‘ನಾವು ದ್ವಂದ್ವ ಹಾಗೂ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದು, ನಂಬಿಕೆಗಳೇ ನಮ್ಮನ್ನು ನುಂಗುತ್ತಿವೆ. ಸ್ವಾತಂತ್ರ್ಯಕ್ಕಾಗಿ ಗಾಂಧಿ ರೂಪಿಸಿದ್ದ ಸತ್ಯ, ಅಹಿಂಸೆ, ಸತ್ಯಾಗ್ರಹದಂಥ ಅಸ್ತ್ರಗಳನ್ನೇ ಇಂದು ಅವಮಾನಿಸುತ್ತಿದ್ದು, ಅದರ ವಿರುದ್ಧವೇ ಪ್ರಶ್ನೆ ಏಳುತ್ತಿವೆ. ಇವತ್ತಿನ ಯುವಕರಿಗೆ ಯಾವ ಆದರ್ಶ ಕಟ್ಟಿಕೊಡಬೇಕಿದೆ? ಇಂಥ ಸಮಯದಲ್ಲಿ ಕವಿ ಎಲ್ಲಿ ನಿಲ್ಲಬೇಕು, ಯಾವ ವಿಷಯ ಕುರಿತು ಬರೆಯಬೇಕು, ಏನು ಮಾತನಾಡಬೇಕು ಎಂಬುದು ಸವಾಲಾಗಿದೆ’ ಎಂದರು.