<p><strong>ಮೈಸೂರು:</strong> ಜಿಲ್ಲಾ ಪೊಲೀಸರು ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಶುಕ್ರವಾರ ಹತ್ತುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ನೇತೃತ್ವದಲ್ಲಿ ಸುಮಾರು 200ಕ್ಕೂ ಅಧಿಕ ಪೊಲೀಸರು ಚಾಮುಂಡಿಬೆಟ್ಟದ ಸಾವಿರ ಮೆಟ್ಟಲನ್ನು ಹತ್ತಿದರು.</p>.<p>ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ರಿಷ್ಯಂತ್, 'ಪೊಲೀಸರ ಕೆಲಸದ ಏಕತಾನತೆ ಮುರಿಯಲು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಹುತೇಕ ಮಂದಿ ಪೊಲೀಸರು ಅತ್ಯುತ್ಸಾಹದಿಂದ ಬೆಟ್ಟ ಹತ್ತಿದ್ದಾರೆ. ಒತ್ತಡದಿಂದ ಮುಕ್ತರಾಗಲು ಈ ಬಗೆಯ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು' ಎಂದು ತಿಳಿಸಿದರು.</p>.<p>ಪೊಲೀಸರಲ್ಲಿ ಹಲವು ಮಂದಿ ಸುಸ್ತಾಗಿ ಅಲ್ಲಲ್ಲಿ ವಿಶ್ರಮಿಸಿಕೊಂಡು ಬೆಟ್ಟ ಹತ್ತಿದರು. ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿತ್ತು. 9 ಮಂದಿಯ ತಂಡವನ್ನಾಗಿ ವಿಭಜಿಸಿಕೊಂಡು ಬೆಟ್ಟ ಹತ್ತಲಾಯಿತು. ಬೆಳಿಗ್ಗೆ 6.30ಕ್ಕೆ ಆರಂಭವಾದ ಚಾರಣ 7.45ಕ್ಕೆ ಮುಕ್ತಾಯಗೊಂಡಿತು. ತಮ್ಮ ಸಿಬ್ಬಂದಿಯೊಂದಿಗೆ ಅತಿಥಿ ಗೃಹದಲ್ಲಿ ಉಪಾಹಾರ ಸೇವಿಸಿದ ರಿಷ್ಯಂತ್ ಅವರುಅಹವಾಲು ಆಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಜಿಲ್ಲಾ ಪೊಲೀಸರು ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಶುಕ್ರವಾರ ಹತ್ತುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದರು.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ನೇತೃತ್ವದಲ್ಲಿ ಸುಮಾರು 200ಕ್ಕೂ ಅಧಿಕ ಪೊಲೀಸರು ಚಾಮುಂಡಿಬೆಟ್ಟದ ಸಾವಿರ ಮೆಟ್ಟಲನ್ನು ಹತ್ತಿದರು.</p>.<p>ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ರಿಷ್ಯಂತ್, 'ಪೊಲೀಸರ ಕೆಲಸದ ಏಕತಾನತೆ ಮುರಿಯಲು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಹುತೇಕ ಮಂದಿ ಪೊಲೀಸರು ಅತ್ಯುತ್ಸಾಹದಿಂದ ಬೆಟ್ಟ ಹತ್ತಿದ್ದಾರೆ. ಒತ್ತಡದಿಂದ ಮುಕ್ತರಾಗಲು ಈ ಬಗೆಯ ವಿಭಿನ್ನ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು' ಎಂದು ತಿಳಿಸಿದರು.</p>.<p>ಪೊಲೀಸರಲ್ಲಿ ಹಲವು ಮಂದಿ ಸುಸ್ತಾಗಿ ಅಲ್ಲಲ್ಲಿ ವಿಶ್ರಮಿಸಿಕೊಂಡು ಬೆಟ್ಟ ಹತ್ತಿದರು. ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿತ್ತು. 9 ಮಂದಿಯ ತಂಡವನ್ನಾಗಿ ವಿಭಜಿಸಿಕೊಂಡು ಬೆಟ್ಟ ಹತ್ತಲಾಯಿತು. ಬೆಳಿಗ್ಗೆ 6.30ಕ್ಕೆ ಆರಂಭವಾದ ಚಾರಣ 7.45ಕ್ಕೆ ಮುಕ್ತಾಯಗೊಂಡಿತು. ತಮ್ಮ ಸಿಬ್ಬಂದಿಯೊಂದಿಗೆ ಅತಿಥಿ ಗೃಹದಲ್ಲಿ ಉಪಾಹಾರ ಸೇವಿಸಿದ ರಿಷ್ಯಂತ್ ಅವರುಅಹವಾಲು ಆಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>