ಸೋಮವಾರ ಬೆಳಿಗ್ಗೆ ಬರಡನಪುರ ಗ್ರಾಮದಿಂದ ಮಹದೇಶ್ವರ ಸ್ವಾಮಿಯ ‘ಹುಲಿ ವಾಹನ’ವನ್ನು ಜಯಪುರ ಜೋಡಿಕಟ್ಟೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಬರಡನಪುರದಿಂದ ಬರುವಾಗ ದಾರಿಯುದ್ದಕ್ಕೂ ಭಕ್ತರು ಈಡುಗಾಯಿ ಒಡೆಯುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿನಿಯೋಗ ಮಾಡಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್ ನಾಗೇಶ್ ತಿಳಿಸಿದರು.