<p><strong>ಮೈಸೂರು:</strong> ನಗರದ ಹೃದಯಭಾಗದಲ್ಲಿರುವ ‘ಡೂಪ್ಲಿನ್ ಕಾಂಪ್ಲೆಕ್ಸ್’ನಲ್ಲಿ ದಶಕಗಳಿಂದ ಬೀಡು ಬಿಟ್ಟಿರುವ ವರ್ತಕರ ವಿರುದ್ಧ ಕಾರ್ಯಾಚರಣೆಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಸಿದ್ಧತೆ ನಡೆಸಿದ್ದು, ಅಲ್ಲಿನ ವರ್ತಕರಿಗೆ ನೋಟಿಸ್ ಜಾರಿಗೆ ಮುಂದಾಗಿದೆ.</p>.<p>ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಸಂಕೀರ್ಣದಲ್ಲಿನ 40ಕ್ಕೂ ಹೆಚ್ಚು ವರ್ತಕರಿಗೆ ನೋಟಿಸ್ ಜಾರಿ ಆಗಲಿದ್ದು, ಮೂರು ತಿಂಗಳ ಒಳಗೆ ಮಳಿಗೆಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗುತ್ತಿದೆ. ಇಲ್ಲವಾದಲ್ಲಿ ತೆರವು ಕಾರ್ಯಾಚರಣೆ ನಡೆಸುವ ಎಚ್ಚರಿಕೆಯನ್ನೂ ಎಂಡಿಎ ಅಧಿಕಾರಿಗಳು ನೀಡಿದ್ದಾರೆ.</p>.<p>ಮೈಸೂರು ಅಭಿವೃದ್ಧಿ ಪ್ರಾಧಿಕಾರವು ನಾಲ್ಕೈದು ದಶಕಗಳ ಹಿಂದೆ ಈ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿತ್ತು. ಬಹುತೇಕ ಮಳಿಗೆಗಳಲ್ಲಿ ವರ್ತಕರು ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಮಾಲೀಕತ್ವದ ವಿಚಾರದಲ್ಲಿ ಅಂದಿನ ಮುಡಾ ಹಾಗೂ ವರ್ತಕರ ನಡುವೆ ಗೊಂದಲ ಏರ್ಪಟ್ಟಿತ್ತು. ಮುಡಾ ಕ್ರಮಕ್ಕೆ ಮುಂದಾದಾಗ ವರ್ತಕರು ನ್ಯಾಯಾಲಯದ ಮೆಟ್ಟಿಲು ಏರಿದ್ದರು.</p>.<p>2018ರಿಂದ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಎರಡು ತಿಂಗಳ ಹಿಂದೆ ನ್ಯಾಯಾಲಯವು ತೀರ್ಪು ನೀಡಿದೆ. ಇದನ್ನು ಆಧರಿಸಿ ಕ್ರಮಕ್ಕೆ ಎಂಡಿಎ ಮುಂದಾಗಿದೆ.</p>.<p>‘ಸಾರ್ವಜನಿಕ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ. ಹೀಗಾಗಿ ವರ್ತಕರಿಗೆ ನೋಟಿಸ್ ನೀಡಲಾಗುತ್ತಿದೆ. ಹಂತಹಂತವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’ ಎಂದು ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<h3>ಮೂರು ದಶಕಗಳ ವಿವಾದ:</h3>.<p>ಮುಡಾಗೆ ಸೇರಿದ್ದ ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ಬಾಡಿಗೆ ರೂಪದಲ್ಲಿ ನೀಡಲಾಗಿತ್ತು. 1998– 1999ನೇ ಸಾಲಿನಲ್ಲಿ ಬಾಡಿಗೆ ಹೆಚ್ಚಿಸುವ ಸಂದರ್ಭದಲ್ಲಿ ಮುಡಾದ ಅಂದಿನ ಎಂಜಿನಿಯರ್ ಒಬ್ಬರು ಆಯುಕ್ತರ ಗಮನಕ್ಕೆ ತಾರದೆಯೇ ವರ್ತಕರ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.</p>.<p>ಈ ಒಪ್ಪಂದವನ್ನು ಮುಂದಿಟ್ಟುಕೊಂಡು ತಾವು ಮುಡಾದಿಂದಲೇ ಮಳಿಗೆ ಖರೀದಿಸಿ, ಕಂದಾಯ ಪಾವತಿಸುತ್ತಿರುವುದಾಗಿ ವರ್ತಕರು ವಾದಿಸಿದ್ದರು. ಬಾಡಿಗೆ ಪಾವತಿಸಲಿಲ್ಲ ಎಂಬ ಕಾರಣಕ್ಕೆ ಮಳಿಗೆಗಳಲ್ಲಿನ ವ್ಯಾಪಾರಿಗಳ ತೆರವಿಗೆ ಮುಡಾ ಮುಂದಾದಾಗ ವರ್ತಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.</p>.<p>‘ಮಳಿಗೆಗಳ ಕರಾರು ಅಧಿಕಾರ ಎಂಜಿನಿಯರ್ಗಳಿಗೆ ಇರುವುದಿಲ್ಲ. ಅಂದಿನ ಎಂಜಿನಿಯರ್ ಒಬ್ಬರು ಆಯುಕ್ತರ ಗಮನಕ್ಕೆ ತಾರದೆಯೇ ಮಾಡಿದ ಒಪ್ಪಂದಕ್ಕೆ ಮಾನ್ಯತೆ ಇಲ್ಲ. ಮೇಲಾಗಿ ಆ ಮಳಿಗೆಗಳನ್ನು ಬಾಡಿಗೆ ಉದ್ದೇಶಕ್ಕೆ ಮಾತ್ರ ನೀಡಲಾಗಿತ್ತು. ಹೀಗಾಗಿ ಬಾಡಿಗೆ ಪಾವತಿಸದೇ ಇದ್ದಾಗ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕೆ ಇದೆ. ಇದನ್ನೇ ನ್ಯಾಯಾಲಯದ ಗಮನಕ್ಕೆ ತಂದಿದ್ದು, ನ್ಯಾಯಾಲಯವು ಪ್ರಾಧಿಕಾರದ ಪರವಾಗಿ ನಿಂತಿದೆ’ ಎನ್ನುತ್ತಾರೆ ಅಧಿಕಾರಿಗಳು.</p>.<div><blockquote>ನ್ಯಾಯಾಲಯದ ತೀರ್ಪು ಆಧರಿಸಿ ಕ್ರಮಕ್ಕೆ ಎಂಡಿಎ ಮುಂದಾಗಿದ್ದು ಸಂಬಂಧಿಸಿದ ವರ್ತಕರಿಗೆ ನೋಟಿಸ್ ನೀಡುತ್ತಿದ್ದೇವೆ. ಎಲ್ಲ ಮಳಿಗೆಗಳನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗುವುದು </blockquote><span class="attribution">ಕೆ.ಆರ್. ರಕ್ಷಿತ್ ಎಂಡಿಎ ಆಯುಕ್ತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದ ಹೃದಯಭಾಗದಲ್ಲಿರುವ ‘ಡೂಪ್ಲಿನ್ ಕಾಂಪ್ಲೆಕ್ಸ್’ನಲ್ಲಿ ದಶಕಗಳಿಂದ ಬೀಡು ಬಿಟ್ಟಿರುವ ವರ್ತಕರ ವಿರುದ್ಧ ಕಾರ್ಯಾಚರಣೆಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಸಿದ್ಧತೆ ನಡೆಸಿದ್ದು, ಅಲ್ಲಿನ ವರ್ತಕರಿಗೆ ನೋಟಿಸ್ ಜಾರಿಗೆ ಮುಂದಾಗಿದೆ.</p>.<p>ಸಯ್ಯಾಜಿರಾವ್ ರಸ್ತೆ, ಡಿ. ದೇವರಾಜ ಅರಸು ರಸ್ತೆಗೆ ಹೊಂದಿಕೊಂಡಂತೆ ಇರುವ ವಾಣಿಜ್ಯ ಸಂಕೀರ್ಣದಲ್ಲಿನ 40ಕ್ಕೂ ಹೆಚ್ಚು ವರ್ತಕರಿಗೆ ನೋಟಿಸ್ ಜಾರಿ ಆಗಲಿದ್ದು, ಮೂರು ತಿಂಗಳ ಒಳಗೆ ಮಳಿಗೆಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗುತ್ತಿದೆ. ಇಲ್ಲವಾದಲ್ಲಿ ತೆರವು ಕಾರ್ಯಾಚರಣೆ ನಡೆಸುವ ಎಚ್ಚರಿಕೆಯನ್ನೂ ಎಂಡಿಎ ಅಧಿಕಾರಿಗಳು ನೀಡಿದ್ದಾರೆ.</p>.<p>ಮೈಸೂರು ಅಭಿವೃದ್ಧಿ ಪ್ರಾಧಿಕಾರವು ನಾಲ್ಕೈದು ದಶಕಗಳ ಹಿಂದೆ ಈ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿತ್ತು. ಬಹುತೇಕ ಮಳಿಗೆಗಳಲ್ಲಿ ವರ್ತಕರು ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಮಾಲೀಕತ್ವದ ವಿಚಾರದಲ್ಲಿ ಅಂದಿನ ಮುಡಾ ಹಾಗೂ ವರ್ತಕರ ನಡುವೆ ಗೊಂದಲ ಏರ್ಪಟ್ಟಿತ್ತು. ಮುಡಾ ಕ್ರಮಕ್ಕೆ ಮುಂದಾದಾಗ ವರ್ತಕರು ನ್ಯಾಯಾಲಯದ ಮೆಟ್ಟಿಲು ಏರಿದ್ದರು.</p>.<p>2018ರಿಂದ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಎರಡು ತಿಂಗಳ ಹಿಂದೆ ನ್ಯಾಯಾಲಯವು ತೀರ್ಪು ನೀಡಿದೆ. ಇದನ್ನು ಆಧರಿಸಿ ಕ್ರಮಕ್ಕೆ ಎಂಡಿಎ ಮುಂದಾಗಿದೆ.</p>.<p>‘ಸಾರ್ವಜನಿಕ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ. ಹೀಗಾಗಿ ವರ್ತಕರಿಗೆ ನೋಟಿಸ್ ನೀಡಲಾಗುತ್ತಿದೆ. ಹಂತಹಂತವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’ ಎಂದು ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<h3>ಮೂರು ದಶಕಗಳ ವಿವಾದ:</h3>.<p>ಮುಡಾಗೆ ಸೇರಿದ್ದ ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ಬಾಡಿಗೆ ರೂಪದಲ್ಲಿ ನೀಡಲಾಗಿತ್ತು. 1998– 1999ನೇ ಸಾಲಿನಲ್ಲಿ ಬಾಡಿಗೆ ಹೆಚ್ಚಿಸುವ ಸಂದರ್ಭದಲ್ಲಿ ಮುಡಾದ ಅಂದಿನ ಎಂಜಿನಿಯರ್ ಒಬ್ಬರು ಆಯುಕ್ತರ ಗಮನಕ್ಕೆ ತಾರದೆಯೇ ವರ್ತಕರ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.</p>.<p>ಈ ಒಪ್ಪಂದವನ್ನು ಮುಂದಿಟ್ಟುಕೊಂಡು ತಾವು ಮುಡಾದಿಂದಲೇ ಮಳಿಗೆ ಖರೀದಿಸಿ, ಕಂದಾಯ ಪಾವತಿಸುತ್ತಿರುವುದಾಗಿ ವರ್ತಕರು ವಾದಿಸಿದ್ದರು. ಬಾಡಿಗೆ ಪಾವತಿಸಲಿಲ್ಲ ಎಂಬ ಕಾರಣಕ್ಕೆ ಮಳಿಗೆಗಳಲ್ಲಿನ ವ್ಯಾಪಾರಿಗಳ ತೆರವಿಗೆ ಮುಡಾ ಮುಂದಾದಾಗ ವರ್ತಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.</p>.<p>‘ಮಳಿಗೆಗಳ ಕರಾರು ಅಧಿಕಾರ ಎಂಜಿನಿಯರ್ಗಳಿಗೆ ಇರುವುದಿಲ್ಲ. ಅಂದಿನ ಎಂಜಿನಿಯರ್ ಒಬ್ಬರು ಆಯುಕ್ತರ ಗಮನಕ್ಕೆ ತಾರದೆಯೇ ಮಾಡಿದ ಒಪ್ಪಂದಕ್ಕೆ ಮಾನ್ಯತೆ ಇಲ್ಲ. ಮೇಲಾಗಿ ಆ ಮಳಿಗೆಗಳನ್ನು ಬಾಡಿಗೆ ಉದ್ದೇಶಕ್ಕೆ ಮಾತ್ರ ನೀಡಲಾಗಿತ್ತು. ಹೀಗಾಗಿ ಬಾಡಿಗೆ ಪಾವತಿಸದೇ ಇದ್ದಾಗ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕೆ ಇದೆ. ಇದನ್ನೇ ನ್ಯಾಯಾಲಯದ ಗಮನಕ್ಕೆ ತಂದಿದ್ದು, ನ್ಯಾಯಾಲಯವು ಪ್ರಾಧಿಕಾರದ ಪರವಾಗಿ ನಿಂತಿದೆ’ ಎನ್ನುತ್ತಾರೆ ಅಧಿಕಾರಿಗಳು.</p>.<div><blockquote>ನ್ಯಾಯಾಲಯದ ತೀರ್ಪು ಆಧರಿಸಿ ಕ್ರಮಕ್ಕೆ ಎಂಡಿಎ ಮುಂದಾಗಿದ್ದು ಸಂಬಂಧಿಸಿದ ವರ್ತಕರಿಗೆ ನೋಟಿಸ್ ನೀಡುತ್ತಿದ್ದೇವೆ. ಎಲ್ಲ ಮಳಿಗೆಗಳನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗುವುದು </blockquote><span class="attribution">ಕೆ.ಆರ್. ರಕ್ಷಿತ್ ಎಂಡಿಎ ಆಯುಕ್ತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>