ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಮೈಸೂರು ಲ್ಯಾನ್ಸರ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿತು. ಮಳೆ ಕಾರಣದಿಂದಾಗಿ 10 ಓವರ್ಗಳ ಪಂದ್ಯವನ್ನು 5 ಓವರ್ಗೆ ಇಳಿಸಲಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲ್ಯಾನ್ಸರ್ಸ್ ತಂಡಕ್ಕೆ ಎ.ಸಿ.ಚೇತನಕುಮಾರ್ (21, 1x6, 2x4) ನೆರವಾದರು. ತಂಡವು 5 ವಿಕೆಟ್ ನಷ್ಟಕ್ಕೆ 32 ರನ್ ಗುರಿ ನೀಡಿತು. ಮಹಾರಾಜಾಸ್ ತಂಡದ ಸಿ.ಸುನೀಲ್, ಸಿ.ರಾಘವೇಂದ್ರ, ಸಿ.ಕೆ.ಚಂದ್ರಶೇಖರ್ ಮತ್ತು ಎಂ.ಕೆ.ಸಪ್ತಗಿರೀಶ್ ತಲಾ ಒಂದು ವಿಕೆಟ್ ಪಡೆದರು.