<p><strong>ಮೈಸೂರು:</strong> ಚಂದ್ರಶೇಖರ್ ಅವರ ಬ್ಯಾಟಿಂಗ್ (16 ರನ್) ಬಲದಿಂದ ‘ಮೈಸೂರು ಮಹಾರಾಜಾಸ್’ ತಂಡವು ‘ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಟಿ–10’ ಟೂರ್ನಿಯ ಚಾಂಪಿಯನ್ ಆಯಿತು.</p>.<p>ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಮೈಸೂರು ಲ್ಯಾನ್ಸರ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿತು. ಮಳೆ ಕಾರಣದಿಂದಾಗಿ 10 ಓವರ್ಗಳ ಪಂದ್ಯವನ್ನು 5 ಓವರ್ಗೆ ಇಳಿಸಲಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲ್ಯಾನ್ಸರ್ಸ್ ತಂಡಕ್ಕೆ ಎ.ಸಿ.ಚೇತನಕುಮಾರ್ (21, 1x6, 2x4) ನೆರವಾದರು. ತಂಡವು 5 ವಿಕೆಟ್ ನಷ್ಟಕ್ಕೆ 32 ರನ್ ಗುರಿ ನೀಡಿತು. ಮಹಾರಾಜಾಸ್ ತಂಡದ ಸಿ.ಸುನೀಲ್, ಸಿ.ರಾಘವೇಂದ್ರ, ಸಿ.ಕೆ.ಚಂದ್ರಶೇಖರ್ ಮತ್ತು ಎಂ.ಕೆ.ಸಪ್ತಗಿರೀಶ್ ತಲಾ ಒಂದು ವಿಕೆಟ್ ಪಡೆದರು.</p>.<p>ಗುರಿಯನ್ನು ಬೆನ್ನಟ್ಟಿದ ಮಹಾರಾಜಾಸ್ ತಂಡವು ಕೇವಲ 2.1 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.</p>.<p>ಮೈಸೂರು ಲ್ಯಾನ್ಸರ್ಸ್ ತಂಡದ ಎ.ವಿ.ಸಂದೀಪ್ಗೆ ಉತ್ತಮ ಬ್ಯಾಟರ್, ಎ.ಸಿ.ಚೇತನ್ಗೆ ಉತ್ತಮ ಫೀಲ್ಡರ್ ಹಾಗೂ ಮಹಾ ರಾಜಾಸ್ ತಂಡದ ಸುನೀಲ್ ಚಿನ್ನಸ್ವಾಮಿಗೆ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ವಿಜೇತ ತಂಡಕ್ಕೆ ಟ್ರೋಫಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಚಂದ್ರಶೇಖರ್ ಅವರ ಬ್ಯಾಟಿಂಗ್ (16 ರನ್) ಬಲದಿಂದ ‘ಮೈಸೂರು ಮಹಾರಾಜಾಸ್’ ತಂಡವು ‘ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಟಿ–10’ ಟೂರ್ನಿಯ ಚಾಂಪಿಯನ್ ಆಯಿತು.</p>.<p>ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಮೈಸೂರು ಲ್ಯಾನ್ಸರ್ಸ್ ತಂಡವನ್ನು 9 ವಿಕೆಟ್ಗಳಿಂದ ಮಣಿಸಿತು. ಮಳೆ ಕಾರಣದಿಂದಾಗಿ 10 ಓವರ್ಗಳ ಪಂದ್ಯವನ್ನು 5 ಓವರ್ಗೆ ಇಳಿಸಲಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲ್ಯಾನ್ಸರ್ಸ್ ತಂಡಕ್ಕೆ ಎ.ಸಿ.ಚೇತನಕುಮಾರ್ (21, 1x6, 2x4) ನೆರವಾದರು. ತಂಡವು 5 ವಿಕೆಟ್ ನಷ್ಟಕ್ಕೆ 32 ರನ್ ಗುರಿ ನೀಡಿತು. ಮಹಾರಾಜಾಸ್ ತಂಡದ ಸಿ.ಸುನೀಲ್, ಸಿ.ರಾಘವೇಂದ್ರ, ಸಿ.ಕೆ.ಚಂದ್ರಶೇಖರ್ ಮತ್ತು ಎಂ.ಕೆ.ಸಪ್ತಗಿರೀಶ್ ತಲಾ ಒಂದು ವಿಕೆಟ್ ಪಡೆದರು.</p>.<p>ಗುರಿಯನ್ನು ಬೆನ್ನಟ್ಟಿದ ಮಹಾರಾಜಾಸ್ ತಂಡವು ಕೇವಲ 2.1 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.</p>.<p>ಮೈಸೂರು ಲ್ಯಾನ್ಸರ್ಸ್ ತಂಡದ ಎ.ವಿ.ಸಂದೀಪ್ಗೆ ಉತ್ತಮ ಬ್ಯಾಟರ್, ಎ.ಸಿ.ಚೇತನ್ಗೆ ಉತ್ತಮ ಫೀಲ್ಡರ್ ಹಾಗೂ ಮಹಾ ರಾಜಾಸ್ ತಂಡದ ಸುನೀಲ್ ಚಿನ್ನಸ್ವಾಮಿಗೆ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ವಿಜೇತ ತಂಡಕ್ಕೆ ಟ್ರೋಫಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>