ಗ್ರಾಮದ ಕಮಲಮ್ಮ ಶಂಕರಶೆಟ್ಟಿ ಅವರು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಯನ್ನು ಪಕ್ಕದ ಬಾಳೆ ತೋಟಕ್ಕೆ ಹೊತ್ತೊಯ್ದು ತಿಂದು ಹಾಕಿದೆ. ಘಟನಾ ಸ್ಥಳಕ್ಕೆ ಕಚುವಿನಹಳ್ಳಿ ಶ್ರೇಣಿಯ ಡಿಆರ್ಎಫ್ಒ ವೀರಭದ್ರಯ್ಯ ಮತ್ತು ಸಿಬ್ಬಂದಿ ಭೇಟಿ ಪರಿಶೀಲಿಸಿದರು.
ಬೋನ್ ಇಡಲು ಮನವಿ: ಚಿರತೆ ದಾಳಿಯಿಂದ ಈ ಭಾಗಗಳಲ್ಲಿ ಹಲವಾರು ಜಾನುವಾರುಗಳು ಬಲಿಯಾಗಿದ್ದು, ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಬೋನ್ ಇಟ್ಟು ಚಿರತೆ ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರನ್ನು ಒತ್ತಾಯಿಸಿದ್ದಾರೆ.