ಗ್ರಾಮದ ರೈತರೊಬ್ಬರು ಗುರುವಾರ ಕಬ್ಬಿನ ಗದ್ದೆಗೆ ಹೋದಾಗ ಚಿರತೆ ಮರಿ ಕಾಣಿಸಿದೆ. ರೈತ ಆ ಮರಿಯನ್ನು ರಕ್ಷಣೆ ಮಾಡಿದ್ದರು. ಈ ವಿಷಯ ತಿಳಿದ ಪಿಡಿಒ ಸಂತೋಷ್ ಅವರು ಮರಿಯನ್ನು ವಶಕ್ಕೆ ಪಡೆದು, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮರಿಯನ್ನು ವಶಕ್ಕೆ ಪಡೆದರು.