ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಗ್ರಾಮದ ಬಳಿ ಗುರುವಾರ ಒಂದೆಡೆ ಸಂಭ್ರಮ, ಮತ್ತೊಂದೆಡೆ ಭಾವುಕ ವಾತಾವರಣ ಕಂಡು ಬಂತು.
ಗಜಪಯಣಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ವೇಳೆ, ಕಾಡಿನ ಪ್ರಶಾಂತ ವಾತಾವರಣ ಬಿಟ್ಟು ಆನೆಗಳು ಹೊರಟವು ಎಂಬ ಬೇಸರ ಒಂದೆಡೆಯಾದರೆ; ಆಡಂಬರದ ನಗರದತ್ತ ಅವುಗಳ ಪ್ರಯಾಣದ ಬಗೆಗಿನ ಕುತೂಹಲವೂ ಕಾಣುತ್ತಿತ್ತು.
ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ಸೇರಿದಂತೆ ಆರು ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ನಾಹಡಬ್ಬ ದಸರಾ ಮಹೋತ್ಸವದ ಚಟುವಟಿಕೆಗಳಿಗೆ ಮುನ್ನುಡಿ ಬರೆಯಲಾಯಿತು. ಅರಮನೆ ಪುರೋಹಿತ ಪ್ರಹ್ಲಾದ್ ರಾವ್ ಪೂಜಾ ಕೈಂಕರ್ಯ ನೆರವೇರಿಸಿ ಕೊಟ್ಟರು.