್, ಡಿ.ಎಂ.ಪುಣ್ಯಶ್ರೀ, ಶಾಂಭವಿ ದೆಗಾವಿಮಠ, ಜಿ.ಎಸ್.ಸೃಷ್ಟಿ ತಲಾ 3 ಬಹುಮಾನ ಪಡೆದರು. ಕೇರಳದ ಎಸ್.ದುರ್ಗಾರಾಮ್, ವಿ.ಆರ್.ಶ್ರೀಹರಿ, ತೀರ್ಥಪ್ರಕಾಶ್ ಅವರೂ ತಲಾ ಮೂರು ಬಹುಮಾನ ಪಡೆದು ಗಮನ ಸೆಳೆದರು. </p>.<p>ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಿದ ಹಿಂದೂಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್, ‘ಜೀವನದಲ್ಲಿ ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಮುಖ್ಯ’ ಎಂದು ಸಲಹೆ ನೀಡಿದರು. </p>.<p>ರಾಜ್ಯ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್, ಸ್ಥಾನಿಕ ನಿರ್ದೇಶಕ ಸಂದೇಶ್ ಮಹದೇವಪ್ಪ, ವಿವಿಧ ವಲಯಗಳ ನಿರ್ದೇಶಕರಾದ ವಿ.ತಾರಾ, ಹರ್ಷ, ಆಶಿಶ್ ಸಿಂಗ್ ಠಾಕೂರ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ನಜರ್ಬಾದ್ನ ಅಂಚೆ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಮುಕ್ತಾಯವಾದ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾರಮ್ಯ ಸಾಧಿಸಿದ ಕೇರಳ ತಂಡವು ಚಾಂಪಿಯನ್ ಆಯಿತು. ಕರ್ನಾಟಕ ತಂಡದವರು ರನ್ನರ್ಅಪ್ ಟ್ರೋಫಿಗೆ ಭಾಜನರಾದರು. </p>.<p>ದೇಶದ 21 ವಲಯಗಳ 293 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕೇರಳ ತಂಡದವರು 17 ಪ್ರಥಮ, 4 ದ್ವಿತೀಯ ಮತ್ತು 4 ತೃತೀಯ ಸ್ಥಾನದೊಂದಿಗೆ 108 ಅಂಕ ಪಡೆದು ಅಗ್ರಸ್ಥಾನ ಪಡೆದರೆ, ಆತಿಥೇಯ ತಂಡದವರು 16 ಪ್ರಥಮ, 14 ದ್ವಿತೀಯ, 4 ತೃತೀಯ ಬಹುಮಾನದೊಂದಿಗೆ 105 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರು. ಕ್ರಮವಾಗಿ 22 ಹಾಗೂ 34 ಬಹುಮಾನ ಗಳಿಸಿದರು. </p>.<p>ಒಡಿಶಾ ತಂಡದವರು 38 ಅಂಕಗಳೊಂದಿಗೆ ಒಟ್ಟು 11 ಬಹುಮಾನಗಳನ್ನು ಗೆದ್ದು ತೃತೀಯ ಸ್ಥಾನವನ್ನು ಪಡೆದರು. ರಾಜ್ಯ ತಂಡದ ಎಸ್.ಚಾರ್ಮಿ 4 ಬಹುಮಾನ ಪಡೆದರೆ, ಅಭಿಮನ್ಯು, ಕೆ.ಆರ್.ಪ್ರಥಮ್, ಡಿ.ಎಂ.ಪುಣ್ಯಶ್ರೀ, ಶಾಂಭವಿ ದೆಗಾವಿಮಠ, ಜಿ.ಎಸ್.ಸೃಷ್ಟಿ ತಲಾ 3 ಬಹುಮಾನ ಪಡೆದರು. ಕೇರಳದ ಎಸ್.ದುರ್ಗಾರಾಮ್, ವಿ.ಆರ್.ಶ್ರೀಹರಿ, ತೀರ್ಥಪ್ರಕಾಶ್ ಅವರೂ ತಲಾ ಮೂರು ಬಹುಮಾನ ಪಡೆದು ಗಮನ ಸೆಳೆದರು. </p>.<p>ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಿದ ಹಿಂದೂಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್, ‘ಜೀವನದಲ್ಲಿ ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಮುಖ್ಯ’ ಎಂದು ಸಲಹೆ ನೀಡಿದರು. </p>.<p>ರಾಜ್ಯ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್, ಸ್ಥಾನಿಕ ನಿರ್ದೇಶಕ ಸಂದೇಶ್ ಮಹದೇವಪ್ಪ, ವಿವಿಧ ವಲಯಗಳ ನಿರ್ದೇಶಕರಾದ ವಿ.ತಾರಾ, ಹರ್ಷ, ಆಶಿಶ್ ಸಿಂಗ್ ಠಾಕೂರ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>