ನಂಜನಗೂಡು ತಾಲ್ಲೂಕಿನ ಮುದ್ದಹಳ್ಳಿಯ ಗ್ರಾಮದ ನಿಂಗಣ್ಣ, ಅವರ ಪತ್ನಿ ನಾಗಮ್ಮ ಮತ್ತು ಅವರ ಪುತ್ರ ಎಂ.ಎನ್.ಪ್ರಸಾದ ಶಿಕ್ಷೆಗೆ ಗುರಿಯಾದವರು. ಇವರು ಇದೇ ಗ್ರಾಮದ ಮಹೇಶ್ ಎಂಬುವವರ ಪತ್ನಿ ಮಂಜುಳಾ ಅವರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಹಂತಪ್ಪ ವಾದ ಮಂಡಿಸಿದ್ದರು.