<p><strong>ಮೈಸೂರು:</strong> ಕೇರಳದ ಕೊಚ್ಚಿನ್ನ ಬಿನಾಲೆ ಅಂತರರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ನಗರದ ಕಲಾವಿದ ಪಿ.ಎಸ್.ಕೃಷ್ಣಮೂರ್ತಿ ಅವರ ‘ಡೆತ್ ಸರ್ಕಲ್’ ಕಲಾಕೃತಿಯೂ ಜನರನ್ನು ಆಕರ್ಷಿಸುತ್ತಿದ್ದು, ಮೆಚ್ಚುಗೆಗೂ ಪಾತ್ರವಾಗಿದೆ.</p>.<p>ಹುಣಸೂರು ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮ ಪಂಚವಳ್ಳಿಯ ಕಲಾವಿದ ಕೃಷ್ಣಮೂರ್ತಿ ಈ ಕಲಾಕೃತಿಯನ್ನು ಸೃಷ್ಟಿಸಲು ವರ್ಷಾನುಗಟ್ಟಲೇ ತೆಗೆದುಕೊಂಡಿದ್ದಾರೆ. ಅದಕ್ಕೆ ಬಳಕೆಯಾಗಿರುವುದು 6 ಸಾವಿರ ಬೀಜಗಳು, 12 ಸಾವಿರ ಮುಳ್ಳುಗಳು! </p>.<p>ಕಾಡಂಚಿನಲ್ಲಿ ಸಿಗುವ ಬೀಜ ಹಾಗೂ ಮುಳ್ಳುಗಳನ್ನು ಹೆಕ್ಕಿ ತಂದು ಅದರಲ್ಲಿ ಕಲೆಯನ್ನು ಹುಡುಕಿದ್ದಾರೆ. 2,200ಕ್ಕೂ ಹೆಚ್ಚು ಇರುವೆಗಳನ್ನು ಸೃಷ್ಟಿಸಿದ ಅವರು, ಅವುಗಳನ್ನು ಗೋಡೆಗಳ ಮೇಲೆ ಅಂಟಿಸಿದ್ದಾರೆ. ಇದಕ್ಕೆ ಒಂದು ತಿಂಗಳು ಸಮಯ ಕೊಟ್ಟಿದ್ದಾರೆ. </p>.<p>ಫೋರ್ಟ್ ಕೊಚ್ಚಿನ್ನಲ್ಲಿ ‘ಕೊಚ್ಚಿ ಮುಝಿರಿಸ್ ಬಿನಾಲೆ ಪ್ರತಿಷ್ಠಾನ’ದವರು ಪ್ರತಿ ವರ್ಷವೂ ಆಯೋಜಿಸುವ ಕಲಾ ಪ್ರದರ್ಶನ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದು, ದೇಶವಷ್ಟೇ ಅಲ್ಲದೇ ವಿದೇಶದ ಕಲಾವಿದರೂ ಇಲ್ಲಿ ಪ್ರದರ್ಶನಕ್ಕಿಡುತ್ತಾರೆ. ಕಲಾಕೃತಿಗಳ ಮಾರಾಟವೂ ನಡೆಯುತ್ತದೆ. </p>.<p>ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಪದವಿ ಪಡೆದಿರುವ ಕೃಷ್ಣಮೂರ್ತಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದಲೇ ಆಕೃತಿಗಳನ್ನು ಸೃಷ್ಟಿಸುತ್ತಾರೆ.</p>.<p>‘ಒಣಗಿದ ಎಲೆ, ಮರ, ಸೇರಿದಂತೆ ಯಾವುದೇ ವಸ್ತುವಿಗೂ ಒಂದು ವೈಜ್ಞಾನಿಕ, ತರ್ಕಬದ್ಧ ರಚನೆಯು ಇರುತ್ತದೆ. ಆ ಮಾದರಿಯನ್ನು ಅನುಸಿರಸಿ ಕಲಾಕೃತಿ ರಚಿಸುವೆ. ಪ್ರಕೃತಿಯೇ ಪ್ರೇರಣೆ’ ಎಂದು ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘10x19 ಅಡಿಯ ಒಂದು ಕೋಣೆಯನ್ನೇ ಕಲಾಕೃತಿ ಅಳವಡಿಕೆಗಳನ್ನು ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳು, ವಿದೇಶದ ಕಲಾವಿದರಿಂದ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದರು. </p>.<p>ಬಿನಾಲೆ ಕಲಾಪ್ರದರ್ಶನವು ಕಳೆದ ಡಿ.12ರಿಂದ ಆರಂಭಗೊಂಡಿದ್ದು, ಮಾರ್ಚ್ 31ರವರೆಗೆ ನಡೆಯಲಿದೆ. ಕೊಚ್ಚಿನ್ ಬಂದರಿನ ಪಾರಂಪರಿಕ ಕೋಣೆಗಳು, ಸಾಂಬಾರ ಪದಾರ್ಥದ ದಾಸ್ತಾನು ಕೊಠಡಿಗಳು ಈಗ ಕಲಾ ದೇಗುಲಗಳಾಗಿದ್ದು, ಪ್ರವಾಸಿಗರು, ಕಲಾವಿದರು ಸೇರಿದಂತೆ ಸಾವಿರಾರು ಜನರು ನಿತ್ಯ ಇಲ್ಲಿಗೆ ಬರುತ್ತಾರೆ. </p>.<p><strong>6 ಸಾವಿರ ಬೀಜ, 12 ಸಾವಿರ ಮುಳ್ಳು ಬಳಕೆ ತಯಾರಿಗೆ ವರ್ಷಗಟ್ಟಲೆ ಶ್ರಮ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕೇರಳದ ಕೊಚ್ಚಿನ್ನ ಬಿನಾಲೆ ಅಂತರರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ನಗರದ ಕಲಾವಿದ ಪಿ.ಎಸ್.ಕೃಷ್ಣಮೂರ್ತಿ ಅವರ ‘ಡೆತ್ ಸರ್ಕಲ್’ ಕಲಾಕೃತಿಯೂ ಜನರನ್ನು ಆಕರ್ಷಿಸುತ್ತಿದ್ದು, ಮೆಚ್ಚುಗೆಗೂ ಪಾತ್ರವಾಗಿದೆ.</p>.<p>ಹುಣಸೂರು ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮ ಪಂಚವಳ್ಳಿಯ ಕಲಾವಿದ ಕೃಷ್ಣಮೂರ್ತಿ ಈ ಕಲಾಕೃತಿಯನ್ನು ಸೃಷ್ಟಿಸಲು ವರ್ಷಾನುಗಟ್ಟಲೇ ತೆಗೆದುಕೊಂಡಿದ್ದಾರೆ. ಅದಕ್ಕೆ ಬಳಕೆಯಾಗಿರುವುದು 6 ಸಾವಿರ ಬೀಜಗಳು, 12 ಸಾವಿರ ಮುಳ್ಳುಗಳು! </p>.<p>ಕಾಡಂಚಿನಲ್ಲಿ ಸಿಗುವ ಬೀಜ ಹಾಗೂ ಮುಳ್ಳುಗಳನ್ನು ಹೆಕ್ಕಿ ತಂದು ಅದರಲ್ಲಿ ಕಲೆಯನ್ನು ಹುಡುಕಿದ್ದಾರೆ. 2,200ಕ್ಕೂ ಹೆಚ್ಚು ಇರುವೆಗಳನ್ನು ಸೃಷ್ಟಿಸಿದ ಅವರು, ಅವುಗಳನ್ನು ಗೋಡೆಗಳ ಮೇಲೆ ಅಂಟಿಸಿದ್ದಾರೆ. ಇದಕ್ಕೆ ಒಂದು ತಿಂಗಳು ಸಮಯ ಕೊಟ್ಟಿದ್ದಾರೆ. </p>.<p>ಫೋರ್ಟ್ ಕೊಚ್ಚಿನ್ನಲ್ಲಿ ‘ಕೊಚ್ಚಿ ಮುಝಿರಿಸ್ ಬಿನಾಲೆ ಪ್ರತಿಷ್ಠಾನ’ದವರು ಪ್ರತಿ ವರ್ಷವೂ ಆಯೋಜಿಸುವ ಕಲಾ ಪ್ರದರ್ಶನ ಅಂತರರಾಷ್ಟ್ರೀಯ ಖ್ಯಾತಿ ಪಡೆದಿದ್ದು, ದೇಶವಷ್ಟೇ ಅಲ್ಲದೇ ವಿದೇಶದ ಕಲಾವಿದರೂ ಇಲ್ಲಿ ಪ್ರದರ್ಶನಕ್ಕಿಡುತ್ತಾರೆ. ಕಲಾಕೃತಿಗಳ ಮಾರಾಟವೂ ನಡೆಯುತ್ತದೆ. </p>.<p>ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಪದವಿ ಪಡೆದಿರುವ ಕೃಷ್ಣಮೂರ್ತಿ ಪ್ರಕೃತಿಯಲ್ಲಿ ಸಿಗುವ ವಸ್ತುಗಳಿಂದಲೇ ಆಕೃತಿಗಳನ್ನು ಸೃಷ್ಟಿಸುತ್ತಾರೆ.</p>.<p>‘ಒಣಗಿದ ಎಲೆ, ಮರ, ಸೇರಿದಂತೆ ಯಾವುದೇ ವಸ್ತುವಿಗೂ ಒಂದು ವೈಜ್ಞಾನಿಕ, ತರ್ಕಬದ್ಧ ರಚನೆಯು ಇರುತ್ತದೆ. ಆ ಮಾದರಿಯನ್ನು ಅನುಸಿರಸಿ ಕಲಾಕೃತಿ ರಚಿಸುವೆ. ಪ್ರಕೃತಿಯೇ ಪ್ರೇರಣೆ’ ಎಂದು ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘10x19 ಅಡಿಯ ಒಂದು ಕೋಣೆಯನ್ನೇ ಕಲಾಕೃತಿ ಅಳವಡಿಕೆಗಳನ್ನು ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳು, ವಿದೇಶದ ಕಲಾವಿದರಿಂದ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದರು. </p>.<p>ಬಿನಾಲೆ ಕಲಾಪ್ರದರ್ಶನವು ಕಳೆದ ಡಿ.12ರಿಂದ ಆರಂಭಗೊಂಡಿದ್ದು, ಮಾರ್ಚ್ 31ರವರೆಗೆ ನಡೆಯಲಿದೆ. ಕೊಚ್ಚಿನ್ ಬಂದರಿನ ಪಾರಂಪರಿಕ ಕೋಣೆಗಳು, ಸಾಂಬಾರ ಪದಾರ್ಥದ ದಾಸ್ತಾನು ಕೊಠಡಿಗಳು ಈಗ ಕಲಾ ದೇಗುಲಗಳಾಗಿದ್ದು, ಪ್ರವಾಸಿಗರು, ಕಲಾವಿದರು ಸೇರಿದಂತೆ ಸಾವಿರಾರು ಜನರು ನಿತ್ಯ ಇಲ್ಲಿಗೆ ಬರುತ್ತಾರೆ. </p>.<p><strong>6 ಸಾವಿರ ಬೀಜ, 12 ಸಾವಿರ ಮುಳ್ಳು ಬಳಕೆ ತಯಾರಿಗೆ ವರ್ಷಗಟ್ಟಲೆ ಶ್ರಮ</strong> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>