‘ಒಟ್ಟು 290 ಕಾರ್ಯಕ್ರಮಗಳಲ್ಲಿ ಶೇ.25ರಷ್ಟನ್ನು ಸ್ಥಳೀಯ ಕಲಾವಿದರಿಗೆ ನೀಡಲಾಗಿದೆ. ಕರ್ನಾಟಕದ ಶ್ರೀಮಂತಿಕೆಗೆ ಕೋಡು ಮೂಡಿಸಿರುವ ಜನಪದ ಸಂಗೀತ, ಪ್ರದರ್ಶನ ಕಲೆಗಳು, ಸಂಗೀತ, ನೃತ್ಯ, ಯಕ್ಷಗಾನ, ರಂಗಭೂಮಿ, ತೊಗಲು ಗೊಂಬೆಯಾಟ, ವಾದ್ಯ ಸಂಗೀತ ಮುಂತಾದ ಕಲಾಪ್ರಕಾರಗಳ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ಬಾರಿಗೆ ಮೈಸೂರು ಕಾರಾಗೃಹದ ಕಲಾವಿದರಿಂದ ದೇಶಭಕ್ತಿಗೀತ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂಗವಿಕಲ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೂಡ ಆದ್ಯತೆ ನೀಡಲಾಗಿದೆ’ ಎಂದು ಹೇಳಿದ್ದಾರೆ.